ಇದಾದ ಬಳಿಕ ಒಟ್ಟಾರೆ ಘಟನೆಯ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ರಮಾದೇವಿ ಅವರು, ‘ಮಹಿಳೆಯರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡುವುದು ಆಜಂ ಖಾನ್ ಅವರಿಗೆ ಹವ್ಯಾಸವಾಗಿದೆ. ಸದನದ ಹೊರಗೆ ಅನೇಕ ಬಾರಿ ಅವರು ಇಂಥ ಮಾತುಗಳನ್ನಾಡಿ
ದ್ದಾರೆ. ಈಗ ಸದನದೊಳಗೂ ಆಡಿದ್ದಾರೆ. ಅವರ ಹೇಳಿಕೆಯು ನನಗಷ್ಟೇ ಅಲ್ಲ ಇಡೀ ದೇಶಕ್ಕೆ ನೋವನ್ನು ಉಂಟುಮಾಡಿದೆ. ಇಂಥ ಮಾತುಗಳನ್ನು ಕೇಳಲು ನಾನು ಲೋಕಸಭೆಗೆ ಬಂದಿಲ್ಲ. ಇಂಥ ವರ್ತನೆಯನ್ನು ಅವರು ಬಿಟ್ಟುಬಿಡಬೇಕು’ ಎಂದರು.