ವಾರಾಣಸಿ ಕ್ಷೇತ್ರದಿಂದ ಮಾಯಾವತಿ ಅವರು ತಮ್ಮ ಆಪ್ತ, ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಸತೀಶ್ ಚಂದ್ರ ಮಿಶ್ರಾ ಅವರಿಗೆ ಟಿಕೆಟ್ ನೀಡಿದರೆ ಅವರಿಗೆಬೆಂಬಲ ನೀಡುವುದಾಗಿಯೂ ರಾವಣ ತಿಳಿಸಿದ್ದಾರೆ. ಸತೀಶ್ ಚಂದ್ರ ಅವರನ್ನು ಕಣಕ್ಕಿಳಿಸಿದರೆ, ಮೇಲ್ವರ್ಗದ ಮತಗಳನ್ನೂ ಪಡೆಯಬಹುದು ಎಂದು ರಾವಣ ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಸತೀಶ್ ಚಂದ್ರ ಅವರನ್ನು ಟೀಕೆ ಮಾಡಿದ್ದ ರಾವಣ, ‘ಮಾಯಾವತಿ ಅವರನ್ನು ದಿಕ್ಕು ತಪ್ಪಿಸಿ ಸತೀಶ್ ಚಂದ್ರ ಅವರು ದಲಿತರನ್ನು ತುಳಿಯುತ್ತಿದ್ದಾರೆ,’ ಎಂದು ಆರೋಪಿಸಿದ್ದರು.