ವಿವಿಧ ಪಕ್ಷಗಳ ಸದಸ್ಯರಾದ ಸುಪ್ರಿಯಾ ಸುಳೆ, ಪ್ರೊ.ಸೌಗತ್ ರಾಯ್, ನಿಶಿಕಾಂತ್ ದುಬೆ, ಎನ್.ಕೆ. ಪ್ರೇಮಚಂದ್ರನ್, ಅರವಿಂದ ಸಾವಂತ್, ಎನ್.ರೆಡ್ಡೆಪ್ಪ, ಸಪ್ತಗಿರಿ ಶಂಕರ್, ಕೆ.ಸುರೇಶ್, ರವೀಂದ್ರ ಕುಶ್ವಾಹಾ, ದಾನಿಶ್ ಅಲಿ, ಸುರೇಶಕುಮಾರ್ ಕಶ್ಯಪ್, ಅನುಭವ್ ಮೊಹಾಂತಿ ಮತ್ತಿತರರು ಮಸೂದೆ ಮೇಲಿನ ಚರ್ಚೆಯ ವೇಳೆ ಮಾತನಾಡಿ, ವಿವಿಧ ರಾಜ್ಯಗಳಲ್ಲಿ ಬೇರೆ ಹೆಸರುಗಳಿಂದ ಕರೆಯಲಾಗುವ ಇದೇ ಸಮುದಾಯದವರನ್ನೂ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೋರಿದರು.