<p><strong>ಕೋಲ್ಕತ್ತ: </strong>ಪಶ್ಚಿಮ ಬಂಗಾಳದ ಘಟಾಲ್ ಲೋಕಸಭಾ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತೆಯರು ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್ ಅವರನ್ನು ಮತಗಟ್ಟೆಯಿಂದ ಹೊರದಬ್ಬಿದ ಘಟನೆ ಭಾನುವಾರ ವರದಿಯಾಗಿದೆ.</p>.<p>ಘಟಾಲ್ ಸೇರಿದಂತೆ 8 ಲೋಕಸಭಾ ಕ್ಷೇತ್ರಗಳಲ್ಲಿ 6ನೇ ಹಂತದ ಮತದಾನ ಭಾನುವಾರ ನಡೆದಿದೆ.</p>.<p>ಒಂದು ಕಾಲದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯವರ ಆಪ್ತೆ, ಮಾಜಿ ಐಪಿಎಸ್ ಆಧಿಕಾರಿಯಾಗಿದ್ದ ಭಾರತಿ ಘೋಷ್, ಪಶ್ಚಿಮ ಮೇದಿನಿಪುರ್ ಜಿಲ್ಲೆಯ ಚಂದ್ಖಲಿ ಪ್ರದೇಶದಲ್ಲಿರುವ ಮತಗಟ್ಟೆಯಲ್ಲಿ ತಮ್ಮ ಮತಗಟ್ಟೆ ಏಜೆಂಟ್ಗೆ ಪ್ರವೇಶ ಅನುಮತಿ ನೀಡಿಲ್ಲ ಎಂದು ಆರೋಪಿಸಿದ್ದಾರೆ.</p>.<p>ನಾನು ಅಭ್ಯರ್ಥಿ, ನನ್ನನ್ನು ಹಿಡಿದು ಹೊರದಬ್ಬಲಾಯಿತು.ನನ್ನ ಮೇಲೆ ದೌರ್ಜನ್ಯವೆಸಗಿದ ಮತ್ತು ಮತಗಟ್ಟೆ ಏಜೆಂಟ್ಗೆ ಪ್ರವೇಶ ನಿರಾಕರಿಸಿದ ವ್ಯಕ್ತಿಗಳನ್ನು ಬಂಧಿಸಿ ಎಂದು ಘೋಷ್ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ.</p>.<p>ಟಿಎಂಸಿ ಬೆಂಬಲಿಗರು ನನ್ನನ್ನು ಹೊರ ನೂಕಿದರು. ಕೇಶ್ಪುರ್ ಪ್ರದೇಶದಲ್ಲಿ ಯಾವುದೇ ಮತಗಟ್ಟೆ ಏಜೆಂಟ್ರನ್ನು ಅವರು ಒಳಬಿಡುವುದಿಲ್ಲ, ಈ ಮಹಿಳೆಯರನ್ನೆಲ್ಲಾ ಟಿಎಂಸಿ ನಿಯೋಜಿಸಿದೆ.ನಾನು ಚುನಾನಣಾ ಆಯೋಗಕ್ಕೆ ಲಿಖಿತ ದೂರು ಸಲ್ಲಿಸಲಿದ್ದೇನೆ.<br />ಇಲ್ಲಿನ ಪೋಲಿಸರು ಮೂಕಪ್ರೇಕ್ಷಕರಂತೆ ನಿಂತಿದ್ದರು. ಅವರು ಮಹಿಳಾ ಪೊಲೀಸರನ್ನೂ ಕರೆಯಲಿಲ್ಲ ಎಂದು ಘೋಷ್ ಆರೋಪಿಸಿದ್ದಾರೆ.</p>.<p>ಘೋಷ್ ಅವರು ಮತಗಟ್ಟೆಗೆ ಪ್ರವೇಶಿಸದಂತೆ ಮಹಿಳೆಯರು ತಡೆದಿದ್ದಾರೆ. ಆದರೆ ಆ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿ ಅಲ್ಲಿ ಇಲ್ಲದೇ ಇರುವುದರಿಂದ ನಾವು ಮಧ್ಯಪ್ರವೇಶಿಸಿಲ್ಲ.ನಾವು ಅಸಹಾಯಕರು ಎಂದು ಮತಗಟ್ಟೆಯಲ್ಲಿ ನಿಯೋಜಿಸಿದ್ದ ಸಿಆರ್ಪಿಎಫ್ ಪಡೆಯ ಸಿಬ್ಬಂದಿಯೊಬ್ಬರು ಸುದ್ದಿವಾಹಿನಿಯಲ್ಲಿ ಹೇಳಿದ್ದಾರೆ.</p>.<p>ಮತಗಟ್ಟೆ ಪ್ರವೇಶಿಸಲು 45 ನಿಮಿಷಗಳ ಕಾಲ ಘೋಷ್ ಪ್ರಯತ್ನಿಸಿದ್ದಾರೆ. ಆದರೆ ಅಲ್ಲಿದ್ದ ಮಹಿಳೆಯರು ಅವರನ್ನು ಒಳಗೆ ಬಿಡಲಿಲ್ಲ, ಇದೆಲ್ಲಾ ಟಿಎಂಸಿಯ ಕುತಂತ್ರ ಎಂದು ಆರೋಪಿಸಿ ಘೋಷ್ ಅಲ್ಲಿಂದ ತೆರಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.</p>.<p><strong>ಭಾರತಿ ಮೇಲೆ ಹಲ್ಲೆ, ಕಾರಿಗೆ ಹಾನಿ</strong></p>.<p>ಪಶ್ಚಿಮ ಬಂಗಾಳದ ಕೇಶ್ಪುರ್ನಲ್ಲಿ ಭಾನುವಾರ ಬೆಳಗ್ಗೆ ಟಿಎಂಲಿ ಕಾರ್ಯಕರ್ತರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಭಾರತಿ ಘೋಷ್ ಆರೋಪಿಸಿದ್ದಾರೆ.<br />ಭಾರತಿ ಅವರ ವಿರುದ್ದಟಿಎಂಸಿ ಕಾರ್ಯಕರ್ತರು ಪ್ರತಿಭಟಿಸಿದ್ದು, ವಾಹನಕ್ಕೆ ಹಾನಿ ಮಾಡಿದ್ದಾರೆ.ಈ ಸಂಘರ್ಷದಲ್ಲಿ ಭಾರತಿ ಅವರ ಭದ್ರತಾ ಸಿಬ್ಬಂದಿಯ ತಲೆಗೆ ಗಾಯವಾಗಿದೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ: </strong>ಪಶ್ಚಿಮ ಬಂಗಾಳದ ಘಟಾಲ್ ಲೋಕಸಭಾ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತೆಯರು ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್ ಅವರನ್ನು ಮತಗಟ್ಟೆಯಿಂದ ಹೊರದಬ್ಬಿದ ಘಟನೆ ಭಾನುವಾರ ವರದಿಯಾಗಿದೆ.</p>.<p>ಘಟಾಲ್ ಸೇರಿದಂತೆ 8 ಲೋಕಸಭಾ ಕ್ಷೇತ್ರಗಳಲ್ಲಿ 6ನೇ ಹಂತದ ಮತದಾನ ಭಾನುವಾರ ನಡೆದಿದೆ.</p>.<p>ಒಂದು ಕಾಲದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯವರ ಆಪ್ತೆ, ಮಾಜಿ ಐಪಿಎಸ್ ಆಧಿಕಾರಿಯಾಗಿದ್ದ ಭಾರತಿ ಘೋಷ್, ಪಶ್ಚಿಮ ಮೇದಿನಿಪುರ್ ಜಿಲ್ಲೆಯ ಚಂದ್ಖಲಿ ಪ್ರದೇಶದಲ್ಲಿರುವ ಮತಗಟ್ಟೆಯಲ್ಲಿ ತಮ್ಮ ಮತಗಟ್ಟೆ ಏಜೆಂಟ್ಗೆ ಪ್ರವೇಶ ಅನುಮತಿ ನೀಡಿಲ್ಲ ಎಂದು ಆರೋಪಿಸಿದ್ದಾರೆ.</p>.<p>ನಾನು ಅಭ್ಯರ್ಥಿ, ನನ್ನನ್ನು ಹಿಡಿದು ಹೊರದಬ್ಬಲಾಯಿತು.ನನ್ನ ಮೇಲೆ ದೌರ್ಜನ್ಯವೆಸಗಿದ ಮತ್ತು ಮತಗಟ್ಟೆ ಏಜೆಂಟ್ಗೆ ಪ್ರವೇಶ ನಿರಾಕರಿಸಿದ ವ್ಯಕ್ತಿಗಳನ್ನು ಬಂಧಿಸಿ ಎಂದು ಘೋಷ್ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ.</p>.<p>ಟಿಎಂಸಿ ಬೆಂಬಲಿಗರು ನನ್ನನ್ನು ಹೊರ ನೂಕಿದರು. ಕೇಶ್ಪುರ್ ಪ್ರದೇಶದಲ್ಲಿ ಯಾವುದೇ ಮತಗಟ್ಟೆ ಏಜೆಂಟ್ರನ್ನು ಅವರು ಒಳಬಿಡುವುದಿಲ್ಲ, ಈ ಮಹಿಳೆಯರನ್ನೆಲ್ಲಾ ಟಿಎಂಸಿ ನಿಯೋಜಿಸಿದೆ.ನಾನು ಚುನಾನಣಾ ಆಯೋಗಕ್ಕೆ ಲಿಖಿತ ದೂರು ಸಲ್ಲಿಸಲಿದ್ದೇನೆ.<br />ಇಲ್ಲಿನ ಪೋಲಿಸರು ಮೂಕಪ್ರೇಕ್ಷಕರಂತೆ ನಿಂತಿದ್ದರು. ಅವರು ಮಹಿಳಾ ಪೊಲೀಸರನ್ನೂ ಕರೆಯಲಿಲ್ಲ ಎಂದು ಘೋಷ್ ಆರೋಪಿಸಿದ್ದಾರೆ.</p>.<p>ಘೋಷ್ ಅವರು ಮತಗಟ್ಟೆಗೆ ಪ್ರವೇಶಿಸದಂತೆ ಮಹಿಳೆಯರು ತಡೆದಿದ್ದಾರೆ. ಆದರೆ ಆ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿ ಅಲ್ಲಿ ಇಲ್ಲದೇ ಇರುವುದರಿಂದ ನಾವು ಮಧ್ಯಪ್ರವೇಶಿಸಿಲ್ಲ.ನಾವು ಅಸಹಾಯಕರು ಎಂದು ಮತಗಟ್ಟೆಯಲ್ಲಿ ನಿಯೋಜಿಸಿದ್ದ ಸಿಆರ್ಪಿಎಫ್ ಪಡೆಯ ಸಿಬ್ಬಂದಿಯೊಬ್ಬರು ಸುದ್ದಿವಾಹಿನಿಯಲ್ಲಿ ಹೇಳಿದ್ದಾರೆ.</p>.<p>ಮತಗಟ್ಟೆ ಪ್ರವೇಶಿಸಲು 45 ನಿಮಿಷಗಳ ಕಾಲ ಘೋಷ್ ಪ್ರಯತ್ನಿಸಿದ್ದಾರೆ. ಆದರೆ ಅಲ್ಲಿದ್ದ ಮಹಿಳೆಯರು ಅವರನ್ನು ಒಳಗೆ ಬಿಡಲಿಲ್ಲ, ಇದೆಲ್ಲಾ ಟಿಎಂಸಿಯ ಕುತಂತ್ರ ಎಂದು ಆರೋಪಿಸಿ ಘೋಷ್ ಅಲ್ಲಿಂದ ತೆರಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.</p>.<p><strong>ಭಾರತಿ ಮೇಲೆ ಹಲ್ಲೆ, ಕಾರಿಗೆ ಹಾನಿ</strong></p>.<p>ಪಶ್ಚಿಮ ಬಂಗಾಳದ ಕೇಶ್ಪುರ್ನಲ್ಲಿ ಭಾನುವಾರ ಬೆಳಗ್ಗೆ ಟಿಎಂಲಿ ಕಾರ್ಯಕರ್ತರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಭಾರತಿ ಘೋಷ್ ಆರೋಪಿಸಿದ್ದಾರೆ.<br />ಭಾರತಿ ಅವರ ವಿರುದ್ದಟಿಎಂಸಿ ಕಾರ್ಯಕರ್ತರು ಪ್ರತಿಭಟಿಸಿದ್ದು, ವಾಹನಕ್ಕೆ ಹಾನಿ ಮಾಡಿದ್ದಾರೆ.ಈ ಸಂಘರ್ಷದಲ್ಲಿ ಭಾರತಿ ಅವರ ಭದ್ರತಾ ಸಿಬ್ಬಂದಿಯ ತಲೆಗೆ ಗಾಯವಾಗಿದೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>