ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ | ಮಹಿಳೆಯರ ಶ್ರೇಯೋಭಿವೃಧ್ಧಿಗೆ ‘ನಾರಿ ಟು ನಾರಾಯಣಿ‘

Last Updated 5 ಜುಲೈ 2019, 10:41 IST
ಅಕ್ಷರ ಗಾತ್ರ

ನವದೆಹಲಿ:ಮಹಿಳೆಯರ ಶ್ರೇಯೋಭಿವೃದ್ಧಿಗೆ ‘ನಾರಿ ಟು ನಾರಾಯಣಿ’ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದರು.

ಈ ಯೋಜನೆ ಮೂಲಕ ಮಹಿಳೆಯರ ಹಿತಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಭಾರತೀಯ ಮಹಿಳೆಯರ ಅಭಿವೃದ್ಧಿಗೆ ವಿಶ್ವದಲ್ಲಿ ಮಹಿಳೆ ಏಳ್ಗೆಯಾಗದೇ ವಿಶ್ವದ ಅಭಿವೃದ್ಧಿಯಾಗದು ಎಂಬ ವಿವೇಕಾನಂದರ ವಾಣಿಯನ್ನು ಉಲ್ಲೇಖೀಸಿದ ನಿರ್ಮಲಾ.

* ಗ್ರಾಮೀಣ ಅರ್ಥ ವ್ಯವಸ್ಥೆಯಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆ ಹಾಗೂ ಕೊಡುಗೆ ಅನನ್ಯ.

* 72 ಮಹಿಳೆಯರು ಸಂಸತ್‌ನಲ್ಲಿದ್ದೇವೆ. ಮಹಿಯರ ಹಿತಕ್ಕಾಗಿ ಕ್ರಮ

* ಲಿಂಗ ತಾರತಮ್ಯ ನಿವಾರಣೆಗೆ ಕ್ರಮ

ಬಜೆಟ್‌ನ ಪ್ರಮುಖ ಅಂಶಗಳು

* ಅನಿವಾಸಿ ಭಾರತಿಯರು ಸೇರಿದಂತೆ ವಿದೇಶಿಯರೂ ವಿಶ್ವ ಯೋಗ ದಿನಲ್ಲಿ ಪಾಲ್ಗೊಂಡಿದ್ದಾರೆ.‌

* ಅನಿವಾಸಿ ಭಾರತೀಯರಿಗೆ ಆಧಾರ್‌ ಆಧಾರಿತ ಪಾಸ್‌ಪೋರ್ಟ್‌ ನೀಡಲು ನಿರ್ಧಾರ

* ಸಬ್‌ ಅರ್ಬನ್‌ ರೈಲು ಯೋಜನೆಗೆ ಒತ್ತು

* ಹೊಸರಾಷ್ಟ್ರೀಯ ಶಿಕ್ಷಣ ನೀತಿ

* ಶಾಲೆ ಮತ್ತು ಉನ್ನತ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆಗೆ ಹೊಸ ನೀತಿ ತರಲಾಗುತ್ತಿದೆ. ಅದರಡಿ ಸಂಶೋಧನೆಗೆ ಒತ್ತು ನೀಡಲಾಗುವುದು. ಅದಕ್ಕೆ ಶಕ್ತಿ ತುಂಬಲಾಗುವುದು.

* ಮೂಲ ವಿಜ್ಞಾನಕ್ಕೆ ಒತ್ತು.

* 2019 –20ಸಾಲಿಗೆ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ₹4 ಸಾವಿರ ಕೋಟಿ ಮೀಸಲು

* 2017ರಲ್ಲಿ ಆರಂಭವಾದ ಖೇಲೋ ಇಂಡಿಯಾ ಯೋಜನೆ ಮೂಲಕ ಕ್ರೀಡೆಗೆ ಪ್ರೋತ್ಸಾಹಕ್ಕೆ ಕ್ರಮ

* ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಸ್ಥಾಪನೆಗೆ ನಿರ್ಧಾರ

* ಬಸವೇಶ್ವರರ ತತ್ವ ದಾಸೋಹ ಹಾಗೂ ಕಾಯಕವೇ ಕೈಲಾಸ ವಚನ ಉಲ್ಲೇಖಿಸಿದ ನಿರ್ಮಲಾ, ಆ ತತ್ವದ ಅಡಿ ಕೌಶಲ ಅಭಿವೃದ್ಧಿ ಕಾರ್ಯಕ್ರಮದ ಮೂಲ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಕೋಡ್ಸ್‌ ಯೋಜನೆಗೆ ಕ್ರಮ ಘೋಷಿಸಿದರು.

* ಸ್ಮಾರ್ಟ್ ಆಫ್‌ ಯೋಜನೆಗಳಿಗಾಗಿ ದೂರದರ್ಶನ ಸಹಬಾಗಿತ್ವದಲ್ಲಿ ನೂತನ ವಾಹಿನಿ ಆರಂಭಕ್ಕೆ ಕ್ರಮ

* ರೋಬೋಟಿಕ್‌ ತಂತ್ರಜ್ಞಾನ ಅಭಿವೃದ್ಧಿಗೆ ಆದ್ಯತೆ

* ಸ್ಟ್ಯಾಂಡ್‌ ಅಪ್‌ ಯೋಜನೆಗಳಲ್ಲಿ 2 ವರ್ಷದಲ್ಲಿ 300 ಉದ್ಯಮಗಳ ಸ್ಥಾಪನೆ

* ಜನರ ಗುಣಮಟ್ಟದ ಹಾಗೂ ಮಲೀನ ಮುಕ್ತ ಜೀವನಕ್ಕೆ ಒತ್ತು.

* ಎಲ್‌ಇಡಿಬಲ್ಬ್‌ಗಳ ಬಳಕೆಗೆ ಒತ್ತು

* ಸೋಲಾರ್‌ ಸ್ಟೌ ಮತ್ತು ಬ್ಯಾಟರಿ ಬಳಕೆಗೆ ಒತ್ತು

* ರೈಲು ನಿಲ್ದಾಣಗಳ ಅಭಿವೃದ್ಧಿಗೆ ಕ್ರಮ

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT