ಶಬರಿಮಲೆ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಪಿ.ಪದ್ಮಕುಮಾರ್ ಅವರು ರೆಹಾನಾ ವಿರುದ್ಧ ಪತ್ತನಂತಿಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು ಎಂದು ಡಿಸಿಪಿ ಕಚೇರಿಯ ಅಧಿಕಾರಿಗಳು ಹೇಳಿದ್ದಾರೆ.
ಶಬರಿಮಲೆಗೆ ಪ್ರವೇಶಿಸಲು ಯತ್ನಿಸಿದ 6 ಮಂದಿ ಮಹಿಳೆಯರಲ್ಲಿ ರೆಹಾನಾ ಫಾತಿಮಾ ಕೂಡಾ ಒಬ್ಬರು.ನಡಪಂದಲ್ ವರೆಗೆ ರೆಹಾನಾ ಹೋಗಿದ್ದು ಆಕೆಗೆ ಪೊಲೀಸ್ ರಕ್ಷಣೆ ನೀಡಲಾಗಿತ್ತು, ಅಯ್ಯಪ್ಪ ವೃತಾಧಾರಿಯಂತೆ ಬಟ್ಟೆ ಧರಿಸಿದ್ದ ರೆಹಾನಾ ಇರುಮುಡಿ ಹೊತ್ತು ಶಬರಿಮಲೆಗೆ ತೆರಳಿದ್ದರು. ಈಕೆ 21 ದಿನಗಳ ವೃತಾಚಾರಣೆ ಮಾಡಿ ಶಬರಿಮಲೆಗೆ ತೆರಳಿದ್ದರು ಎಂದು ಆಕೆಯ ಸಂಗಾತಿ ಮನೋಜ್ ಶ್ರೀಧರ್ ಹೇಳಿದ್ದಾರೆ.
ಆದರೆ ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರೆಹಾನಾ ಅಲ್ಲಿಂದ ವಾಪಸ್ ಆಗಿದ್ದರು. ರೆಹಾನಾ ಶಬರಿಮಲೆಗೆ ಪ್ರವೇಶಿಸಲು ಯತ್ನಿಸಿದ್ದಕ್ಕೆ ಕೆಲವರು ಆಕೆಯ ಮನೆಯ ಮೇಲೆ ಕಲ್ಲು ತೂರಾಟ ಮಾಡಿದ್ದರು.