ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಮ ವರ್ಗ, ರೈತ, ಕಾರ್ಮಿಕರಿಗೆ ಬಜೆಟ್‌ನಲ್ಲಿ ಏನೇನಿದೆ? ಇಲ್ಲಿದೆ ಮಾಹಿತಿ

ಆದಾಯ ತೆರಿಗೆ ವಿನಾಯಿತಿ ಮಿತಿ ವಿಸ್ತರಣೆ * ಸಣ್ಣ, ಮಧ್ಯಮ ರೈತರಿಗೆ ವಾರ್ಷಿಕ ₹6,000 ಆದಾಯ ಬೆಂಬಲ
Last Updated 1 ಫೆಬ್ರುವರಿ 2019, 13:00 IST
ಅಕ್ಷರ ಗಾತ್ರ

ನವದೆಹಲಿ:ಮಧ್ಯಮ ವರ್ಗಕ್ಕಾಗಿ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್‌ನಲ್ಲಿ ಹಲವು ಕ್ರಮಗಳನ್ನು ಘೋಷಣೆ ಮಾಡಿದೆ. ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಮಧ್ಯಮ ವರ್ಗದವರ ಓಲೈಕೆಗೆ ಯತ್ನಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ₹5 ಲಕ್ಷಕ್ಕೆ ವಿಸ್ತರಣೆ ಮಾಡಿರುವುದು, ರೈತರಿಗೆ ವಾರ್ಷಿಕ ₹6,000 ಆದಾಯ ಬೆಂಬಲ ನೀಡುವುದು, ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ... ಹೀಗೆ ಮಧ್ಯಮ ವರ್ಗ, ರೈತರು, ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಬಜೆಟ್‌ನಲ್ಲಿ ಘೋಷಿಸಲಾಗಿರುವ ಪ್ರಮುಖ ಯೋಜನೆಗಳ ಮಾಹಿತಿ ಇಲ್ಲಿದೆ.

ಆದಾಯ ತೆರಿಗೆದಾರರಿಗೆ ನೆಮ್ಮದಿ

* ಇನ್ನು ₹5 ಲಕ್ಷದವರೆಗೆ ಆದಾಯ ಗಳಿಸುವವರುಆದಾಯ ತೆರಿಗೆ ಕಟ್ಟಬೇಕಿಲ್ಲ

* ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ ₹40,000ದಿಂದ ₹50,000ಕ್ಕೆ ವಿಸ್ತರಣೆ

ಹೂಡಿಕೆ ಮೇಲಿನ ತೆರಿಗೆ ವಿನಾಯಿತಿ:ಪಿಎಫ್‌ ಮತ್ತು ಇತರ ಮಾನ್ಯಮಾಡಲಾದ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವವರು ₹6.5 ಲಕ್ಷದವರೆಗೆ ಆದಾಯವಿದ್ದರೂ ತೆರಿಗೆ ವಿನಾಯಿತಿ ಪಡೆಯಬಹುದು

* ಮನೆ ಬಾಡಿಗೆ ಮೇಲಿನ ವಿನಾಯಿತಿ ಮಿತಿ ₹1.8 ಲಕ್ಷದಿಂದ ₹2.4 ಲಕ್ಷಕ್ಕೆ ವಿಸ್ತರಣೆ

* ಅಂಚೆ ಕಚೇರಿಗಳಲ್ಲಿ ಮತ್ತು ಬ್ಯಾಂಕುಗಳಲ್ಲಿಟ್ಟಿರುವ ಠೇವಣಿಯಿಂದ ಬರುವ ₹40,000 ವರೆಗಿನ ಬಡ್ಡಿಗೆ ಆದಾಯ ತೆರಿಗೆ ಮುಕ್ತ

* ಸೆಕ್ಷನ್ 54ರ ಅನ್ವಯ ಬಂಡವಾಳ ಲಾಭದ ಮೇಲಿನ ತೆರಿಗೆ ವಿನಾಯಿತಿಯನ್ನು ₹2 ಕೋಟಿವರೆಗೂ ಪಡೆಯಬಹುದು

*2 ಮನೆಗಳನ್ನು ಹೊಂದಿರುವವರೂ ಬಂಡವಾಳ ಲಾಭದ ಮೇಲಿನ ವಿನಾಯಿತಿ ಲಾಭ ಪಡೆಯಬಹುದು

ತೆರಿಗೆ ಸುಧಾರಣಾ ಕ್ರಮಗಳು

* ಐಟಿ ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆ 24 ಗಂಟೆಗಳ ಒಳಗೆ ಮುಗಿಯಲಿದ್ದು, ತಕ್ಷಣವೇ ಮರುಪಾವತಿಗೂ ಕ್ರಮ

* ಐಟಿ ರಿಟರ್ನ್ಸ್‌ನ ಮೌಲ್ಯಮಾಪನ ಮತ್ತು ಪರಿಶೀಲನೆಯನ್ನು ಅಧಿಕಾರಿಗಳ ಮಧ್ಯಪ್ರವೇಶವಿಲ್ಲದೇ ನಡೆಸಬಹುದಾದಂತಹ ಎಲೆಕ್ಟ್ರಾನಿಕ್ ವ್ಯವಸ್ಥೆಮುಂದಿನ ಎರಡು ವರ್ಷಗಳಲ್ಲಿ ಜಾರಿ

ರೈತರಿಗೆ ಏನೇನು?

* ಸಣ್ಣ ಮತ್ತು ಮಧ್ಯಮ ರೈತರಿಗೆ ವಾರ್ಷಿಕ ₹6,000 ಆದಾಯ ಬೆಂಬಲ, 2 ಹೆಕ್ಟೇರ್‌ವರೆಗೆ ಜಮೀನು ಹೊಂದಿರುವ ರೈತರಿಗೆ ಅನ್ವಯ

* ಮೂರು ಕಂತುಗಳಲ್ಲಿಆದಾಯ ಬೆಂಬಲ ವಿತರಣೆಗೆ ವ್ಯವಸ್ಥೆ, 2018ರ ಡಿಸೆಂಬರ್ 1ರಿಂದಲೇ ಪೂರ್ವಾನ್ವಯ

* ನೈಸರ್ಗಿಕ ವಿಕೋಪಗಳಿಂದ ತೊಂದರೆಗೊಳಗಾದ ರೈತರಿಗೆ ಬಡ್ಡಿಯಲ್ಲಿ ಶೇ 2ರ ವಿನಾಯಿತಿ

* ನಿಗದಿತ ಅವಧಿಯೊಳಗೆ ಸಾಲ ಮರುಪಾವತಿ ಮಾಡುವ ರೈತರಿಗೆ ಬಡ್ಡಿಯಲ್ಲಿ ಶೇ 3ರ ವಿನಾಯಿತಿ

* ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆಯುವ ಪಶುಸಂಗೋಪನೆದಾರರಿಗೆ ಮತ್ತು ಮೀನುಗಾರರಿಗೆ ಬಡ್ಡಿಯಲ್ಲಿ ಶೇ 2ರ ವಿನಾಯಿತಿ

* 22 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ ಒಂದೂವರೆ ಪಟ್ಟು ಏರಿಕೆ

ಕಾರ್ಮಿಕರಿಗೆ ಏನೇನು?

*ಅಸಂಘಟಿತ ವಲಯದ ಕಾರ್ಮಿಕರಿಗಾಗಿ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್’ ಪಿಂಚಣಿ ಯೋಜನೆ

* ತಿಂಗಳ ಆದಾಯ ₹15,000 ವರೆಗೆ ಇರುವವರು ಅರ್ಹರು

*ತಿಂಗಳಿಗೆ ₹100 ಪಾವತಿಸುವಮೂಲಕ ಈ ಪಿಂಚಣಿ ಯೋಜನೆಗೆ ಹೆಸರು ನೋಂದಾಯಿಸಬಹುದು. ನಿವೃತ್ತಿ ವಯಸ್ಸಾದ ನಂತರ ತಿಂಗಳಿಗೆ ₹3,000 ಪಿಂಚಣಿ ದೊರೆಯಲಿದೆ.

* ಈ ಯೋಜನೆಗಾಗಿ ಸರ್ಕಾರ ₹500 ಕೋಟಿ ವ್ಯಯಿಸಲಿದೆ.

ಹಳ್ಳಿಗಳಿಗೆ ಕೊಡುಗೆ...

* ನರೇಗಾ ಯೋಜನೆಗೆ ₹60,000 ಕೋಟಿ ಅನುದಾನ

* ಗ್ರಾಮ ಸಡಕ್ ಯೋಜನೆಯಡಿ ಹಳ್ಳಿಗಳಲ್ಲಿ ರಸ್ತೆ ನಿರ್ಮಾಣಕ್ಕೆ ₹19,000 ಕೋಟಿ ಅನುದಾನ

ಇತರ ಸಾಮಾಜಿಕ ಯೋಜನೆಗಳು

* 1 ಲಕ್ಷ ಡಿಜಿಟಲ್ ಗ್ರಾಮಗಳ ನಿರ್ಮಾಣ ಮಾಡಲಿದೆ ಸರ್ಕಾರ

* ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ 8 ಕೋಟಿಯಷ್ಟು ಉಚಿತ ಎಲ್‌ಪಿಜಿ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ 6 ಕೋಟಿ ಸಂಪರ್ಕ ಕಲ್ಪಿಸಲಾಗಿದೆ

*ಆಯುಷ್ಮಾನ್‌ ಭಾರತ್ ಯೋಜನೆ ಮೂಲಕ ಈವರೆಗೆ 50 ಕೋಟಿ ಜನರಿಗೆ ಸಹಾಯ;ಬಡವರ ₹3000 ಕೋಟಿ ಉಳಿತಾಯ

ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಸುಧಾರಣೆ

* 2013–14ನೇ ಸಾಲಿನಲ್ಲಿ ₹6.3 ಲಕ್ಷ ಇದ್ದ ನೇರ ತೆರಿಗೆ ಸಂಗ್ರಹ ಈಗ ₹12 ಲಕ್ಷಕ್ಕೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಮೂಲ ತೆರಿಗೆ ₹3.79 ಕೋಟಿಯಿಂದ ₹6.85 ಕೋಟಿ ತಲುಪಿದೆ

*ತೆರಿಗೆ ಪಾವತಿದಾರರ ಸಂಖ್ಯೆ 3.79 ಕೋಟಿಯಿಂದ 6.85 ಕೋಟಿ ತಲುಪಿದೆ

* ₹5 ಕೋಟಿಗಿಂತ ಕಡಿಮೆ ವಾರ್ಷಿಕ ವಹಿವಾಟು ಹೊಂದಿರುವ ಉದ್ದಿಮೆದಾರರಿಗೆ ತ್ರೈಮಾಸಿಕ ರಿಟರ್ನ್ಸ್ ಸಲ್ಲಿಕೆಗೆ ಅವಕಾಶ

* 2019ರ ಜನವರಿಯಲ್ಲಿ ಜಿಎಸ್‌ಟಿ ಸಂಗ್ರಹ ₹1 ಲಕ್ಷ ಕೋಟಿ ಮೊತ್ತ ದಾಟಿದೆ

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT