<p class="title"><strong>ಮುಂಬೈ:</strong> ‘ಲಡಾಖ್ನ ಗಾಲ್ವನ್ ಕಣಿವೆ ಮೇಲೆ ಸಾರ್ವಭೌಮತೆ ತಮ್ಮದು ಎಂಬ ಚೀನಾ ಹೇಳಿಕೆಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಬೇಕು’ ಎಂದು ಕೇಂದ್ರ ಸರ್ಕಾರವನ್ನು ಶಿವಸೇನಾ ಶನಿವಾರ ಒತ್ತಾಯಿಸಿದೆ.</p>.<p class="title">ಸೋಮವಾರ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಬಲಿಯಾಗಿದ್ದರು.</p>.<p class="title">‘ಗಾಲ್ವನ್ ಕಣಿವೆಯಲ್ಲಿ ಚೀನಾಕ್ಕೆ ಹಕ್ಕು ಇಲ್ಲ. ವಾಸ್ತವ ಗಡಿ ರೇಖೆಯಲ್ಲಿ ನಡೆಸುತ್ತಿರುವ ಚಟುವಟಿಕೆಗಳಿಂದ ಚೀನಾ ಹಿಂದೆ ಸರಿಯಬೇಕು’ ಎಂದು ಭಾರತ ತಿಳಿಸಿತ್ತು. ಆದರೆ ಗಾಲ್ವನ್ ಕಣಿವೆಯು ಚೀನಾದ ಭೂಭಾಗದಲ್ಲಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಶುಕ್ರವಾರ ಹೇಳಿದೆ.</p>.<p class="title">ಭಾರತದ ಭೂಮಿ ಮೇಲೆ ಯಾರೂ ಅತಿಕ್ರಮಣ ಮಾಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರವಷ್ಟೇ ಹೇಳಿಕೆ ನೀಡಿದ್ದರು.</p>.<p class="title">‘ಚೀನಾಕ್ಕೆ ದೇಶದ ಯಾವುದೇ ಭೂ ಭಾಗವನ್ನು ಬಿಟ್ಟುಕೊಡುವುದಿಲ್ಲ ಎಂದು ಪ್ರಧಾನಿ ದೇಶದ ಜನರಿಗೆ ಅಭಯ ನೀಡಿದ್ದಾರೆ. ಅತ್ತ ಚೀನಾ ಮಾತ್ರ ಗಾಲ್ವನ್ ಕಣಿವೆ ತನಗೆ ಸೇರಿದ್ದು ಎಂದು ಪ್ರತಿಪಾದಿಸುತ್ತಿದೆ. ಈ ಬಗ್ಗೆ ಪ್ರಧಾನಿ ಸ್ಪಷ್ಟನೆ ನೀಡಬೇಕು’ ಎಂದು ಸೇನಾ ಮುಖಂಡರಾದ ಪ್ರಿಯಂಕಾ ಚತುರ್ವೇದಿ ಅವರು ಟ್ವಿಟರ್ನಲ್ಲಿ ಆಗ್ರಹಿಸಿದ್ದಾರೆ.</p>.<p class="title">‘ಇದಕ್ಕೆ ಸರ್ಕಾರ ಸ್ಪಷ್ಟನೆ ನೀಡದಿರುವುದನ್ನು ಒಪ್ಪಲಾಗದು. ಗಾಲ್ವನ್ ಕಣಿವೆಯನ್ನು ಚೀನಾಕ್ಕೆ ಕೊಟ್ಟಿದ್ದೇವೆಯೇ ಅಥವಾ ಅಲ್ಲಿಂದ ಚೀನಾ ಸೇನೆಯನ್ನು ಓಡಿಸಿದ್ದೇವೆಯೇ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಇದನ್ನು ದೇಶದ ಜನರಿಗೆ ತಿಳಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಮುಂಬೈ:</strong> ‘ಲಡಾಖ್ನ ಗಾಲ್ವನ್ ಕಣಿವೆ ಮೇಲೆ ಸಾರ್ವಭೌಮತೆ ತಮ್ಮದು ಎಂಬ ಚೀನಾ ಹೇಳಿಕೆಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಬೇಕು’ ಎಂದು ಕೇಂದ್ರ ಸರ್ಕಾರವನ್ನು ಶಿವಸೇನಾ ಶನಿವಾರ ಒತ್ತಾಯಿಸಿದೆ.</p>.<p class="title">ಸೋಮವಾರ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಬಲಿಯಾಗಿದ್ದರು.</p>.<p class="title">‘ಗಾಲ್ವನ್ ಕಣಿವೆಯಲ್ಲಿ ಚೀನಾಕ್ಕೆ ಹಕ್ಕು ಇಲ್ಲ. ವಾಸ್ತವ ಗಡಿ ರೇಖೆಯಲ್ಲಿ ನಡೆಸುತ್ತಿರುವ ಚಟುವಟಿಕೆಗಳಿಂದ ಚೀನಾ ಹಿಂದೆ ಸರಿಯಬೇಕು’ ಎಂದು ಭಾರತ ತಿಳಿಸಿತ್ತು. ಆದರೆ ಗಾಲ್ವನ್ ಕಣಿವೆಯು ಚೀನಾದ ಭೂಭಾಗದಲ್ಲಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಶುಕ್ರವಾರ ಹೇಳಿದೆ.</p>.<p class="title">ಭಾರತದ ಭೂಮಿ ಮೇಲೆ ಯಾರೂ ಅತಿಕ್ರಮಣ ಮಾಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರವಷ್ಟೇ ಹೇಳಿಕೆ ನೀಡಿದ್ದರು.</p>.<p class="title">‘ಚೀನಾಕ್ಕೆ ದೇಶದ ಯಾವುದೇ ಭೂ ಭಾಗವನ್ನು ಬಿಟ್ಟುಕೊಡುವುದಿಲ್ಲ ಎಂದು ಪ್ರಧಾನಿ ದೇಶದ ಜನರಿಗೆ ಅಭಯ ನೀಡಿದ್ದಾರೆ. ಅತ್ತ ಚೀನಾ ಮಾತ್ರ ಗಾಲ್ವನ್ ಕಣಿವೆ ತನಗೆ ಸೇರಿದ್ದು ಎಂದು ಪ್ರತಿಪಾದಿಸುತ್ತಿದೆ. ಈ ಬಗ್ಗೆ ಪ್ರಧಾನಿ ಸ್ಪಷ್ಟನೆ ನೀಡಬೇಕು’ ಎಂದು ಸೇನಾ ಮುಖಂಡರಾದ ಪ್ರಿಯಂಕಾ ಚತುರ್ವೇದಿ ಅವರು ಟ್ವಿಟರ್ನಲ್ಲಿ ಆಗ್ರಹಿಸಿದ್ದಾರೆ.</p>.<p class="title">‘ಇದಕ್ಕೆ ಸರ್ಕಾರ ಸ್ಪಷ್ಟನೆ ನೀಡದಿರುವುದನ್ನು ಒಪ್ಪಲಾಗದು. ಗಾಲ್ವನ್ ಕಣಿವೆಯನ್ನು ಚೀನಾಕ್ಕೆ ಕೊಟ್ಟಿದ್ದೇವೆಯೇ ಅಥವಾ ಅಲ್ಲಿಂದ ಚೀನಾ ಸೇನೆಯನ್ನು ಓಡಿಸಿದ್ದೇವೆಯೇ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಇದನ್ನು ದೇಶದ ಜನರಿಗೆ ತಿಳಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>