‘ಹುಟ್ಟು ಹಬ್ಬದ ಆಚರಣೆಗೆಂದು ಮಕ್ಕಳನ್ನು ಆಹ್ವಾನಿಸಿದ ಸುಭಾಶ್ ಭಾತಮ್ ಎಂಬಾತ, ಮಾತುಕತೆ ನಡೆಸಲು ಯತ್ನಿಸಿದವರ ಮೇಲೆ ಮನೆಯೊಳಗಿನಿಂದಲೇ ಗುಂಡು ಹಾರಿಸಿದ್ದಾನೆ. ಮಕ್ಕಳ ರಕ್ಷಣೆಗೆ ಆದ್ಯತೆ ನೀಡಲಾಗಿದ್ದು, ಅಗತ್ಯ ಬಿದ್ದಲ್ಲಿ ಕಾರ್ಯಾಚರಣೆಗೆ ಎನ್ಎಸ್ಜಿಯನ್ನು ಕರೆಯಲಾಗುವುದು’ ಎಂದು ಡಿಜಿಪಿ ಒ.ಪಿ.ಸಿಂಗ್ ತಿಳಿಸಿದರು.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಆರೋಪಿ ಮಾನಸಿಕ ಅಸ್ವಸ್ಥನಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.