ಮದ್ರಾಸ್ ವಿಶ್ವವಿದ್ಯಾಲಯ ಭೇಟಿ ವೇಳೆ ಮಾತನಾಡಿರುವ ಅವರು, ‘ನನಗೆ ವಿಶ್ವವಿದ್ಯಾಲಯ ಪ್ರವೇಶ ನಿರಾಕರಿಸಲಾಗಿದೆ. ನಾನು ಸಾಯುವವರೆಗೂ ವಿದ್ಯಾರ್ಥಿ ಎಂದು ಕರೆದುಕೊಳ್ಳಲು ಇಚ್ಛಿಸುತ್ತೇನೆ. ಇಲ್ಲಿ ವಿದ್ಯಾರ್ಥಿಗಳ ಬೆಂಬಲಿಗನಾಗಿ ನಾನು ಬಂದಿದ್ದೇನೆ. ರಾಜಕೀಯ ಪಕ್ಷ ಸ್ಥಾಪಿಸಿದರೂ, ಸ್ಥಾಪಿಸದೇ ಇದ್ದರೂ ನಾನು ನನ್ನ ಧ್ವನಿಯನ್ನು ಎತ್ತುತ್ತಿದ್ದೆ. ಭಾರತದಾದ್ಯಂತ ಇಂತಹ ಧ್ವನಿಗಳು ಕೇಳಿಬರುತ್ತಿವೆ. ನೀವು ಆ ಧ್ವನಿಗಳನ್ನು ಅಡಗಿಸಲು ಸಾಧ್ಯವಿಲ್ಲ’ ಎಂದು ಕಮಲ್ ಹೇಳಿದ್ದಾರೆ.