ಈಶಾನ್ಯ ದೆಹಲಿಯಲ್ಲಿ ಸೋಮವಾರ ಪೌರತ್ವ ತಿದ್ದುಪಡಿ ಕಾಯ್ದೆಯ ಪರ–ವಿರುದ್ಧ ಹೋರಾಟಗಾರರ ನಡುವೆನಡೆದ ಘರ್ಷಣೆಯಲ್ಲಿ ಮೃತಪಟ್ಟ ನಾಲ್ವರು ನಾಗರಿಕರ ದೇಹಗಳ ಮೇಲೆ ಗುಂಡೇಟಿನ ಕುರುಹುಗಳು ಪತ್ತೆಯಾಗಿವೆ.ಮೃತ ಪೊಲೀಸ್ ಹೆಡ್ಕಾನ್ಸ್ಟೆಬಲ್ ಸಾವಿಗೆ ಕಲ್ಲೇಟಿನಿಂದ ತಲೆಗೆ ಆದ ಗಾಯ ಕಾರಣ. ಗಾಯಗೊಂಡವರಲ್ಲಿಯೂ ಬಹುತೇಕರು ಗುಂಡೇಟು ತಿಂದಿದ್ದಾರೆ.