<p><strong>ನವದೆಹಲಿ:</strong> ‘ದೇಶ ಹಾಗೂಪ್ರಜಾಪ್ರಭುತ್ವವನ್ನು ರಕ್ಷಿಸುವ ಹೊಣೆಗಾರಿಕೆಯಿಂದ ಕಾಂಗ್ರೆಸ್ ಎಂದಿಗೂ ವಿಮುಖವಾಗುವುದಿಲ್ಲ’ ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.</p>.<p>ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ದೆಹಲಿಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ‘ಭಾರತ ರಕ್ಷಿಸಿ ರ್ಯಾಲಿ’ಯಲ್ಲಿ ಅನ್ಯಾಯದ ವಿರುದ್ಧ ಹೋರಾಟ ನಡೆಸುವಂತೆ ಜನರಿಗೆ ಕರೆ ನೀಡಿದ ಅವರು, ‘ಕಾಂಗ್ರೆಸ್ ಈ ನಿಟ್ಟಿನಲ್ಲಿ ಎಂದೂ ಹಿಂದಡಿಯಿಡುವುದಿಲ್ಲ’ ಎಂದರು.</p>.<p>‘ಕಂಗೆಟ್ಟ ರಾಜ, ಅಸ್ತವ್ಯಸ್ತ ರಾಜ್ಯ’ ಎಂಬಂತಹ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ (ಎಲ್ಲರ ಅಭ್ಯುದಯ) ಎಲ್ಲಿ ಆಗಿದೆ ಎಂದು ಇಡೀ ದೇಶ ಪ್ರಶ್ನೆ ಮಾಡುತ್ತಿದೆ ಎಂದು ಸೋನಿಯಾ ಹೇಳಿದರು.</p>.<p>‘ಭಾರತದ ಆತ್ಮವನ್ನು ಚೂರುಚೂರು ಮಾಡಿದ ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಹೋರಾಟ ಮುಂದುವರಿಸುತ್ತೇವೆ. ಅನ್ಯಾಯವನ್ನು ಸಹಿಸುವುದು ದೊಡ್ಡ ಅಪರಾಧ. ದೇಶವನ್ನು ರಕ್ಷಿಸಬೇಕಾದ ಸಮಯ ಬಂದಿದ್ದು, ಹೋರಾಟವೊಂದೇ ಇದಕ್ಕೆ ದಾರಿ’ ಎಂದರು.</p>.<p>‘ಮೋದಿ–ಶಾ ನೇತೃತ್ವದ ಸರ್ಕಾರವು ಸಂಸತ್ತು ಅಥವಾ ಸಾಂಸ್ಥಿಕ ವ್ಯವಸ್ಥೆಗಳ ಬಗ್ಗೆ ಚಿಂತಿಸುವುದಿಲ್ಲ. ನೈಜ ಘಟನೆಗಳನ್ನು ಮರೆಮಾಚಿ ಜನರನ್ನು ಸಂಘರ್ಷಕ್ಕೆ ನೂಕುವುದೇ ಅವರ ಉದ್ದೇಶವಾಗಿದೆ’ ಎಂದು ಸೋನಿಯಾ ಆರೋಪಿಸಿದರು.</p>.<p><strong>‘ವಿರೋಧಿಸದವರು ಹೇಡಿಗಳು’</strong></p>.<p>ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ‘ಅನ್ಯಾಯದ ವಿರುದ್ಧ ಹೋರಾಟಕ್ಕೆ ಮುಂದಾಗದವರು ಹೇಡಿಗಳೆಂದು ಇತಿಹಾಸದಲ್ಲಿ ದಾಖಲಾಗುತ್ತಾರೆ’ ಎಂದರು.</p>.<p>‘ನೀವು ಭಾರತವನ್ನು ಪ್ರೀತಿಸುವುದಾದರೆ, ದನಿ ಎತ್ತರಿಸಿ ಮಾತನಾಡಿ. ಈಗ ಮೌನ ವಹಿಸಿದರೆ, ನಮ್ಮ ಸಂವಿಧಾನವೇ ನಾಶವಾಗುವ ಅಪಾಯವಿದೆ. ದೇಶದ ವಿಭಜನೆ ಆರಂಭವಾಗಲಿದೆ. ಬಿಜೆಪಿ, ಆರ್ಎಸ್ಎಸ್ನ ಭ್ರಷ್ಟ ನಾಯಕರ ಜೊತೆಗೆ ದೇಶ ವಿಭಜನೆಗೆ ನಾವೆಲ್ಲರೂ ಹೊಣೆಗಾರರಾಗಬೇಕಾಗುತ್ತದೆ’ ಎಂದು ಪ್ರಿಯಾಂಕಾ ಗುಡುಗಿದರು.</p>.<p>‘ಮೋದಿ ಇದ್ದರೆ ಎಲ್ಲವೂ ಸಾಧ್ಯ’ ಎಂಬ ಘೋಷಣೆ ಎಲ್ಲೆಡೆ ಕೇಳುತ್ತಿದೆ. ‘ಹೌದು, ಮೋದಿ ಅವರಿಂದ ಎಲ್ಲವೂ ಸಾಧ್ಯವಾಗಿದೆ. ಈರುಳ್ಳಿಯು ಕೆ.ಜಿಗೆ ₹100ರಂತೆ ಮಾರಾಟವಾಗುತ್ತಿದೆ. 4 ಕೋಟಿ ಉದ್ಯೋಗಗಳು ನಷ್ಟವಾಗಿವೆ. 15 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದರು.</p>.<p><strong>ರಾಹುಲ್ ಪುನರಾಗಮನ?</strong></p>.<p>ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಪಕ್ಷದಲ್ಲಿ ಹಿನ್ನೆಲೆಗೆ ಸರಿದಿದ್ದ ರಾಹುಲ್ ಗಾಂಧಿ ಅವರು, ಆರು ತಿಂಗಳ ಬಳಿಕ ಪ್ರಧಾನ ವೇದಿಕೆಗೆ ಬಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.</p>.<p>ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಜೂನ್ ತಿಂಗಳಲ್ಲಿ ರಾಜೀನಾಮೆ ನೀಡಿದ ಬಳಿಕ ಪಕ್ಷದ ಚಟುವಟಿಕೆಗಳಿಂದ ರಾಹುಲ್ ದೂರವಿದ್ದರು. ಈ ಅವಧಿಯಲ್ಲಿ ‘ಅಧ್ಯಾತ್ಮ’ ತರಬೇತಿಗಾಗಿ ವಿದೇಶಕ್ಕೆ ಹಾರಿದ್ದರು.</p>.<p>ಪಕ್ಷವನ್ನು ಮುನ್ನಡೆಸಲು ರಾಹುಲ್ ಅವರೇ ತಮ್ಮ ಆಯ್ಕೆ ಎಂದು ಸೋನಿಯಾ ಸ್ಪಷ್ಟಪಡಿಸಿದ್ದರು. ಶನಿವಾರ ನಡೆದ ರ್ಯಾಲಿಯಲ್ಲಿ ‘ರಾಹುಲ್ ನನ್ನ ನಾಯಕ’ ಎಂದು ಪ್ರಿಯಾಂಕಾ ಹೇಳಿದ್ದಾರೆ. ರಾಹುಲ್ ಅವರ ದೊಡ್ಡ ಕಟೌಟ್ಗಳು ರಾಮಲೀಲಾ ಮೈದಾನದಲ್ಲಿ ರಾರಾಜಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ದೇಶ ಹಾಗೂಪ್ರಜಾಪ್ರಭುತ್ವವನ್ನು ರಕ್ಷಿಸುವ ಹೊಣೆಗಾರಿಕೆಯಿಂದ ಕಾಂಗ್ರೆಸ್ ಎಂದಿಗೂ ವಿಮುಖವಾಗುವುದಿಲ್ಲ’ ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.</p>.<p>ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ದೆಹಲಿಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ‘ಭಾರತ ರಕ್ಷಿಸಿ ರ್ಯಾಲಿ’ಯಲ್ಲಿ ಅನ್ಯಾಯದ ವಿರುದ್ಧ ಹೋರಾಟ ನಡೆಸುವಂತೆ ಜನರಿಗೆ ಕರೆ ನೀಡಿದ ಅವರು, ‘ಕಾಂಗ್ರೆಸ್ ಈ ನಿಟ್ಟಿನಲ್ಲಿ ಎಂದೂ ಹಿಂದಡಿಯಿಡುವುದಿಲ್ಲ’ ಎಂದರು.</p>.<p>‘ಕಂಗೆಟ್ಟ ರಾಜ, ಅಸ್ತವ್ಯಸ್ತ ರಾಜ್ಯ’ ಎಂಬಂತಹ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ (ಎಲ್ಲರ ಅಭ್ಯುದಯ) ಎಲ್ಲಿ ಆಗಿದೆ ಎಂದು ಇಡೀ ದೇಶ ಪ್ರಶ್ನೆ ಮಾಡುತ್ತಿದೆ ಎಂದು ಸೋನಿಯಾ ಹೇಳಿದರು.</p>.<p>‘ಭಾರತದ ಆತ್ಮವನ್ನು ಚೂರುಚೂರು ಮಾಡಿದ ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಹೋರಾಟ ಮುಂದುವರಿಸುತ್ತೇವೆ. ಅನ್ಯಾಯವನ್ನು ಸಹಿಸುವುದು ದೊಡ್ಡ ಅಪರಾಧ. ದೇಶವನ್ನು ರಕ್ಷಿಸಬೇಕಾದ ಸಮಯ ಬಂದಿದ್ದು, ಹೋರಾಟವೊಂದೇ ಇದಕ್ಕೆ ದಾರಿ’ ಎಂದರು.</p>.<p>‘ಮೋದಿ–ಶಾ ನೇತೃತ್ವದ ಸರ್ಕಾರವು ಸಂಸತ್ತು ಅಥವಾ ಸಾಂಸ್ಥಿಕ ವ್ಯವಸ್ಥೆಗಳ ಬಗ್ಗೆ ಚಿಂತಿಸುವುದಿಲ್ಲ. ನೈಜ ಘಟನೆಗಳನ್ನು ಮರೆಮಾಚಿ ಜನರನ್ನು ಸಂಘರ್ಷಕ್ಕೆ ನೂಕುವುದೇ ಅವರ ಉದ್ದೇಶವಾಗಿದೆ’ ಎಂದು ಸೋನಿಯಾ ಆರೋಪಿಸಿದರು.</p>.<p><strong>‘ವಿರೋಧಿಸದವರು ಹೇಡಿಗಳು’</strong></p>.<p>ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ‘ಅನ್ಯಾಯದ ವಿರುದ್ಧ ಹೋರಾಟಕ್ಕೆ ಮುಂದಾಗದವರು ಹೇಡಿಗಳೆಂದು ಇತಿಹಾಸದಲ್ಲಿ ದಾಖಲಾಗುತ್ತಾರೆ’ ಎಂದರು.</p>.<p>‘ನೀವು ಭಾರತವನ್ನು ಪ್ರೀತಿಸುವುದಾದರೆ, ದನಿ ಎತ್ತರಿಸಿ ಮಾತನಾಡಿ. ಈಗ ಮೌನ ವಹಿಸಿದರೆ, ನಮ್ಮ ಸಂವಿಧಾನವೇ ನಾಶವಾಗುವ ಅಪಾಯವಿದೆ. ದೇಶದ ವಿಭಜನೆ ಆರಂಭವಾಗಲಿದೆ. ಬಿಜೆಪಿ, ಆರ್ಎಸ್ಎಸ್ನ ಭ್ರಷ್ಟ ನಾಯಕರ ಜೊತೆಗೆ ದೇಶ ವಿಭಜನೆಗೆ ನಾವೆಲ್ಲರೂ ಹೊಣೆಗಾರರಾಗಬೇಕಾಗುತ್ತದೆ’ ಎಂದು ಪ್ರಿಯಾಂಕಾ ಗುಡುಗಿದರು.</p>.<p>‘ಮೋದಿ ಇದ್ದರೆ ಎಲ್ಲವೂ ಸಾಧ್ಯ’ ಎಂಬ ಘೋಷಣೆ ಎಲ್ಲೆಡೆ ಕೇಳುತ್ತಿದೆ. ‘ಹೌದು, ಮೋದಿ ಅವರಿಂದ ಎಲ್ಲವೂ ಸಾಧ್ಯವಾಗಿದೆ. ಈರುಳ್ಳಿಯು ಕೆ.ಜಿಗೆ ₹100ರಂತೆ ಮಾರಾಟವಾಗುತ್ತಿದೆ. 4 ಕೋಟಿ ಉದ್ಯೋಗಗಳು ನಷ್ಟವಾಗಿವೆ. 15 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದರು.</p>.<p><strong>ರಾಹುಲ್ ಪುನರಾಗಮನ?</strong></p>.<p>ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಪಕ್ಷದಲ್ಲಿ ಹಿನ್ನೆಲೆಗೆ ಸರಿದಿದ್ದ ರಾಹುಲ್ ಗಾಂಧಿ ಅವರು, ಆರು ತಿಂಗಳ ಬಳಿಕ ಪ್ರಧಾನ ವೇದಿಕೆಗೆ ಬಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.</p>.<p>ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಜೂನ್ ತಿಂಗಳಲ್ಲಿ ರಾಜೀನಾಮೆ ನೀಡಿದ ಬಳಿಕ ಪಕ್ಷದ ಚಟುವಟಿಕೆಗಳಿಂದ ರಾಹುಲ್ ದೂರವಿದ್ದರು. ಈ ಅವಧಿಯಲ್ಲಿ ‘ಅಧ್ಯಾತ್ಮ’ ತರಬೇತಿಗಾಗಿ ವಿದೇಶಕ್ಕೆ ಹಾರಿದ್ದರು.</p>.<p>ಪಕ್ಷವನ್ನು ಮುನ್ನಡೆಸಲು ರಾಹುಲ್ ಅವರೇ ತಮ್ಮ ಆಯ್ಕೆ ಎಂದು ಸೋನಿಯಾ ಸ್ಪಷ್ಟಪಡಿಸಿದ್ದರು. ಶನಿವಾರ ನಡೆದ ರ್ಯಾಲಿಯಲ್ಲಿ ‘ರಾಹುಲ್ ನನ್ನ ನಾಯಕ’ ಎಂದು ಪ್ರಿಯಾಂಕಾ ಹೇಳಿದ್ದಾರೆ. ರಾಹುಲ್ ಅವರ ದೊಡ್ಡ ಕಟೌಟ್ಗಳು ರಾಮಲೀಲಾ ಮೈದಾನದಲ್ಲಿ ರಾರಾಜಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>