ನವದೆಹಲಿ(ಪಿಟಿಐ): ದೆಹಲಿಯಲ್ಲಿ ಅಧಿಕಾರಕ್ಕೆ ಬಂದರೆ ನಿರುದ್ಯೋಗ ವೇತನ ನೀಡುವ ಯುವ ಸ್ವಾಭಿಮಾನ್ ಯೋಜನೆಯನ್ನು ಜಾರಿ ಮಾಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.
ಈ ಯೋಜನೆಯ ಅಡಿಯಲ್ಲಿ ಪದವೀಧರ ನಿರುದ್ಯೋಗಿಗಳಿಗೆ ತಿಂಗಳಿಗೆ ₹ 5ಸಾವಿರ ಹಾಗೂ ಸ್ನಾತಕೋತ್ತರ ಪದವೀಧರರಿಗೆ ₹7,500 ನಿರುದ್ಯೋಗ ವೇತನ ನೀಡಲಾಗುವುದು ಎಂದು ಭಾನುವಾರ ಪ್ರಣಾಳಿಕೆ ಮಂಡಿಸಿದ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸುಭಾಷ್ ಚೋಪ್ರಾ ಹೇಳಿದ್ದಾರೆ.
ನೀರು ಮತ್ತು ವಿದ್ಯುತ್ ಬಳಕೆದಾರರಿಗೆ ಕ್ಯಾಶ್ಬ್ಯಾಕ್ ಯೋಜನೆ ಜಾರಿಗೊಳಿಸುತ್ತೇವೆ.ತಿಂಗಳಿಗೆ 300 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡಲಾಗುವುದು. ₹15ಕ್ಕೆ ಊಟ ಲಭಿಸುವ 100 ಇಂದಿರಾ ಕ್ಯಾಂಟಿನ್ಗಳನ್ನು ಆರಂಭಿಸಲಾಗುವುದು ಎಂದಿದ್ದಾರೆ.ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗುವುದು ಮತ್ತು ಎನ್ಆರ್ಸಿಯನ್ನು ಜಾರಿ ಮಾಡುವುದಿಲ್ಲ ಎಂದೂ ಭರವಸೆ ನೀಡಿದ್ದಾರೆ.