<p><strong>ನವದೆಹಲಿ: </strong>ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮನೆಯ ಎದುರು ಗಲಭೆ ಸೃಷ್ಟಿಸಿದ ಆರೋಪದಿಂದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಇತರೆ ಆರು ಮಂದಿಯನ್ನು ದೆಹಲಿ ಕೋರ್ಟ್ ದೋಷಮುಕ್ತಗೊಳಿಸಿದೆ.</p>.<p>ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರು2012ರಲ್ಲಿ ನಡೆದ ಈ ಪ್ರಕರಣದ ತೀರ್ಪುನ್ನು ಸೋಮವಾರ ಪ್ರಕಟಿಸಿದರು. ಅರವಿಂದ್ ಕೇಜ್ರಿವಾಲ್, ಘನಶ್ಯಾಮ್, ಮಹೇಶ್, ದೀಪಕ್ ಚಾಬ್ರ, ರಂಜಿತ್ ಬಿಶತ್, ಅಮಿತ್ ಕುಮಾರ್ ಮತ್ತು ಗೌತಮ್ ಕುಮಾರ್ ಸಿಂಗ್ ಆರೋಪದಿಂದ ಮುಕ್ತಗೊಂಡಿದ್ದಾರೆ.</p>.<p>2012ರ ಆಗಸ್ಟ್ 26ರಂದು ಮನಮನೋಹನ್ ಸಿಂಗ್ ಅವರ ಮನೆ ಎದುರು ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಜ್ರಿವಾಲ್ ಮತ್ತು ಇತರರು ಪ್ರತಿಭಟನೆ ನಡೆಸಿದ್ದರು. ಆ ಪ್ರತಿಭಟನೆ ಹಿಂಸಾತ್ಮಕಸ್ವರೂಪಕ್ಕೆ ತಿರುಗಿತ್ತು.ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹಲವು ಬಾರಿ ಟಿಯರ್ ಗ್ಯಾಸ್ ಬಳಸಲಾಗಿತ್ತು. ಬ್ಯಾರಿಕೇಡ್ ಸೇರಿದಂತೆ ಹಲವು ಪರಿಕರಗಳಿಗೆ ಹಾನಿಯಾಗಿತ್ತು.</p>.<p>ಈ ಸಂಬಂಧಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೇಜ್ರಿವಾಲ್ ಮತ್ತು ಇತರೆ ಆರು ಮಂದಿಯ ವಿರುದ್ಧ ದೆಹಲಿ ಪೊಲೀಸರು ಸೆಕ್ಷನ್ 147 (ಗಲಭೆ) 148 (ಮಾರಕಾಸ್ತ್ರಗಳಿಂದ ದೊಂಬಿ ಗಲಾಟೆ) ಮತ್ತು 149 (ಅಕ್ರಮವಾಗಿ ಗುಂಪುಗೂಡುವಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮನೆಯ ಎದುರು ಗಲಭೆ ಸೃಷ್ಟಿಸಿದ ಆರೋಪದಿಂದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಇತರೆ ಆರು ಮಂದಿಯನ್ನು ದೆಹಲಿ ಕೋರ್ಟ್ ದೋಷಮುಕ್ತಗೊಳಿಸಿದೆ.</p>.<p>ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರು2012ರಲ್ಲಿ ನಡೆದ ಈ ಪ್ರಕರಣದ ತೀರ್ಪುನ್ನು ಸೋಮವಾರ ಪ್ರಕಟಿಸಿದರು. ಅರವಿಂದ್ ಕೇಜ್ರಿವಾಲ್, ಘನಶ್ಯಾಮ್, ಮಹೇಶ್, ದೀಪಕ್ ಚಾಬ್ರ, ರಂಜಿತ್ ಬಿಶತ್, ಅಮಿತ್ ಕುಮಾರ್ ಮತ್ತು ಗೌತಮ್ ಕುಮಾರ್ ಸಿಂಗ್ ಆರೋಪದಿಂದ ಮುಕ್ತಗೊಂಡಿದ್ದಾರೆ.</p>.<p>2012ರ ಆಗಸ್ಟ್ 26ರಂದು ಮನಮನೋಹನ್ ಸಿಂಗ್ ಅವರ ಮನೆ ಎದುರು ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಜ್ರಿವಾಲ್ ಮತ್ತು ಇತರರು ಪ್ರತಿಭಟನೆ ನಡೆಸಿದ್ದರು. ಆ ಪ್ರತಿಭಟನೆ ಹಿಂಸಾತ್ಮಕಸ್ವರೂಪಕ್ಕೆ ತಿರುಗಿತ್ತು.ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹಲವು ಬಾರಿ ಟಿಯರ್ ಗ್ಯಾಸ್ ಬಳಸಲಾಗಿತ್ತು. ಬ್ಯಾರಿಕೇಡ್ ಸೇರಿದಂತೆ ಹಲವು ಪರಿಕರಗಳಿಗೆ ಹಾನಿಯಾಗಿತ್ತು.</p>.<p>ಈ ಸಂಬಂಧಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೇಜ್ರಿವಾಲ್ ಮತ್ತು ಇತರೆ ಆರು ಮಂದಿಯ ವಿರುದ್ಧ ದೆಹಲಿ ಪೊಲೀಸರು ಸೆಕ್ಷನ್ 147 (ಗಲಭೆ) 148 (ಮಾರಕಾಸ್ತ್ರಗಳಿಂದ ದೊಂಬಿ ಗಲಾಟೆ) ಮತ್ತು 149 (ಅಕ್ರಮವಾಗಿ ಗುಂಪುಗೂಡುವಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>