<p><strong>ಮುಂಬೈ:</strong> ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ರನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿದರು. ಕೋರ್ಟ್ ಮಾರ್ಚ್ 11ರವರೆಗೆ ಅವರನ್ನು ಇ.ಡಿ ವಶಕ್ಕೆ ಒಪ್ಪಿಸಿತು.</p>.<p>62 ವರ್ಷದ ಕಪೂರ್ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ. ಇವರ ವಿರುದ್ಧ ಹಣ ಅಕ್ರಮ ವಗಾವಣೆ ನಿಯಂತ್ರಣ ಕಾಯ್ದೆ (ಪಿಎಂಎಲ್ಎ) ಅಡಿ ಪ್ರಕರಣ ದಾಖಲಾಗಿದೆ. ಇವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಅಧಿಕಾರಿಗಳು ಮೊದಲು ಹೇಳಿದ್ದರು.</p>.<p>ಸುಮಾರು ₹ 2,000 ಕೋಟಿ ರೂಪಾಯಿ ಹೂಡಿಕೆ, ಕಾಗದಲ್ಲಿಯಷ್ಟೇ ಅಸ್ತಿತ್ವದಲ್ಲಿರುವ 12 ಕಂಪನಿಗಳು, ದುಬಾರಿ ಬೆಲೆಯ 44 ಪೇಂಟಿಂಗ್ಗಳು –ತನಿಖೆಗೆ ಆರಂಭಿಸಿರುವ ಇ.ಡಿ ಅಧಿಕಾರಿಗಳಿಗೆ ಕಂಡುಬಂದಿರುವ ರಾಣಾ ಕಪೂರ್ನ ಅಸ್ತಿಗಳಿವು.</p>.<p>ಅಲ್ಲದೆ, ಕಪೂರ್ ಕುಟುಂಬ ಸದಸ್ಯರು ಲಂಡನ್ನಲ್ಲಿ ಹೊಂದಿರುವ ಕೆಲ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಇವುಗಳ ಸ್ವಾಧೀನಕ್ಕೆ ಹಣದ ಮೂಲ ಕುರಿತಂತೆ ಈಗ ತನಿಖೆ ನಡೆಸಲಾಗುತ್ತಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ತನಿಖೆ ಕೈಗೊಂಡಿರುವ ಇ.ಡಿ ಅಧಿಕಾರಿಗಳು ಶುಕ್ರವಾರ ದಕ್ಷಿಣ ಮುಂಬೈನಲ್ಲಿರುವ ರಾಣಾ ಕಪೂರ್ನ ಮನೆಯ ಮೇಲೆ ದಾಳಿ ನಡೆಸಿದ್ದರು. ಕುಟುಂಬ ಸದಸ್ಯರ ನಿಯಂತ್ರಣದಲ್ಲಿರುವ ಸಂಸ್ಥೆಗೆ ₹ 600 ಕೋಟಿ ಬಂದಿರುವ ಮೂಲ ಕುರಿತು ಕಪೂರ್, ಅವರ ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಉದ್ದೇಶಿತ ಸಂಸ್ಥೆಗೂ ಈಗಾಗಲೇ ಹಗರಣದಲ್ಲಿ ಮುಳುಗಿರುವ ಡಿಎಚ್ಎಫ್ಎಲ್ ಸಂಸ್ಥೆಗೂ ಸಂಪರ್ಕವಿದೆ ಎಂದು ಹೇಳಲಾಗುತ್ತಿದೆ.</p>.<p>ಡಿಎಚ್ಎಫ್ಎಲ್ನಿಂದ ಸಾಲ ವಸೂಲಾತಿಗೆ ಬ್ಯಾಂಕ್ ಕ್ರಮವಹಿಸಿರಲಿಲ್ಲ. ಇದಕ್ಕೆ ಪೂರಕವಾಗಿ ರುಷುವತ್ತು ರೂಪದಲ್ಲಿ, ರಾಣಾ ಕುಟುಂಬ ನಿಯಂತ್ರಿಸುತ್ತಿರುವ ಉದ್ದೇಶಿತ ಕಂಪನಿಗೆ ₹ 600 ಕೋಟಿ ಬಂದಿರಬಹುದು ಎಂದು ಶಂಕಿಸಲಾಗಿದೆ.</p>.<p>ತನಿಖೆ ಸಂದರ್ಭದಲ್ಲಿ ರಾಣಾ ಕುಟುಂಬವು ಸುಮಾರು ₹ 2,000 ಕೋಟಿ ಹೂಡಿಕೆ ಮಾಡಿರುವುದು, ರುಷುವತ್ತು ಮೊತ್ತವನ್ನು ಹೊಂದಾಣಿಸಲು ಕಾಗದದಲ್ಲಷ್ಟೇ ಅಸ್ತಿತ್ವದಲ್ಲಿರುವ 12 ಕಂಪನಿಗಳ ಸ್ಥಾಪಿಸಿರುವುದು ಬೆಳಕಿಗೆ ಬಂದಿದೆ.</p>.<p>ಅಲ್ಲದೆ, ಕುಟುಂಬ ಸದಸ್ಯರು ಖರೀದಿಸಿದ್ದ ದುಬಾರಿ ಬೆಲೆಯ ಸುಮಾರು 44 ಪೇಂಟಿಂಗ್ಗಳು ಕಂಡುಬಂದಿವೆ. ಇವುಗಳ ಪೈಕಿ ಕೆಲವನ್ನು ರಾಜಕಾರಣಿಗಳಿಂದ ಖರೀದಿಸಲಾಗಿದೆ ಎಂಬುದು ಗಮನಾರ್ಹ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p><strong>ಬಿಜೆಪಿ–ಕಾಂಗ್ರೆಸ್ ಕೆಸರೆರಚಾಟ</strong><br />ಯೆಸ್ ಬ್ಯಾಂಕ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಭಾನುವಾರ ವಾಕ್ಸಮರ ನಡೆದಿದೆ.</p>.<p>ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕುಟುಂಬದ ಜತೆ ಯೆಸ್ ಬ್ಯಾಂಕ್ಗೆ ನಂಟು ಇದೆ ಎಂದು ಬಿಂಬಿಸಲು ಬಿಜೆಪಿ ಯತ್ನಿಸಿದೆ. ಆದರೆ, ‘ಬ್ಯಾಂಕ್ನ ಸಾಲದ ಮೊತ್ತ ಹಿಗ್ಗಲು ಪ್ರಧಾನಿ, ಹಣಕಾಸು ಸಚಿವರ ‘ಸಹಕಾರ’ ಕಾರಣವಿರಬಹುದೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.</p>.<p>ರಾಣಾ ಕಪೂರ್ ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರಿಂದ ಚಿತ್ರ ಕಲಾಕೃತಿ ಖರೀದಿಸಿದ್ದರು ಎಂಬ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿಯ ಐ.ಟಿ ವಿಭಾಗದ ಅಮಿತ್ ಮಾಳವೀಯ, ‘ಹಗರಣಕ್ಕೂ ಗಾಂಧಿ ಕುಟುಂಬಕ್ಕೆ ಸಂಬಂಧ ಇದೆ’ ಎಂದಿದ್ದಾರೆ.</p>.<p>ಈ ಆರೋಪ ಆಧಾರರಹಿತ ಎಂದು ಕಾಂಗ್ರೆಸ್ ತಳ್ಳಿಹಾಕಿದೆ. ‘ಪ್ರಿಯಾಂಕಾ ಗಾಂಧಿ ಅವರು ತಮ್ಮ ತಂದೆ ರಾಜೀವ್ಗಾಂಧಿ ಅವರಲ್ಲಿದ್ದ ಎಂ.ಎಫ್.ಹುಸೇನ್ ಅವರ ಪೇಂಟಿಂಗ್ ಅನ್ನು ₹ 2 ಕೋಟಿಗೆ ಮಾರಿದ್ದರು. ಈ ಮಾಹಿತಿ ಅವರ ಆದಾಯ ತೆರಿಗೆ ವಿವರಗಳಲ್ಲೂ ಇದೆ’ ಎಂದಿದೆ.</p>.<p>ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಅವರು, ‘ಇದು, ಗಮನ ಬೇರೆಡೆ ಸೆಳೆಯುವ ಸರ್ಕಾರದ ಕಾರ್ಯತಂತ್ರ. ಬ್ಯಾಂಕ್ನ ಸಾಲದ ಮೊತ್ತ ಮಾರ್ಚ್ 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದಾಗ ₹ 55,633 ಕೋಟಿ ಇತ್ತು. ಮಾರ್ಚ್ 2019ಕ್ಕೆ ಅದು ರೂ. 2,41,499 ಕೋಟಿ ಆಗಿದೆ. ನೋಟು ರದ್ದತಿ ನಂತರ ಈ ಬದಲಾವಣೆ ಆಗಿದೆ. ಆಗ ಪ್ರಧಾನಿ, ಹಣಕಾಸು ಸಚಿವರು ನಿದ್ರೆ ಮಾಡುತ್ತಿದ್ದರೆ’ ಎಂದು ಪ್ರಶ್ನಿಸಿದ್ದಾರೆ.</p>.<p><strong>ಸಿಬಿಐ ತನಿಖೆ</strong><br />ಯೆಸ್ ಬ್ಯಾಂಕ್ ಬಿಕ್ಕಟ್ಟು ಕುರಿತಂತೆ ಸಿಬಿಐ ತನಿಖೆ ಆರಂಭಿಸಿದ್ದು, ಅಧಿಕಾರಿಗಳು ದಾಖಲೆಪತ್ರಗಳನ್ನು ಸಂಗ್ರಹಿಸಲು ಆರಂಭಿಸಿದ್ದಾರೆ.</p>.<p>ಸಿಬಿಐ ತನ್ನ ತನಿಖೆ ಕುರಿತು ಗೌಪ್ಯತೆ ಕಾಪಾಡಿಕೊಳ್ಳಲು ಬಯಸಿದೆ. ಅಧಿಕಾರಿಗಳು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ತನಿಖೆಯ ಕಾರ್ಯಶೈಲಿಯನ್ನು ವಿವರಿಸಲು ನಿರಾಕರಿಸಿದ ಮೂಲಗಳು, ತನಿಖೆ ಅಧಿಕೃತವಾಗಿ ಆರಂಭವಾಗಿದೆ ಎಂಬುದನ್ನಷ್ಟೇ ದೃಢಪಡಿಸಿವೆ.</p>.<p>ಹಗರಣಪೀಡಿತ ಡಿಎಚ್ಎಫ್ಎಲ್ ಮತ್ತು ಯೆಸ್ ಬ್ಯಾಂಕ್ ನಡುವಣ ಸಂಬಂಧ ಕುರಿತಂತೆ ಸಿಬಿಐ ಗಮನ<br />ಹರಿಸಲಿದೆ ಎಂದು ತಿಳಿದುಬಂದಿದೆ.</p>.<p><strong>ಮಗಳಿಗೆ ತಡೆ</strong><br />ರಾಣಾ ಕಪೂರ್ ಮಗಳು ರೋಶ್ನಿ ಕಪೂರ್ ಅವರು ಲಂಡನ್ಗೆ ಹೋಗುವುದನ್ನು ತಡೆಯಲಾಗಿದೆ. ಅವರ ವಿರುದ್ಧ ‘ಲುಕ್ ಔಟ್<br />ಸರ್ಕ್ಯುಲರ್’ ಹೊರಡಿಸಲಾಗಿದೆ. ಹಾಗಾಗಿ, ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಪ್ರಯಾಣಕ್ಕೆ ತಡೆ ಒಡ್ಡಲಾಗಿದೆ. ರಾಣಾ ಅವರ ಕುಟುಂಬದ ಸದಸ್ಯರ ವಿರುದ್ಧವೂ ‘ಲುಕ್ ಔಟ್ ಸರ್ಕ್ಯುಲರ್’ ಹೊರಡಿಸಲಾಗಿದೆ.</p>.<p><strong>ಇನ್ನಷ್ಟು:</strong></p>.<p><a href="https://www.prajavani.net/business/commerce-news/ed-questions-yes-bank-founder-rana-kapoor-for-second-day-expands-raids-710773.html" itemprop="url">ಅಕ್ರಮ ಹಣ ವರ್ಗಾವಣೆ ಪ್ರಕರಣ: ರಾಣಾ ಕಪೂರ್ ವಿಚಾರಣೆ</a></p>.<p><a href="https://www.prajavani.net/business/commerce-news/sbi-sets-rs-10k-cr-cap-for-yes-bank-investment-710783.html" itemprop="url">ಯೆಸ್ ಬ್ಯಾಂಕ್ಗೆ ನೆರವು: ಶೇ 49ರಷ್ಟು ಪಾಲು ಬಂಡವಾಳ ಖರೀದಿಸಲಿದೆ ಎಸ್ಬಿಐ </a></p>.<p><a href="https://www.prajavani.net/business/commerce-news/evaluating-draft-reconstruction-scheme-for-yes-bank-says-sbi-chief-710586.html" itemprop="url">ಯೆಸ್ ಬ್ಯಾಂಕ್ ಕಾಯಕಲ್ಪಕ್ಕೆ ಶೀಘ್ರ ಕ್ರಮ: ಎಸ್ಬಿಐ ಅಧ್ಯಕ್ಷ ಭರವಸೆ </a></p>.<p><a href="https://www.prajavani.net/op-ed/editorial/yes-bank-710485.html" itemprop="url">ಸಂಪಾದಕೀಯ | ಯೆಸ್ ಬ್ಯಾಂಕ್ ಬಿಕ್ಕಟ್ಟು ತ್ವರಿತವಾಗಿ ಬಗೆಹರಿಯಲಿ </a></p>.<p><a href="https://www.prajavani.net/business/commerce-news/yes-bank-crisis-rbi-sbi-710537.html" itemprop="url">ಯೆಸ್ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಹೆಚ್ಚಿದ ದುಗುಡ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ರನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿದರು. ಕೋರ್ಟ್ ಮಾರ್ಚ್ 11ರವರೆಗೆ ಅವರನ್ನು ಇ.ಡಿ ವಶಕ್ಕೆ ಒಪ್ಪಿಸಿತು.</p>.<p>62 ವರ್ಷದ ಕಪೂರ್ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ. ಇವರ ವಿರುದ್ಧ ಹಣ ಅಕ್ರಮ ವಗಾವಣೆ ನಿಯಂತ್ರಣ ಕಾಯ್ದೆ (ಪಿಎಂಎಲ್ಎ) ಅಡಿ ಪ್ರಕರಣ ದಾಖಲಾಗಿದೆ. ಇವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಅಧಿಕಾರಿಗಳು ಮೊದಲು ಹೇಳಿದ್ದರು.</p>.<p>ಸುಮಾರು ₹ 2,000 ಕೋಟಿ ರೂಪಾಯಿ ಹೂಡಿಕೆ, ಕಾಗದಲ್ಲಿಯಷ್ಟೇ ಅಸ್ತಿತ್ವದಲ್ಲಿರುವ 12 ಕಂಪನಿಗಳು, ದುಬಾರಿ ಬೆಲೆಯ 44 ಪೇಂಟಿಂಗ್ಗಳು –ತನಿಖೆಗೆ ಆರಂಭಿಸಿರುವ ಇ.ಡಿ ಅಧಿಕಾರಿಗಳಿಗೆ ಕಂಡುಬಂದಿರುವ ರಾಣಾ ಕಪೂರ್ನ ಅಸ್ತಿಗಳಿವು.</p>.<p>ಅಲ್ಲದೆ, ಕಪೂರ್ ಕುಟುಂಬ ಸದಸ್ಯರು ಲಂಡನ್ನಲ್ಲಿ ಹೊಂದಿರುವ ಕೆಲ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಇವುಗಳ ಸ್ವಾಧೀನಕ್ಕೆ ಹಣದ ಮೂಲ ಕುರಿತಂತೆ ಈಗ ತನಿಖೆ ನಡೆಸಲಾಗುತ್ತಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ತನಿಖೆ ಕೈಗೊಂಡಿರುವ ಇ.ಡಿ ಅಧಿಕಾರಿಗಳು ಶುಕ್ರವಾರ ದಕ್ಷಿಣ ಮುಂಬೈನಲ್ಲಿರುವ ರಾಣಾ ಕಪೂರ್ನ ಮನೆಯ ಮೇಲೆ ದಾಳಿ ನಡೆಸಿದ್ದರು. ಕುಟುಂಬ ಸದಸ್ಯರ ನಿಯಂತ್ರಣದಲ್ಲಿರುವ ಸಂಸ್ಥೆಗೆ ₹ 600 ಕೋಟಿ ಬಂದಿರುವ ಮೂಲ ಕುರಿತು ಕಪೂರ್, ಅವರ ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಉದ್ದೇಶಿತ ಸಂಸ್ಥೆಗೂ ಈಗಾಗಲೇ ಹಗರಣದಲ್ಲಿ ಮುಳುಗಿರುವ ಡಿಎಚ್ಎಫ್ಎಲ್ ಸಂಸ್ಥೆಗೂ ಸಂಪರ್ಕವಿದೆ ಎಂದು ಹೇಳಲಾಗುತ್ತಿದೆ.</p>.<p>ಡಿಎಚ್ಎಫ್ಎಲ್ನಿಂದ ಸಾಲ ವಸೂಲಾತಿಗೆ ಬ್ಯಾಂಕ್ ಕ್ರಮವಹಿಸಿರಲಿಲ್ಲ. ಇದಕ್ಕೆ ಪೂರಕವಾಗಿ ರುಷುವತ್ತು ರೂಪದಲ್ಲಿ, ರಾಣಾ ಕುಟುಂಬ ನಿಯಂತ್ರಿಸುತ್ತಿರುವ ಉದ್ದೇಶಿತ ಕಂಪನಿಗೆ ₹ 600 ಕೋಟಿ ಬಂದಿರಬಹುದು ಎಂದು ಶಂಕಿಸಲಾಗಿದೆ.</p>.<p>ತನಿಖೆ ಸಂದರ್ಭದಲ್ಲಿ ರಾಣಾ ಕುಟುಂಬವು ಸುಮಾರು ₹ 2,000 ಕೋಟಿ ಹೂಡಿಕೆ ಮಾಡಿರುವುದು, ರುಷುವತ್ತು ಮೊತ್ತವನ್ನು ಹೊಂದಾಣಿಸಲು ಕಾಗದದಲ್ಲಷ್ಟೇ ಅಸ್ತಿತ್ವದಲ್ಲಿರುವ 12 ಕಂಪನಿಗಳ ಸ್ಥಾಪಿಸಿರುವುದು ಬೆಳಕಿಗೆ ಬಂದಿದೆ.</p>.<p>ಅಲ್ಲದೆ, ಕುಟುಂಬ ಸದಸ್ಯರು ಖರೀದಿಸಿದ್ದ ದುಬಾರಿ ಬೆಲೆಯ ಸುಮಾರು 44 ಪೇಂಟಿಂಗ್ಗಳು ಕಂಡುಬಂದಿವೆ. ಇವುಗಳ ಪೈಕಿ ಕೆಲವನ್ನು ರಾಜಕಾರಣಿಗಳಿಂದ ಖರೀದಿಸಲಾಗಿದೆ ಎಂಬುದು ಗಮನಾರ್ಹ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p><strong>ಬಿಜೆಪಿ–ಕಾಂಗ್ರೆಸ್ ಕೆಸರೆರಚಾಟ</strong><br />ಯೆಸ್ ಬ್ಯಾಂಕ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಭಾನುವಾರ ವಾಕ್ಸಮರ ನಡೆದಿದೆ.</p>.<p>ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕುಟುಂಬದ ಜತೆ ಯೆಸ್ ಬ್ಯಾಂಕ್ಗೆ ನಂಟು ಇದೆ ಎಂದು ಬಿಂಬಿಸಲು ಬಿಜೆಪಿ ಯತ್ನಿಸಿದೆ. ಆದರೆ, ‘ಬ್ಯಾಂಕ್ನ ಸಾಲದ ಮೊತ್ತ ಹಿಗ್ಗಲು ಪ್ರಧಾನಿ, ಹಣಕಾಸು ಸಚಿವರ ‘ಸಹಕಾರ’ ಕಾರಣವಿರಬಹುದೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.</p>.<p>ರಾಣಾ ಕಪೂರ್ ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರಿಂದ ಚಿತ್ರ ಕಲಾಕೃತಿ ಖರೀದಿಸಿದ್ದರು ಎಂಬ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿಯ ಐ.ಟಿ ವಿಭಾಗದ ಅಮಿತ್ ಮಾಳವೀಯ, ‘ಹಗರಣಕ್ಕೂ ಗಾಂಧಿ ಕುಟುಂಬಕ್ಕೆ ಸಂಬಂಧ ಇದೆ’ ಎಂದಿದ್ದಾರೆ.</p>.<p>ಈ ಆರೋಪ ಆಧಾರರಹಿತ ಎಂದು ಕಾಂಗ್ರೆಸ್ ತಳ್ಳಿಹಾಕಿದೆ. ‘ಪ್ರಿಯಾಂಕಾ ಗಾಂಧಿ ಅವರು ತಮ್ಮ ತಂದೆ ರಾಜೀವ್ಗಾಂಧಿ ಅವರಲ್ಲಿದ್ದ ಎಂ.ಎಫ್.ಹುಸೇನ್ ಅವರ ಪೇಂಟಿಂಗ್ ಅನ್ನು ₹ 2 ಕೋಟಿಗೆ ಮಾರಿದ್ದರು. ಈ ಮಾಹಿತಿ ಅವರ ಆದಾಯ ತೆರಿಗೆ ವಿವರಗಳಲ್ಲೂ ಇದೆ’ ಎಂದಿದೆ.</p>.<p>ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಅವರು, ‘ಇದು, ಗಮನ ಬೇರೆಡೆ ಸೆಳೆಯುವ ಸರ್ಕಾರದ ಕಾರ್ಯತಂತ್ರ. ಬ್ಯಾಂಕ್ನ ಸಾಲದ ಮೊತ್ತ ಮಾರ್ಚ್ 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದಾಗ ₹ 55,633 ಕೋಟಿ ಇತ್ತು. ಮಾರ್ಚ್ 2019ಕ್ಕೆ ಅದು ರೂ. 2,41,499 ಕೋಟಿ ಆಗಿದೆ. ನೋಟು ರದ್ದತಿ ನಂತರ ಈ ಬದಲಾವಣೆ ಆಗಿದೆ. ಆಗ ಪ್ರಧಾನಿ, ಹಣಕಾಸು ಸಚಿವರು ನಿದ್ರೆ ಮಾಡುತ್ತಿದ್ದರೆ’ ಎಂದು ಪ್ರಶ್ನಿಸಿದ್ದಾರೆ.</p>.<p><strong>ಸಿಬಿಐ ತನಿಖೆ</strong><br />ಯೆಸ್ ಬ್ಯಾಂಕ್ ಬಿಕ್ಕಟ್ಟು ಕುರಿತಂತೆ ಸಿಬಿಐ ತನಿಖೆ ಆರಂಭಿಸಿದ್ದು, ಅಧಿಕಾರಿಗಳು ದಾಖಲೆಪತ್ರಗಳನ್ನು ಸಂಗ್ರಹಿಸಲು ಆರಂಭಿಸಿದ್ದಾರೆ.</p>.<p>ಸಿಬಿಐ ತನ್ನ ತನಿಖೆ ಕುರಿತು ಗೌಪ್ಯತೆ ಕಾಪಾಡಿಕೊಳ್ಳಲು ಬಯಸಿದೆ. ಅಧಿಕಾರಿಗಳು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ತನಿಖೆಯ ಕಾರ್ಯಶೈಲಿಯನ್ನು ವಿವರಿಸಲು ನಿರಾಕರಿಸಿದ ಮೂಲಗಳು, ತನಿಖೆ ಅಧಿಕೃತವಾಗಿ ಆರಂಭವಾಗಿದೆ ಎಂಬುದನ್ನಷ್ಟೇ ದೃಢಪಡಿಸಿವೆ.</p>.<p>ಹಗರಣಪೀಡಿತ ಡಿಎಚ್ಎಫ್ಎಲ್ ಮತ್ತು ಯೆಸ್ ಬ್ಯಾಂಕ್ ನಡುವಣ ಸಂಬಂಧ ಕುರಿತಂತೆ ಸಿಬಿಐ ಗಮನ<br />ಹರಿಸಲಿದೆ ಎಂದು ತಿಳಿದುಬಂದಿದೆ.</p>.<p><strong>ಮಗಳಿಗೆ ತಡೆ</strong><br />ರಾಣಾ ಕಪೂರ್ ಮಗಳು ರೋಶ್ನಿ ಕಪೂರ್ ಅವರು ಲಂಡನ್ಗೆ ಹೋಗುವುದನ್ನು ತಡೆಯಲಾಗಿದೆ. ಅವರ ವಿರುದ್ಧ ‘ಲುಕ್ ಔಟ್<br />ಸರ್ಕ್ಯುಲರ್’ ಹೊರಡಿಸಲಾಗಿದೆ. ಹಾಗಾಗಿ, ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಪ್ರಯಾಣಕ್ಕೆ ತಡೆ ಒಡ್ಡಲಾಗಿದೆ. ರಾಣಾ ಅವರ ಕುಟುಂಬದ ಸದಸ್ಯರ ವಿರುದ್ಧವೂ ‘ಲುಕ್ ಔಟ್ ಸರ್ಕ್ಯುಲರ್’ ಹೊರಡಿಸಲಾಗಿದೆ.</p>.<p><strong>ಇನ್ನಷ್ಟು:</strong></p>.<p><a href="https://www.prajavani.net/business/commerce-news/ed-questions-yes-bank-founder-rana-kapoor-for-second-day-expands-raids-710773.html" itemprop="url">ಅಕ್ರಮ ಹಣ ವರ್ಗಾವಣೆ ಪ್ರಕರಣ: ರಾಣಾ ಕಪೂರ್ ವಿಚಾರಣೆ</a></p>.<p><a href="https://www.prajavani.net/business/commerce-news/sbi-sets-rs-10k-cr-cap-for-yes-bank-investment-710783.html" itemprop="url">ಯೆಸ್ ಬ್ಯಾಂಕ್ಗೆ ನೆರವು: ಶೇ 49ರಷ್ಟು ಪಾಲು ಬಂಡವಾಳ ಖರೀದಿಸಲಿದೆ ಎಸ್ಬಿಐ </a></p>.<p><a href="https://www.prajavani.net/business/commerce-news/evaluating-draft-reconstruction-scheme-for-yes-bank-says-sbi-chief-710586.html" itemprop="url">ಯೆಸ್ ಬ್ಯಾಂಕ್ ಕಾಯಕಲ್ಪಕ್ಕೆ ಶೀಘ್ರ ಕ್ರಮ: ಎಸ್ಬಿಐ ಅಧ್ಯಕ್ಷ ಭರವಸೆ </a></p>.<p><a href="https://www.prajavani.net/op-ed/editorial/yes-bank-710485.html" itemprop="url">ಸಂಪಾದಕೀಯ | ಯೆಸ್ ಬ್ಯಾಂಕ್ ಬಿಕ್ಕಟ್ಟು ತ್ವರಿತವಾಗಿ ಬಗೆಹರಿಯಲಿ </a></p>.<p><a href="https://www.prajavani.net/business/commerce-news/yes-bank-crisis-rbi-sbi-710537.html" itemprop="url">ಯೆಸ್ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಹೆಚ್ಚಿದ ದುಗುಡ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>