<p><strong>ಪಟ್ನಾ: </strong>ಎರಡು ವರ್ಷ ಹಿಂದೆ ಮೃತಪಟ್ಟ ಗುತ್ತಿಗೆ ಶಿಕ್ಷಕರೊಬ್ಬರನ್ನು ಬಿಹಾರ ಸರ್ಕಾರ ಈಗ ವಜಾ ಮಾಡಿದೆ. ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಅವರು ಮೌಲ್ಯಮಾಪನ ಮಾಡಿಲ್ಲ ಎಂಬುದು ಅವರ ವಿರುದ್ಧದ ಆರೋಪ.</p>.<p>ಸಾವಿರಾರು ಗುತ್ತಿಗೆ ಶಿಕ್ಷಕರು ಬಿಹಾರದಲ್ಲಿಫೆ. 17ರಿಂದಲೂ ಮುಷ್ಕರ ನಡೆಸುತ್ತಿದ್ದಾರೆ. ಕೆಲಸ ಕಾಯಂ ಮಾಡಿ ಮತ್ತು ಸರ್ಕಾರಿ ಶಿಕ್ಷಕರಿಗೆ ಸಮಾನವಾದ ಸಂಬಳ ನೀಡಿ ಎಂಬುದು ಅವರ ಮುಖ್ಯ ಬೇಡಿಕೆಗಳು. ಗುತ್ತಿಗೆ ಶಿಕ್ಷಕರಲ್ಲಿ ಹೆಚ್ಚಿನವರು ಮುಷ್ಕರದಲ್ಲಿ ಭಾಗವಹಿಸುತ್ತಿರುವುದರಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆಗಿಲ್ಲ.</p>.<p>ಹಾಗಾಗಿ, ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡದ ಹಲವು ಗುತ್ತಿಗೆ ಶಿಕ್ಷಕರನ್ನು ಬೆಗುಸರಾಯ್ ಜಿಲ್ಲಾ ಶಿಕ್ಷಣಾಧಿಕಾರಿ ಅಮಾನತು ಮಾಡಿದ್ದಾರೆ.ಎರಡು ವರ್ಷ ಹಿಂದೆ ಮೃತಪಟ್ಟ ರಂಜಿತ್ ಕುಮಾರ್ ಯಾದವ್ ಅವರೂ ಅಮಾನತುಗೊಂಡವರಲ್ಲಿ ಸೇರಿದ್ದಾರೆ.</p>.<p>ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಲು ಯಾದವ್ ಅವರಿಗೆ ಸೂಚಿಸಲಾಗಿದೆ. ಹಾಗಿದ್ದರೂ ಅವರು ಪರೀಕ್ಷಾ ಕೇಂದ್ರಕ್ಕೆ ಬಂದು ಕೆಲಸ ಮಾಡಿಲ್ಲ ಎಂದು ಅಮಾನತು ಆದೇಶದಲ್ಲಿ ಹೇಳಲಾಗಿದೆ. ಮುಂದಿನ ಆದೇಶದವರೆಗೆ ಅವರು ಅಮಾನತಿನಲ್ಲಿ ಇರುತ್ತಾರೆ ಎಂದೂ ತಿಳಿಸಲಾಗಿದೆ.</p>.<p>ಸಾವಿರಾರು ಶಿಕ್ಷಕರು ಪಟ್ನಾದಲ್ಲಿ ಮಂಗಳವಾರ ಭಾರಿ ಪ್ರತಿಭಟನೆ ನಡೆಸಿದ್ದಾರೆ.</p>.<p>ಮಹಾವೀರ ಮಂದಿರದಲ್ಲಿ ಇರುವ ಭಿಕ್ಷುಕರ ಸಾಲಿನಲ್ಲಿ ಕುಳಿತು ಭಿಕ್ಷೆ ಬೇಡಿದ್ದಾರೆ. ‘ನಮ್ಮ ಮುಷ್ಕರದಿಂದಾಗಿ 76 ಸಾವಿರ ಶಾಲೆಗಳು ಮುಚ್ಚಿವೆ’ ಎಂದು ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬ್ರಜನಂದನ್ ಶರ್ಮಾ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟ್ನಾ: </strong>ಎರಡು ವರ್ಷ ಹಿಂದೆ ಮೃತಪಟ್ಟ ಗುತ್ತಿಗೆ ಶಿಕ್ಷಕರೊಬ್ಬರನ್ನು ಬಿಹಾರ ಸರ್ಕಾರ ಈಗ ವಜಾ ಮಾಡಿದೆ. ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಅವರು ಮೌಲ್ಯಮಾಪನ ಮಾಡಿಲ್ಲ ಎಂಬುದು ಅವರ ವಿರುದ್ಧದ ಆರೋಪ.</p>.<p>ಸಾವಿರಾರು ಗುತ್ತಿಗೆ ಶಿಕ್ಷಕರು ಬಿಹಾರದಲ್ಲಿಫೆ. 17ರಿಂದಲೂ ಮುಷ್ಕರ ನಡೆಸುತ್ತಿದ್ದಾರೆ. ಕೆಲಸ ಕಾಯಂ ಮಾಡಿ ಮತ್ತು ಸರ್ಕಾರಿ ಶಿಕ್ಷಕರಿಗೆ ಸಮಾನವಾದ ಸಂಬಳ ನೀಡಿ ಎಂಬುದು ಅವರ ಮುಖ್ಯ ಬೇಡಿಕೆಗಳು. ಗುತ್ತಿಗೆ ಶಿಕ್ಷಕರಲ್ಲಿ ಹೆಚ್ಚಿನವರು ಮುಷ್ಕರದಲ್ಲಿ ಭಾಗವಹಿಸುತ್ತಿರುವುದರಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆಗಿಲ್ಲ.</p>.<p>ಹಾಗಾಗಿ, ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡದ ಹಲವು ಗುತ್ತಿಗೆ ಶಿಕ್ಷಕರನ್ನು ಬೆಗುಸರಾಯ್ ಜಿಲ್ಲಾ ಶಿಕ್ಷಣಾಧಿಕಾರಿ ಅಮಾನತು ಮಾಡಿದ್ದಾರೆ.ಎರಡು ವರ್ಷ ಹಿಂದೆ ಮೃತಪಟ್ಟ ರಂಜಿತ್ ಕುಮಾರ್ ಯಾದವ್ ಅವರೂ ಅಮಾನತುಗೊಂಡವರಲ್ಲಿ ಸೇರಿದ್ದಾರೆ.</p>.<p>ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಲು ಯಾದವ್ ಅವರಿಗೆ ಸೂಚಿಸಲಾಗಿದೆ. ಹಾಗಿದ್ದರೂ ಅವರು ಪರೀಕ್ಷಾ ಕೇಂದ್ರಕ್ಕೆ ಬಂದು ಕೆಲಸ ಮಾಡಿಲ್ಲ ಎಂದು ಅಮಾನತು ಆದೇಶದಲ್ಲಿ ಹೇಳಲಾಗಿದೆ. ಮುಂದಿನ ಆದೇಶದವರೆಗೆ ಅವರು ಅಮಾನತಿನಲ್ಲಿ ಇರುತ್ತಾರೆ ಎಂದೂ ತಿಳಿಸಲಾಗಿದೆ.</p>.<p>ಸಾವಿರಾರು ಶಿಕ್ಷಕರು ಪಟ್ನಾದಲ್ಲಿ ಮಂಗಳವಾರ ಭಾರಿ ಪ್ರತಿಭಟನೆ ನಡೆಸಿದ್ದಾರೆ.</p>.<p>ಮಹಾವೀರ ಮಂದಿರದಲ್ಲಿ ಇರುವ ಭಿಕ್ಷುಕರ ಸಾಲಿನಲ್ಲಿ ಕುಳಿತು ಭಿಕ್ಷೆ ಬೇಡಿದ್ದಾರೆ. ‘ನಮ್ಮ ಮುಷ್ಕರದಿಂದಾಗಿ 76 ಸಾವಿರ ಶಾಲೆಗಳು ಮುಚ್ಚಿವೆ’ ಎಂದು ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬ್ರಜನಂದನ್ ಶರ್ಮಾ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>