<p><strong>ನವದೆಹಲಿ</strong>: ‘ದೆಹಲಿಯಲ್ಲಿ ಕೋವಿಡ್–19 ಸಮುದಾಯದ ಹಂತದಲ್ಲಿ ಹರಡುತ್ತಿದೆಯೇ ಎನ್ನುವುದನ್ನು ನಿರ್ಣಯಿಸಲು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಮಂಗಳವಾರ ಸಭೆ ಕರೆದಿದೆ’ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ತಿಳಿಸಿದ್ದಾರೆ.</p>.<p>ಆನ್ಲೈನ್ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಡಿಡಿಎಂ ಸಭೆಯಲ್ಲಿ ತಜ್ಞರು ಕೂಡ ಭಾಗವಹಿಸುತ್ತಿದ್ದಾರೆ.ಒಂದು ವೇಳೆ ದೆಹಲಿಯಲ್ಲಿ ವೈರಸ್ ಸಮುದಾಯದ ಮಟ್ಟದಲ್ಲಿ ಹರಡಲಾರಂಭಿಸಿದೆ ಎಂದಾದಲ್ಲಿ, ಪರಿಸ್ಥಿತಿಯನ್ನು ಎದುರಿಸಿಲು ಎಎಪಿ ಸರ್ಕಾರ ತನ್ನ ಕಾರ್ಯತಂತ್ರವನ್ನು ಬದಲಾಯಿಸಬೇಕಾಗುತ್ತದೆ’ ಎಂದರು.</p>.<p>ಡಿಡಿಎಂಎ ಉಪಾಧ್ಯಕ್ಷರಾಗಿರುವಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಭೆಯಲ್ಲಿ ತಮ್ಮ ಪರವಾಗಿ ಭಾಗವಹಿಸಲು ಮನೀಷ್ ಸಿಸೋಡಿಯಾ ಅವರಿಗೆ ಅಧಿಕಾರ ನೀಡಿದ್ದಾರೆ. ಗಂಟಲು ನೋವು ಮತ್ತು ಜ್ವರದ ಕಾರಣ ಕೇಜ್ರಿವಾಲ್ ಸ್ವಯಂ ಕ್ವಾರಂಟೈನ್ನಲ್ಲಿದ್ದಾರೆ.</p>.<p>ಭಾನುವಾರ ದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,900ಕ್ಕೆ ತಲುಪಿದೆ. ಒಂದೇ ದಿನದಲ್ಲಿ 1,282 ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟು ಪ್ರಕರಣಗಳಲ್ಲಿ17,125 ಪ್ರಕರಣಗಳು ಸಕ್ರಿಯವಾಗಿವೆ. 10,999 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು 812 ಮಂದಿ ಸಾವನ್ನಪ್ಪಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ದೆಹಲಿಯಲ್ಲಿ ಕೋವಿಡ್–19 ಸಮುದಾಯದ ಹಂತದಲ್ಲಿ ಹರಡುತ್ತಿದೆಯೇ ಎನ್ನುವುದನ್ನು ನಿರ್ಣಯಿಸಲು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಮಂಗಳವಾರ ಸಭೆ ಕರೆದಿದೆ’ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ತಿಳಿಸಿದ್ದಾರೆ.</p>.<p>ಆನ್ಲೈನ್ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಡಿಡಿಎಂ ಸಭೆಯಲ್ಲಿ ತಜ್ಞರು ಕೂಡ ಭಾಗವಹಿಸುತ್ತಿದ್ದಾರೆ.ಒಂದು ವೇಳೆ ದೆಹಲಿಯಲ್ಲಿ ವೈರಸ್ ಸಮುದಾಯದ ಮಟ್ಟದಲ್ಲಿ ಹರಡಲಾರಂಭಿಸಿದೆ ಎಂದಾದಲ್ಲಿ, ಪರಿಸ್ಥಿತಿಯನ್ನು ಎದುರಿಸಿಲು ಎಎಪಿ ಸರ್ಕಾರ ತನ್ನ ಕಾರ್ಯತಂತ್ರವನ್ನು ಬದಲಾಯಿಸಬೇಕಾಗುತ್ತದೆ’ ಎಂದರು.</p>.<p>ಡಿಡಿಎಂಎ ಉಪಾಧ್ಯಕ್ಷರಾಗಿರುವಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಭೆಯಲ್ಲಿ ತಮ್ಮ ಪರವಾಗಿ ಭಾಗವಹಿಸಲು ಮನೀಷ್ ಸಿಸೋಡಿಯಾ ಅವರಿಗೆ ಅಧಿಕಾರ ನೀಡಿದ್ದಾರೆ. ಗಂಟಲು ನೋವು ಮತ್ತು ಜ್ವರದ ಕಾರಣ ಕೇಜ್ರಿವಾಲ್ ಸ್ವಯಂ ಕ್ವಾರಂಟೈನ್ನಲ್ಲಿದ್ದಾರೆ.</p>.<p>ಭಾನುವಾರ ದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,900ಕ್ಕೆ ತಲುಪಿದೆ. ಒಂದೇ ದಿನದಲ್ಲಿ 1,282 ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟು ಪ್ರಕರಣಗಳಲ್ಲಿ17,125 ಪ್ರಕರಣಗಳು ಸಕ್ರಿಯವಾಗಿವೆ. 10,999 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು 812 ಮಂದಿ ಸಾವನ್ನಪ್ಪಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>