<p><strong>ಕೋಲ್ಕತ್ತ</strong>: ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಭಾಗವಹಿಸಿದ್ದ ರ್ಯಾಲಿಯ ವೇಳೆ ‘ಗೋಲಿ ಮಾರೋ..’ ಘೋಷಣೆ ಕೂಗಿದ್ದ ಆರೋಪದಡಿ ಬಿಜೆಪಿಯ ಮೂವರು ಕಾರ್ಯಕರ್ತರನ್ನು ಕೋಲ್ಕತ್ತ ಪೊಲೀಸರು ಬಂಧಿಸಿದ್ದಾರೆ.</p>.<p>‘ಬಿಜೆಪಿ ಬೆಂಬಲಿಗರು ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿರುವುದು ಕಾನೂನುಬಾಹಿರ ಕ್ರಮ. ಇದು, ಪ್ರಜ್ಞಾಪೂರ್ವಕವಾಗಿ ಮಾಡಿದ ಅಪರಾಧ’ ಎಂದು ಕೋಲ್ಕತ್ತ ಪೊಲೀಸ್ನ ಹಿರಿಯ ಅಧಿಕಾರಿ ಪ್ರತಿಕ್ರಿಯಿಸಿದರು.</p>.<p>‘ವ್ಯಕ್ತಿಯೊಬ್ಬರ ದೂರು ಆಧರಿಸಿ ನ್ಯೂ ಮಾರ್ಕೆಟ್ ಪೊಲೀಸ್ ಠಾಣೆ ಸಿಬ್ಬಂದಿಯು ಧ್ರುವ ಬಸು, ಪಂಕಜ್ ಪ್ರಸಾದ್ ಮತ್ತು ಸುರೇಂದ್ರ ಕುಮಾರ ತೆವಾರಿ ಅವರನ್ನು ಭಾನುವಾರ ಬಂಧಿಸಿದ್ದಾರೆ’ ಎಂದು ತಿಳಿಸಿದರು.</p>.<p><strong>ಮಮತಾ ಬ್ಯಾನರ್ಜಿ ಟೀಕೆ:</strong> ‘ದೆಹಲಿ ಹಿಂಸಾಚಾರ ಬಿಜೆಪಿ ಪ್ರಾಯೋಜಿತ ನರಮೇಧ’ ಎಂದು ಟೀಕಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ,ನಗರದಲ್ಲಿ ಅಮಿತ್ ಶಾ ರ್ಯಾಲಿಗೆ ತೆರಳುವಾಗ ಅವರ ಬೆಂಬಲಿಗರು ‘ಗೋಲಿ ಮಾರೋ..’ ಘೋಷಣೆ ಕೂಗಿದ್ದನ್ನೂ ಖಂಡಿಸಿದರು.</p>.<p>ಬಿಜೆಪಿ ಈ ಮೂಲಕ ‘ಗುಜರಾತ್ ಮಾದರಿ ಗಲಭೆ’ಯನ್ನು ದೇಶದೆಲ್ಲೆಡೆ ಜಾರಿಗೊಳಿಸಲು ಯತ್ನಿಸುತ್ತಿದೆ. ಸಿಎಎಯಿಂದಾಗಿ ಹಲವು ಅಮಾಯಕರ ಹತ್ಯೆ ಆಗಿದೆ. ಅಮಿತ್ ಶಾ ಇದನ್ನು ನೆನಪಿಡಬೇಕು. ದೆಹಲಿ ಹಿಂಸೆಗಾಗಿ ಕ್ಷಮೆಕೋರಬೇಕು’ ಎಂದು ಆಗ್ರಹಿಸಿದರು.</p>.<p><strong>ಶಾಂತಿ ಸ್ಥಾಪನೆಗೆ ಯಾವುದೇ ಜವಾಬ್ದಾರಿಗೆ ಸಿದ್ಧ:ರಜನೀಕಾಂತ್</strong><br /><strong>ಚೆನ್ನೈ</strong>: ‘ದೇಶದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಯಾವುದೇ ಜವಾಬ್ದಾರಿ ನಿಭಾಯಿಸಲು ಸಿದ್ಧ’ ಎಂದು ಪ್ರಸಿದ್ಧ ನಟ ರಜನೀಕಾಂತ್ ಹೇಳಿದ್ದಾರೆ.</p>.<p>ಭಾನುವಾರ ತಮ್ಮ ನಿವಾಸದಲ್ಲಿ ಮುಸಲ್ಮಾನ ಸಂಘಟನೆಗಳ ಕೆಲ ಮುಖಂಡರು ಭೇಟಿಯಾದ ಹಿಂದೆಯೇ ರಜನೀಕಾಂತ್ ಈ ಕುರಿತು ಟ್ವೀಟ್ ಮಾಡಿದ್ದಾರೆ.</p>.<p>‘ದೇಶದಲ್ಲಿ ಈಗ ಮುಖ್ಯವಾಗಿ ಬೇಕಿರುವುದು ಪ್ರೀತಿ, ಏಕತೆ ಮತ್ತು ಶಾಂತಿ ಎಂಬ ಮುಸಲ್ಮಾನ ಮುಖಂಡರ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ’ ಎಂದೂ ಹೇಳಿದ್ದಾರೆ.</p>.<p>ಇದಕ್ಕೂ ಮೊದಲು ‘ತಮಿಳುನಾಡು ಜಮ್ಮಾತ್ ಉಲ್ ಉಲಾಮಾ ಸಬಾಯಿ’ ಸಂಘಟನೆಯ ಸದಸ್ಯರು ರಜನೀ ಅವರನ್ನು ಭೇಟಿಯಾಗಿದ್ದರು.</p>.<p>ದೆಹಲಿ ಹಿಂಸಾಚಾರವನ್ನು ಕಳೆದ ವಾರ ತೀವ್ರವಾಗಿ ಖಂಡಿಸಿದ್ದ ರಜನೀಕಾಂತ್, ‘ಹಿಂಸೆಯನ್ನು ಸ್ಪಷ್ಟವಾಗಿ ಹತ್ತಿಕ್ಕಬೇಕು. ಹಿಂಸಾಚಾರವನ್ನು ಹತ್ತಿಕ್ಕಲಾಗದಿದ್ದರೆ ರಾಜೀನಾಮೆಯನ್ನು ನೀಡಿ ನಡೆಯಲಿ’ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ</strong>: ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಭಾಗವಹಿಸಿದ್ದ ರ್ಯಾಲಿಯ ವೇಳೆ ‘ಗೋಲಿ ಮಾರೋ..’ ಘೋಷಣೆ ಕೂಗಿದ್ದ ಆರೋಪದಡಿ ಬಿಜೆಪಿಯ ಮೂವರು ಕಾರ್ಯಕರ್ತರನ್ನು ಕೋಲ್ಕತ್ತ ಪೊಲೀಸರು ಬಂಧಿಸಿದ್ದಾರೆ.</p>.<p>‘ಬಿಜೆಪಿ ಬೆಂಬಲಿಗರು ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿರುವುದು ಕಾನೂನುಬಾಹಿರ ಕ್ರಮ. ಇದು, ಪ್ರಜ್ಞಾಪೂರ್ವಕವಾಗಿ ಮಾಡಿದ ಅಪರಾಧ’ ಎಂದು ಕೋಲ್ಕತ್ತ ಪೊಲೀಸ್ನ ಹಿರಿಯ ಅಧಿಕಾರಿ ಪ್ರತಿಕ್ರಿಯಿಸಿದರು.</p>.<p>‘ವ್ಯಕ್ತಿಯೊಬ್ಬರ ದೂರು ಆಧರಿಸಿ ನ್ಯೂ ಮಾರ್ಕೆಟ್ ಪೊಲೀಸ್ ಠಾಣೆ ಸಿಬ್ಬಂದಿಯು ಧ್ರುವ ಬಸು, ಪಂಕಜ್ ಪ್ರಸಾದ್ ಮತ್ತು ಸುರೇಂದ್ರ ಕುಮಾರ ತೆವಾರಿ ಅವರನ್ನು ಭಾನುವಾರ ಬಂಧಿಸಿದ್ದಾರೆ’ ಎಂದು ತಿಳಿಸಿದರು.</p>.<p><strong>ಮಮತಾ ಬ್ಯಾನರ್ಜಿ ಟೀಕೆ:</strong> ‘ದೆಹಲಿ ಹಿಂಸಾಚಾರ ಬಿಜೆಪಿ ಪ್ರಾಯೋಜಿತ ನರಮೇಧ’ ಎಂದು ಟೀಕಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ,ನಗರದಲ್ಲಿ ಅಮಿತ್ ಶಾ ರ್ಯಾಲಿಗೆ ತೆರಳುವಾಗ ಅವರ ಬೆಂಬಲಿಗರು ‘ಗೋಲಿ ಮಾರೋ..’ ಘೋಷಣೆ ಕೂಗಿದ್ದನ್ನೂ ಖಂಡಿಸಿದರು.</p>.<p>ಬಿಜೆಪಿ ಈ ಮೂಲಕ ‘ಗುಜರಾತ್ ಮಾದರಿ ಗಲಭೆ’ಯನ್ನು ದೇಶದೆಲ್ಲೆಡೆ ಜಾರಿಗೊಳಿಸಲು ಯತ್ನಿಸುತ್ತಿದೆ. ಸಿಎಎಯಿಂದಾಗಿ ಹಲವು ಅಮಾಯಕರ ಹತ್ಯೆ ಆಗಿದೆ. ಅಮಿತ್ ಶಾ ಇದನ್ನು ನೆನಪಿಡಬೇಕು. ದೆಹಲಿ ಹಿಂಸೆಗಾಗಿ ಕ್ಷಮೆಕೋರಬೇಕು’ ಎಂದು ಆಗ್ರಹಿಸಿದರು.</p>.<p><strong>ಶಾಂತಿ ಸ್ಥಾಪನೆಗೆ ಯಾವುದೇ ಜವಾಬ್ದಾರಿಗೆ ಸಿದ್ಧ:ರಜನೀಕಾಂತ್</strong><br /><strong>ಚೆನ್ನೈ</strong>: ‘ದೇಶದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಯಾವುದೇ ಜವಾಬ್ದಾರಿ ನಿಭಾಯಿಸಲು ಸಿದ್ಧ’ ಎಂದು ಪ್ರಸಿದ್ಧ ನಟ ರಜನೀಕಾಂತ್ ಹೇಳಿದ್ದಾರೆ.</p>.<p>ಭಾನುವಾರ ತಮ್ಮ ನಿವಾಸದಲ್ಲಿ ಮುಸಲ್ಮಾನ ಸಂಘಟನೆಗಳ ಕೆಲ ಮುಖಂಡರು ಭೇಟಿಯಾದ ಹಿಂದೆಯೇ ರಜನೀಕಾಂತ್ ಈ ಕುರಿತು ಟ್ವೀಟ್ ಮಾಡಿದ್ದಾರೆ.</p>.<p>‘ದೇಶದಲ್ಲಿ ಈಗ ಮುಖ್ಯವಾಗಿ ಬೇಕಿರುವುದು ಪ್ರೀತಿ, ಏಕತೆ ಮತ್ತು ಶಾಂತಿ ಎಂಬ ಮುಸಲ್ಮಾನ ಮುಖಂಡರ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ’ ಎಂದೂ ಹೇಳಿದ್ದಾರೆ.</p>.<p>ಇದಕ್ಕೂ ಮೊದಲು ‘ತಮಿಳುನಾಡು ಜಮ್ಮಾತ್ ಉಲ್ ಉಲಾಮಾ ಸಬಾಯಿ’ ಸಂಘಟನೆಯ ಸದಸ್ಯರು ರಜನೀ ಅವರನ್ನು ಭೇಟಿಯಾಗಿದ್ದರು.</p>.<p>ದೆಹಲಿ ಹಿಂಸಾಚಾರವನ್ನು ಕಳೆದ ವಾರ ತೀವ್ರವಾಗಿ ಖಂಡಿಸಿದ್ದ ರಜನೀಕಾಂತ್, ‘ಹಿಂಸೆಯನ್ನು ಸ್ಪಷ್ಟವಾಗಿ ಹತ್ತಿಕ್ಕಬೇಕು. ಹಿಂಸಾಚಾರವನ್ನು ಹತ್ತಿಕ್ಕಲಾಗದಿದ್ದರೆ ರಾಜೀನಾಮೆಯನ್ನು ನೀಡಿ ನಡೆಯಲಿ’ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>