ಕೊನೆ ಐಪಿಎಲ್ ಪಂದ್ಯದ ನಂತರ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ವೊಂದನ್ನು ಪ್ರಕಟಿಸಿದ್ದ ವಿರಾಟ್ ಕೊಹ್ಲಿ, ‘ನೀವು ಇಲ್ಲಾಂದ್ರೆ ನಾವು ಏನು ಅಲ್ಲಾ’ ಎನ್ನುವ ಮೂಲಕ ಅಭಿಮಾನಿಗಳ ಬೆಂಬಲ ನಿರೀಕ್ಷಿಸಿ ವಿಶ್ವಾಸಯುತವಾಗಿ ಮಾತನಾಡಿದ್ದರು. ಕೊಹ್ಲಿ ಅವರ ಆದೇ ಅಭಿಪ್ರಾಯವನ್ನು ಉಲ್ಲೇಖಿಸಿ ಇಂದು ಟ್ವೀಟ್ ಮಾಡಿರುವ ವಿಜಯ್ ಮಲ್ಯ ‘ಆರ್ಸಿಬಿಯದ್ದು ಸದಾ ಉತ್ತಮ ಲೈನ್ ಆಪ್. ಆದರೆ, ಅದು ಕಾಗದದಲ್ಲಿ ಮಾತ್ರ. ಮರದ ಚಮಚದಿಂದ (ಬಹುಶಃ ಮರದ ಬ್ಯಾಟ್) ಧ್ವಂಸಗೊಳಿಸಿಬಿಟ್ಟಿರಿ,’ ಎಂದು ನಕಾರಾತ್ಮಕವಾಗಿ ಮಾತನಾಡಿದ್ದಾರೆ.