<p><strong>ನವದೆಹಲಿ: </strong>ಭಾನುವಾರ ಮಧ್ಯಾಹ್ನ ದೆಹಲಿಯಲ್ಲಿ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪ ಅಧ್ಯಯನ ಕೇಂದ್ರದ ಪ್ರಕಾರ ಮಧ್ಯಾಹ್ನ 1.45ಕ್ಕೆ ಈ ಭೂಕಂಪಿಸಿದೆ. ಇದುವರೆಗೂ ಯಾವುದೇ ಜೀವ ಹಾನಿಯಾದ ಬಗ್ಗೆ ಮಾಹಿತಿ ಇಲ್ಲ. ಭೂಕಂಪಿಸಿದ ಅನುಭವವಾಗಿರುವುದನ್ನುದೆಹಲಿಯ ಪೊಲೀಸರು ತಿಳಿಸಿದ್ದಾರೆ.</p>.<p>ಈ ಸಂಬಂಧ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದಾಗಿಸ್ಥಳೀಯ ಆಡಳಿತ ತಿಳಿಸಿದೆ.</p>.<p>ಲಘು ಭೂಕಂಪವುರಿಕ್ಟರ್ ಮಾಪಕದಲ್ಲಿ 3.4 ರಷ್ಟಿತ್ತು ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ಸೋನಿಯಾ ವಿಹಾರದಹವಾಮಾನ ಇಲಾಖೆಯಲ್ಲಿ ಭೂಕಂಪನ ದೃಶ್ಯಗಳು ದಾಖಲಾಗಿವೆ.ಇದು ದೆಹಲಿಯಲ್ಲಿ ಈ ಸಾಲಿನಲ್ಲಿ ಸಂಭವಿಸಿದ ಮೂರನೇ ಭೂಕಂಪವಾಗಿದೆ. ಈ ಸಂಬಂಧ ಹಲವು ನಾಗರಿಕರು ಹವಾಮಾನ ಇಲಾಖೆಯ ಸಹಾಯವಾಣಿಗೆಕರೆ ಮಾಡಿ ಆತಂಕ ವ್ಯಕ್ತಪಡಿಸಿದ್ದಾರೆ.</p>.<p>ಭೂಕಂಪ ಭೂಮಿಯ 5 ಕಿಲೋ ಮೀಟರ್ ಆಳದಲ್ಲಿಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ದೆಹಲಿ ಮತ್ತು ಸುತ್ತಮುತ್ತ ಅನೇಕ ದೋಷಗಳಿವೆ. ಈ ದೋಷಗಳು ಭೂಕಂಪಗಳಿಗೆ ಕಾರಣವಾಗಬಹುದು. ಆದರೆ ಏನಾಯಿತು ಎಂಬುದನ್ನು ನೋಡಲು ನಮ್ಮ ಕೇಂದ್ರದಲ್ಲಿ ದಾಖಲಾಗಿರುವದಾಖಲೆಗಳು ಹಾಗೂ ಸಂಶೋಧನೆಗಳನ್ನು ಪರಿಶೀಲಿಸಬೇಕಾಗಿದೆ ಎಂದು ಭೂಕಂಪಶಾಸ್ತ್ರಜ್ಞ ಎ.ಪಿ. ಪಾಂಡೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಭಾನುವಾರ ಮಧ್ಯಾಹ್ನ ದೆಹಲಿಯಲ್ಲಿ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪ ಅಧ್ಯಯನ ಕೇಂದ್ರದ ಪ್ರಕಾರ ಮಧ್ಯಾಹ್ನ 1.45ಕ್ಕೆ ಈ ಭೂಕಂಪಿಸಿದೆ. ಇದುವರೆಗೂ ಯಾವುದೇ ಜೀವ ಹಾನಿಯಾದ ಬಗ್ಗೆ ಮಾಹಿತಿ ಇಲ್ಲ. ಭೂಕಂಪಿಸಿದ ಅನುಭವವಾಗಿರುವುದನ್ನುದೆಹಲಿಯ ಪೊಲೀಸರು ತಿಳಿಸಿದ್ದಾರೆ.</p>.<p>ಈ ಸಂಬಂಧ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದಾಗಿಸ್ಥಳೀಯ ಆಡಳಿತ ತಿಳಿಸಿದೆ.</p>.<p>ಲಘು ಭೂಕಂಪವುರಿಕ್ಟರ್ ಮಾಪಕದಲ್ಲಿ 3.4 ರಷ್ಟಿತ್ತು ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ಸೋನಿಯಾ ವಿಹಾರದಹವಾಮಾನ ಇಲಾಖೆಯಲ್ಲಿ ಭೂಕಂಪನ ದೃಶ್ಯಗಳು ದಾಖಲಾಗಿವೆ.ಇದು ದೆಹಲಿಯಲ್ಲಿ ಈ ಸಾಲಿನಲ್ಲಿ ಸಂಭವಿಸಿದ ಮೂರನೇ ಭೂಕಂಪವಾಗಿದೆ. ಈ ಸಂಬಂಧ ಹಲವು ನಾಗರಿಕರು ಹವಾಮಾನ ಇಲಾಖೆಯ ಸಹಾಯವಾಣಿಗೆಕರೆ ಮಾಡಿ ಆತಂಕ ವ್ಯಕ್ತಪಡಿಸಿದ್ದಾರೆ.</p>.<p>ಭೂಕಂಪ ಭೂಮಿಯ 5 ಕಿಲೋ ಮೀಟರ್ ಆಳದಲ್ಲಿಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ದೆಹಲಿ ಮತ್ತು ಸುತ್ತಮುತ್ತ ಅನೇಕ ದೋಷಗಳಿವೆ. ಈ ದೋಷಗಳು ಭೂಕಂಪಗಳಿಗೆ ಕಾರಣವಾಗಬಹುದು. ಆದರೆ ಏನಾಯಿತು ಎಂಬುದನ್ನು ನೋಡಲು ನಮ್ಮ ಕೇಂದ್ರದಲ್ಲಿ ದಾಖಲಾಗಿರುವದಾಖಲೆಗಳು ಹಾಗೂ ಸಂಶೋಧನೆಗಳನ್ನು ಪರಿಶೀಲಿಸಬೇಕಾಗಿದೆ ಎಂದು ಭೂಕಂಪಶಾಸ್ತ್ರಜ್ಞ ಎ.ಪಿ. ಪಾಂಡೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>