<p><strong>ಜಮ್ಷೆಡ್ಪುರ:</strong> ‘ದೇಶದ ಮೊದಲ ಸಗಣಿ ಮುಕ್ತ ನಗರ’ ಮಾಡುವ ಸಲುವಾಗಿ ಜಮ್ಷೆಡ್ಪುರದಲ್ಲಿ ಯೋಜನೆಯೊಂದನ್ನು ಜಾರಿಗೊಳಿಸಲು ಜಾರ್ಖಂಡ್ ಸರ್ಕಾರ ಮುಂದಾಗಿದೆ.</p>.<p>ಈ ನಿಟ್ಟಿನಲ್ಲಿ ಜಮ್ಷೆಡ್ಪುರ ಪ್ರಾದೇಶಿಕ ಸಮಿತಿ (ಜೆಎನ್ಎಸಿ) ಈಚೆಗೆ ಟೆಂಡರ್ ಕರೆದಿತ್ತು. ಬಿಡ್ಡಿಂಗ್ನಲ್ಲಿ ಗೆಲುವು ಸಾಧಿಸಿರುವ ನಗರದ ಎರಡು ಸಂಸ್ಥೆಗಳು ಯೋಜನೆ ಬಗ್ಗೆಒಪ್ಪಂದ ಮಾಡಿಕೊಂಡಿವೆ.</p>.<p>ಇಂತಹ ಯೋಜನೆಭಾರತದಲ್ಲಿಯೇ ಮೊದಲನೆಯದಾಗಿದೆ ಎಂದು ಸಮಿತಿಯ ವಿಶೇಷ ಅಧಿಕಾರಿ ಸಂಜಯ್ ಕುಮಾರ್ ಪಾಂಡೆ<br />ತಿಳಿಸಿದ್ದಾರೆ.</p>.<p>‘ಜಮ್ಷೆಡ್ಪುರದಲ್ಲಿ 350ಕ್ಕೂ ಹೆಚ್ಚು ಕೊಟ್ಟಿಗೆಗಳಿದ್ದು, ಇವೆಲ್ಲವೂ ಅಕ್ರಮವಾದವು. ಸಗಣಿ ವಿಲೇವಾರಿಗೆ ಈ ಕೊಟ್ಟಿಗೆಗಳಲ್ಲಿ ಯಾವುದೇ ರೀತಿಯ ವ್ಯವಸ್ಥೆ ಇಲ್ಲ. ನಗರದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಸಗಣಿಯಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂದು, ಕೊಟ್ಟಿಗೆಗಳು ಹಾಗೂ ಹಸುಗಳ ಮಾಲೀಕರ ವಿರುದ್ಧ ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬರುತ್ತಿದ್ದವು’ ಎಂದು ಪಾಂಡೆ ತಿಳಿಸಿದ್ದಾರೆ.</p>.<p><strong>ಯೋಜನೆ ಏನು?:</strong>ಒಪ್ಪಂದ ಮಾಡಿಕೊಂಡಿರುವ ಎರಡೂ ಸಂಸ್ಥೆಗಳು ದಿನನಿತ್ಯದ ಆಧಾರದ ಮೇಲೆ ನಗರದಲ್ಲಿ ಸಗಣಿ ಸಂಗ್ರಹಿಸಿ ಅವುಗಳ ಸೂಕ್ತ ವಿಲೇವಾರಿ ಮಾಡುತ್ತವೆ.</p>.<p>ಮೊದಲಿಗೆ, ನಗರದಲ್ಲಿರುವ ಒಟ್ಟು ಕೊಟ್ಟಿಗೆಗಳು ಹಾಗೂ ಹಸುಗಳನ್ನು ಗುರುತಿಸಲು ಮತ್ತು ಪ್ರತಿದಿನ ಸಂಗ್ರಹಿಸಬೇಕಾದ ಸಗಣಿ ಪ್ರಮಾಣ ಅಂದಾಜಿಸಲು ಸಮೀಕ್ಷೆ ನಡೆಸುವಂತೆಸಂಸ್ಥೆಗಳಿಗೆ ಸೂಚಿಸಲಾಗಿದೆ. ಸೆಪ್ಟೆಂಬರ್ 15ರಿಂದ ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ಪಾಂಡೆ ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮ್ಷೆಡ್ಪುರ:</strong> ‘ದೇಶದ ಮೊದಲ ಸಗಣಿ ಮುಕ್ತ ನಗರ’ ಮಾಡುವ ಸಲುವಾಗಿ ಜಮ್ಷೆಡ್ಪುರದಲ್ಲಿ ಯೋಜನೆಯೊಂದನ್ನು ಜಾರಿಗೊಳಿಸಲು ಜಾರ್ಖಂಡ್ ಸರ್ಕಾರ ಮುಂದಾಗಿದೆ.</p>.<p>ಈ ನಿಟ್ಟಿನಲ್ಲಿ ಜಮ್ಷೆಡ್ಪುರ ಪ್ರಾದೇಶಿಕ ಸಮಿತಿ (ಜೆಎನ್ಎಸಿ) ಈಚೆಗೆ ಟೆಂಡರ್ ಕರೆದಿತ್ತು. ಬಿಡ್ಡಿಂಗ್ನಲ್ಲಿ ಗೆಲುವು ಸಾಧಿಸಿರುವ ನಗರದ ಎರಡು ಸಂಸ್ಥೆಗಳು ಯೋಜನೆ ಬಗ್ಗೆಒಪ್ಪಂದ ಮಾಡಿಕೊಂಡಿವೆ.</p>.<p>ಇಂತಹ ಯೋಜನೆಭಾರತದಲ್ಲಿಯೇ ಮೊದಲನೆಯದಾಗಿದೆ ಎಂದು ಸಮಿತಿಯ ವಿಶೇಷ ಅಧಿಕಾರಿ ಸಂಜಯ್ ಕುಮಾರ್ ಪಾಂಡೆ<br />ತಿಳಿಸಿದ್ದಾರೆ.</p>.<p>‘ಜಮ್ಷೆಡ್ಪುರದಲ್ಲಿ 350ಕ್ಕೂ ಹೆಚ್ಚು ಕೊಟ್ಟಿಗೆಗಳಿದ್ದು, ಇವೆಲ್ಲವೂ ಅಕ್ರಮವಾದವು. ಸಗಣಿ ವಿಲೇವಾರಿಗೆ ಈ ಕೊಟ್ಟಿಗೆಗಳಲ್ಲಿ ಯಾವುದೇ ರೀತಿಯ ವ್ಯವಸ್ಥೆ ಇಲ್ಲ. ನಗರದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಸಗಣಿಯಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂದು, ಕೊಟ್ಟಿಗೆಗಳು ಹಾಗೂ ಹಸುಗಳ ಮಾಲೀಕರ ವಿರುದ್ಧ ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬರುತ್ತಿದ್ದವು’ ಎಂದು ಪಾಂಡೆ ತಿಳಿಸಿದ್ದಾರೆ.</p>.<p><strong>ಯೋಜನೆ ಏನು?:</strong>ಒಪ್ಪಂದ ಮಾಡಿಕೊಂಡಿರುವ ಎರಡೂ ಸಂಸ್ಥೆಗಳು ದಿನನಿತ್ಯದ ಆಧಾರದ ಮೇಲೆ ನಗರದಲ್ಲಿ ಸಗಣಿ ಸಂಗ್ರಹಿಸಿ ಅವುಗಳ ಸೂಕ್ತ ವಿಲೇವಾರಿ ಮಾಡುತ್ತವೆ.</p>.<p>ಮೊದಲಿಗೆ, ನಗರದಲ್ಲಿರುವ ಒಟ್ಟು ಕೊಟ್ಟಿಗೆಗಳು ಹಾಗೂ ಹಸುಗಳನ್ನು ಗುರುತಿಸಲು ಮತ್ತು ಪ್ರತಿದಿನ ಸಂಗ್ರಹಿಸಬೇಕಾದ ಸಗಣಿ ಪ್ರಮಾಣ ಅಂದಾಜಿಸಲು ಸಮೀಕ್ಷೆ ನಡೆಸುವಂತೆಸಂಸ್ಥೆಗಳಿಗೆ ಸೂಚಿಸಲಾಗಿದೆ. ಸೆಪ್ಟೆಂಬರ್ 15ರಿಂದ ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ಪಾಂಡೆ ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>