ದೂರು ನೀಡುವಲ್ಲಿ ವಿಳಂಬ ಆಗಿರುವ ವಿಚಾರವನ್ನು ಉಲ್ಲೇಖಿಸಿದ ನ್ಯಾಯಾಧೀಶರು, ‘ಸಂತ್ರಸ್ತೆಯು ಗ್ರಾಮೀಣ ಪ್ರದೇಶದ ಹುಡುಗಿಯೇ ವಿನಾ ಮಹಾನಗರದ ಸುಶಿಕ್ಷಿತ ಕುಟುಂಬದವಳಲ್ಲ. ಆಕೆಗೆ ಬೆದರಿಕೆ ಇತ್ತು. ಆತಂಕಕ್ಕೆ ಒಳಗಾಗಿದ್ದಳು. ಆದ್ದರಿಂದ ಸ್ವಲ್ಪ ವಿಳಂಬವಾಗಿ ಆಕೆ ನಿರ್ಧಾರಗಳನ್ನು ತೆಗೆದುಕೊಂಡಳು’ ಎಂದು ಅಭಿಪ್ರಾಯಪಟ್ಟಿದ್ದಾರೆ.