ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್ 1ರಿಂದ 4 ಎಕ್ಸ್‌ಪ್ರೆಸ್‌ ರೈಲು ಸಂಚಾರ

Last Updated 27 ಮೇ 2020, 19:46 IST
ಅಕ್ಷರ ಗಾತ್ರ

ಕಲಬುರ್ಗಿ: ದಕ್ಷಿಣ ಮಧ್ಯ ರೈಲ್ವೆಯು ಜೂನ್‌ 1ರಿಂದ ಮುಂಬೈನಿಂದ ಬೆಂಗಳೂರು, ಗದಗ, ಹೈದರಾಬಾದ್‌‌, ಭುವನೇಶ್ವರ ನಗರಗಳಿಗೆ ರೈಲು ಸೇವೆ ಪುನರಾರಂಭಿಸಲಿದೆ.ಐಆರ್‌ಸಿಟಿಸಿ ಟಿಕೆಟ್‌ ಬುಕ್ಕಿಂಗ್‌ ಆರಂಭಿಸಿದೆ.

ಮುಂಬೈ ಸಿಎಸ್‌ಟಿನಿಂದ ಭುವನೇಶ್ವರಕ್ಕೆ ತೆರಳುವ ಕೊನಾರ್ಕ್ ಎಕ್ಸ್‌ಪ್ರೆಸ್‌, ಮುಂಬೈ–ಗದಗ ಎಕ್ಸ್‌ಪ್ರೆಸ್, ಮುಂಬೈ–ಬೆಂಗಳೂರು ಮಧ್ಯೆ ಸಂಚರಿಸುವ ಉದ್ಯಾನ್ ಎಕ್ಸ್‌ಪ್ರೆಸ್‌ ಹಾಗೂ ಮುಂಬೈ–ಹೈದರಾಬಾದ್ ಮಧ್ಯೆ ನಿತ್ಯ ಸಂಚರಿಸುವ‌ ಹುಸೇನ್‌ ಸಾಗರ‌ ಎಕ್ಸ್‌ಪ್ರೆಸ್‌ ರೈಲುಗಳ ಸೇವೆ ಆರಂಭಗೊಳ್ಳಲಿದೆ.

ಕಲಬುರ್ಗಿ ಮಾರ್ಗವಾಗಿ ತೆರಳುವ ಮೂರು ರೈಲುಗಳುಕಲಬುರ್ಗಿ ಹಾಗೂ ವಾಡಿಯಲ್ಲಿ ನಿಲುಗಡೆ ಆಗಲಿವೆ. ಪ್ರಯಾಣಿಕರ ಆರೋಗ್ಯ ತಪಾಸಣೆಗೆ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡುವಂತೆದಕ್ಷಿಣ ಮಧ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಜಯ್ ಕುಮಾರ್ ಅವರು ಕಲಬುರ್ಗಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT