ವರ್ಗೀಸ್ ಹಾಗೂ ಅಖ್ತರ್ ಸಲ್ಲಿಸಿದ್ದಅರ್ಜಿ ವಿಚಾರಣೆ ನಡೆಸಿದನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಹಾಗೂ ಎಸ್.ಕೆ. ಕೌಲ್ ಅವರನ್ನೂ ಒಳಗೊಂಡ ನ್ಯಾಯಪೀಠ, ‘ವರದಿ ಪ್ರತಿಯನ್ನು ಅಖ್ತರ್ ಹಾಗೂ ವರ್ಗೀಸ್ ಅವರ ವಕೀಲರಿಗೆ ನೀಡುವುದರಿಂದ, ವರದಿಯಲ್ಲಿ ಉಲ್ಲೇಖವಾಗಿರುವ ವ್ಯಕ್ತಿಗಳ ಕುರಿತು ಪೂರ್ವಗ್ರಹ ಉಂಟು ಮಾಡುವ ಸಾಧ್ಯತೆ ಇದೆ. ಆದ್ದರಿಂದ ಅವರಿಗೆ ಪ್ರತಿ ನೀಡಬಾರದು’ ಎನ್ನುವ ಗುಜರಾತ್ ಸರ್ಕಾರದ ವಾದವನ್ನು ಒಪ್ಪಿಕೊಳ್ಳಲಿಲ್ಲ.