ಬುಧವಾರ ಮುಂಬೈಯಲ್ಲಿ ನಡೆದಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೂಹಿ,ಪ್ರತಿಕ್ರಿಯಿಸಲೇ ಬೇಕು ಎಂಬ ನೆಪದಿಂದ ಕೆಲವರು ಪ್ರಶ್ನಿಸುತ್ತಾರೆ. ಅಂತವರಿಗೆ ಈ ಪರಿಸ್ಥಿತಿಯನ್ನು ಅರ್ಥ ಮಾಡಲು ಸಮಯ ಕೊಡಬೇಕು. ನಾವು ಕೆಲಸಕ್ಕೆ ಹೋಗುತ್ತೇವೆ. ಆ ಕಾರ್ಯವನ್ನು ಹೇಗೆ ಮಾಡಬೇಕು ಎಂದು ಯೋಚಿಸುತ್ತೇವೆ. ಆಗ ಎಲ್ಲಿಯಾದರೂ, ಏನಾದರೂ ಘಟನೆ ಸಂಭವಿಸಿದರೆ ಮಾಧ್ಯಮದವರು ಬಂದು ಈ ಬಗ್ಗೆ ನೀವು ಏನು ಹೇಳುತ್ತೀರಿ ಎಂದು ಕೇಳುತ್ತಾರೆ. ಅಲ್ಲಿ ಏನಾಗಿದೆ ಎಂಬುದು ನಮಗೆ ಗೊತ್ತಿರುವುದಿಲ್ಲ, ಅದು ನಮಗೆ ಅರ್ಥವಾಗಿರುವುದೂ ಇಲ್ಲ, ಆದರೂ ಪ್ರತಿಕ್ರಿಯಿಸುತ್ತಾರೆ.