<p><strong>ಅಮರಾವತಿ:</strong> ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನಿಂದಚೇತರಿಸಿಕೊಳ್ಳುವ ಮೊದಲೇ ಎನ್.ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಕ್ಷಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ.</p>.<p>ರಾಜ್ಯಸಭೆಯಲ್ಲಿ ಪಕ್ಷದ ಆರು ಸದಸ್ಯರ ಪೈಕಿ ಮಾಜಿ ಸಚಿವ ವೈ.ಎಸ್.ಚೌಧರಿ ಸೇರಿದಂತೆ ನಾಲ್ವರು ಸದಸ್ಯರು ಬಿಜೆಪಿ ಜೊತೆ ಸಖ್ಯ ಬೆಳೆಸಿದ್ದು, ಪ್ರತ್ಯೇಕ ಗುಂಪು ಎಂದು ಪರಿಗಣಿಸಲು ರಾಜ್ಯಸಭೆ ಅಧ್ಯಕ್ಷರಿಗೆ ಕೋರಿದ್ದಾರೆ.</p>.<p>ಚೌಧರಿ ಅವರಲ್ಲದೆ ಸಿ.ಎಂ.ರಮೇಶ್, ಟಿ.ಜಿ.ವೆಂಕಟೇಶ್, ಗರಿಕಪತಿ ಮೋಹನ್ ರಾವ್ ಅವರೇ ಬಿಜೆಪಿ ಜೊತೆಗೆ ಸಂಪರ್ಕದಲ್ಲಿರುವ ತೆಲುಗುದೇಶಂ ಪಕ್ಷದ ಇತರೆ ಸದಸ್ಯರು.</p>.<p>ಪಕ್ಷದ ರಾಜ್ಯಸಭೆ ಸದಸ್ಯರ ಈ ನಡೆಯ ಹಿಂದೆಯೇ, ಇನ್ನೊಂದೆಡೆ ಪಕ್ಷದ, ಬಹುತೇಕ ಕಾಪು ಸಮುದಾಯ ಪ್ರತಿನಿಧಿಸುವ 20 ಮಾಜಿ ಶಾಸಕರು ಕಾಕಿನಾಡದಲ್ಲಿ ಪ್ರತ್ಯೇಕವಾಗಿ ಸಭೆ ಸೇರಿ ಚರ್ಚಿಸಿದ್ದಾರೆ.</p>.<p>ಚಂದ್ರಬಾಬು ನಾಯ್ಡು ಅವರು ಪ್ರಸ್ತುತ ಕುಟುಂಬ ಸದಸ್ಯರ ಜೊತೆಗೆ ಯೂರೋಪ್ ಪ್ರವಾಸದಲ್ಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಈ ಬೆಳವಣಿಗೆಗಳು ನಡೆದಿವೆ.</p>.<p>ಪ್ರತ್ಯೇಕ ಸಭೆ ನಡೆಸಿರುವ ಮಾಜಿ ಶಾಸಕರು ಬಿಜೆಪಿ ಸೇರ್ಪಡೆಯನ್ನು ತಳ್ಳಿಹಾಕಿದ್ದರೂ, ಮೂಲಗಳ ಪ್ರಕಾರ ನಾಯ್ಡು ಅವರು ವಿದೇಶ ಪ್ರವಾಸದಿಂದ ಹಿಂದಿರುಗುವ ಮುನ್ನವೇ ಪಕ್ಷಾಂತರ ಬೆಳವಣಿಗೆಗಳು ಪೂರ್ಣಗೊಳ್ಳಲಿವೆ.</p>.<p>ಈ ಮಧ್ಯೆ, ದಿಢೀರ್ ಬೆಳವಣಿಗೆ ಕುರಿತಂತೆ ಚಂದ್ರಬಾಬುನಾಯ್ಡು ಅವರು ಯುರೋಪ್ನಿಂದಲೇ ಮಾತನಾಡಿದ್ದು, ವೈ.ಎಸ್. ಚೌಧರಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.</p>.<p>ಟಿ.ವಿ.ವಾಹಿನಿಯೊಂದಕ್ಕೆ ಈಚೆಗೆ ನೀಡಿದ್ದ ಸಂದರ್ಶನದಲ್ಲಿಯೂ ಚೌಧರಿ ತಮ್ಮ ಬೇಸರವನ್ನು ಹೊರಹಾಕಿದ್ದರು. ‘ನಾನು ಪಕ್ಷ ಬಿಟ್ಟ ಸಂದರ್ಭದಲ್ಲಿ ಅದಕ್ಕೆ ಕಾರಣಗಳನ್ನು ವಿವರಿಸುತ್ತೇನೆ’ ಎಂದೂ ಹೇಳಿದ್ದರು.</p>.<p>ವೈ.ಎಸ್.ಚೌಧರಿ ಅವರು ಉದ್ಯಮಿ. ಜೊತೆಗೆ ಇನ್ನೊಬ್ಬ ಸದಸ್ಯ ಸಿ.ಎಂ.ರಮೇಶ್ ಅವರು ಬ್ಯಾಂಕ್ ಸಾಲ ಮರುಪಾವತಿಗೆ ವಿಫಲ ಪ್ರಕರಣದಲ್ಲಿ ಸಿಬಿಐ, ಜಾರಿನಿರ್ದೇಶನಾಲಯದ ವಿಚಾರಣೆ ಎದುರಿಸಿದ್ದಾರೆ.</p>.<p>ಇನ್ನೊಂದೆಡೆ, ಬಿಜೆಪಿ ಹೈಕಮಾಂಡ್ ಕೂಡಾ ಎನ್ಟಿಆರ್ ಪುತ್ರಿ ಪುರಂದೇಶ್ವರಿ ಸೇರಿದಂತೆ ಪಕ್ಷದ ರಾಜ್ಯ ನಾಯಕರ ವಿರುದ್ಧ ಅಸಮಾಧಾನ ಹೊಂದಿದೆ. ರಾಜ್ಯದಲ್ಲಿ ಪರಿಣಾಮಕಾರಿ ನಾಯಕತ್ವ ರೂಪಿಸಲು ವಿಫಲರಾಗಿರುವ ಬಿಜೆಪಿ ಈಗ ಕಾಪು ಸಮುದಾಯದ ನಾಯಕರನ್ನು ಸೆಳೆಯಲು ಮುಂದಾಗಿದೆ.</p>.<p>ಈ ಮಧ್ಯೆ ಕೆಲ ಶಾಸಕರೂ ಕೂಡಾ ಬಿಜೆಪಿಗೆ ಪಕ್ಷಾಂತರ ಮಾಡಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಇದರೊಂದಿಗೆ, ಚಂದ್ರಬಾಬು ನಾಯ್ಡು ಅವರಿಗೆ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನಮಾನವು ತಪ್ಪುವ ಆತಂಕವಿದೆ.</p>.<p>‘ಸೇರ್ಪಡೆಗೆ ನಾವು ಮುಕ್ತ ಅವಕಾಶ ನೀಡಿದರೆ 2024ರ ವೇಳೆಗೆ ರಾಜ್ಯದಲ್ಲಿ ಟಿಡಿಪಿ ಉಳಿಯುವುದಿಲ್ಲ’ ಎಂದು ಬಿಜೆಪಿ ನಾಯಕ ವಿಷ್ಣು ಕುಮಾರ್ ರಾಜು ಹೇಳಿದರು. ಇನ್ನೊಬ್ಬ ಮುಖಂಡ ವಿಷ್ಣುವರ್ಧನ ರೆಡ್ಡಿ, ‘ನಾಯ್ಡು ಅವರು ವಿದೇಶದಿಂದ ಮರಳುವ ಮೊದಲೇ ಅನಿರೀಕ್ಷಿತ ಬೆಳವಣಿಗೆಗಳು ನಡೆಯಲಿವೆ’ ಎಂದಿದ್ದಾರೆ.</p>.<p>ಟಿಡಿಪಿ ನಾಯಕರು ಪಕ್ಷದ ಪ್ರಧಾನ ಕಾರ್ಯದರ್ಶಿ, ನಾಯ್ಡು ಪುತ್ರ ನಾರಾ ಲೋಕೇಶ್ ವರ್ತನೆಯಿಂದ ಬೇಸರಗೊಂಡಿದ್ದಾರೆ. ಚುನಾವಣೆ ಹಿನ್ನಡೆಗಾಗಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ‘ಚುನಾವಣೆಯಲ್ಲಿ ಪಕ್ಷದ ಸೋಲಿನ ಹೊಣೆ ಹೊತ್ತು ಲೋಕೇಶ್ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದ್ದರು.</p>.<p><strong>ಕಾಕಿನಾಡ: ಟಿಡಿಪಿ ಮಾಜಿ ಶಾಸಕರ ಸಭೆ<br />ಅಮರಾವತಿ:</strong> ಪಕ್ಷದ ರಾಜ್ಯಸಭೆ ಸದಸ್ಯರು ಬಿಜೆಪಿಗೆ ಸೇರಿದ ಬೆನ್ನಹಿಂದೆಯೇ, ಕಾಪು ಸಮುದಾಯ ಪ್ರತಿನಿಧಿಸುವ ಪಕ್ಷದ 20 ಮಾಜಿ ಶಾಸಕರು ಕಾಕಿನಾಡದಲ್ಲಿ ಪ್ರತ್ಯೇಕವಾಗಿ ಸಭೆ ಸೇರಿ ಚರ್ಚಿಸಿದ್ದಾರೆ.</p>.<p>ಚಂದ್ರಬಾಬು ನಾಯ್ಡು ಪ್ರಸ್ತುತ ಯುರೋಪ್ ಪ್ರವಾಸದಲ್ಲಿದ್ದಾರೆ. ಪ್ರತ್ಯೇಕ ಸಭೆ ನಡೆಸಿರುವ ಮಾಜಿ ಶಾಸಕರು ಬಿಜೆಪಿ ಸೇರ್ಪಡೆಯನ್ನು ತಳ್ಳಿಹಾಕಿದ್ದರೂ, ಮೂಲಗಳ ಪ್ರಕಾರ ನಾಯ್ಡು ಅವರು ವಿದೇಶ ಪ್ರವಾಸದಿಂದ ಹಿಂದಿರುಗುವ ಮುನ್ನವೇ ಪಕ್ಷಾಂತರ ಬೆಳವಣಿಗೆ ನಡೆದರೆ ಆಶ್ಚರ್ಯವಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಮರಾವತಿ:</strong> ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನಿಂದಚೇತರಿಸಿಕೊಳ್ಳುವ ಮೊದಲೇ ಎನ್.ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಕ್ಷಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ.</p>.<p>ರಾಜ್ಯಸಭೆಯಲ್ಲಿ ಪಕ್ಷದ ಆರು ಸದಸ್ಯರ ಪೈಕಿ ಮಾಜಿ ಸಚಿವ ವೈ.ಎಸ್.ಚೌಧರಿ ಸೇರಿದಂತೆ ನಾಲ್ವರು ಸದಸ್ಯರು ಬಿಜೆಪಿ ಜೊತೆ ಸಖ್ಯ ಬೆಳೆಸಿದ್ದು, ಪ್ರತ್ಯೇಕ ಗುಂಪು ಎಂದು ಪರಿಗಣಿಸಲು ರಾಜ್ಯಸಭೆ ಅಧ್ಯಕ್ಷರಿಗೆ ಕೋರಿದ್ದಾರೆ.</p>.<p>ಚೌಧರಿ ಅವರಲ್ಲದೆ ಸಿ.ಎಂ.ರಮೇಶ್, ಟಿ.ಜಿ.ವೆಂಕಟೇಶ್, ಗರಿಕಪತಿ ಮೋಹನ್ ರಾವ್ ಅವರೇ ಬಿಜೆಪಿ ಜೊತೆಗೆ ಸಂಪರ್ಕದಲ್ಲಿರುವ ತೆಲುಗುದೇಶಂ ಪಕ್ಷದ ಇತರೆ ಸದಸ್ಯರು.</p>.<p>ಪಕ್ಷದ ರಾಜ್ಯಸಭೆ ಸದಸ್ಯರ ಈ ನಡೆಯ ಹಿಂದೆಯೇ, ಇನ್ನೊಂದೆಡೆ ಪಕ್ಷದ, ಬಹುತೇಕ ಕಾಪು ಸಮುದಾಯ ಪ್ರತಿನಿಧಿಸುವ 20 ಮಾಜಿ ಶಾಸಕರು ಕಾಕಿನಾಡದಲ್ಲಿ ಪ್ರತ್ಯೇಕವಾಗಿ ಸಭೆ ಸೇರಿ ಚರ್ಚಿಸಿದ್ದಾರೆ.</p>.<p>ಚಂದ್ರಬಾಬು ನಾಯ್ಡು ಅವರು ಪ್ರಸ್ತುತ ಕುಟುಂಬ ಸದಸ್ಯರ ಜೊತೆಗೆ ಯೂರೋಪ್ ಪ್ರವಾಸದಲ್ಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಈ ಬೆಳವಣಿಗೆಗಳು ನಡೆದಿವೆ.</p>.<p>ಪ್ರತ್ಯೇಕ ಸಭೆ ನಡೆಸಿರುವ ಮಾಜಿ ಶಾಸಕರು ಬಿಜೆಪಿ ಸೇರ್ಪಡೆಯನ್ನು ತಳ್ಳಿಹಾಕಿದ್ದರೂ, ಮೂಲಗಳ ಪ್ರಕಾರ ನಾಯ್ಡು ಅವರು ವಿದೇಶ ಪ್ರವಾಸದಿಂದ ಹಿಂದಿರುಗುವ ಮುನ್ನವೇ ಪಕ್ಷಾಂತರ ಬೆಳವಣಿಗೆಗಳು ಪೂರ್ಣಗೊಳ್ಳಲಿವೆ.</p>.<p>ಈ ಮಧ್ಯೆ, ದಿಢೀರ್ ಬೆಳವಣಿಗೆ ಕುರಿತಂತೆ ಚಂದ್ರಬಾಬುನಾಯ್ಡು ಅವರು ಯುರೋಪ್ನಿಂದಲೇ ಮಾತನಾಡಿದ್ದು, ವೈ.ಎಸ್. ಚೌಧರಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.</p>.<p>ಟಿ.ವಿ.ವಾಹಿನಿಯೊಂದಕ್ಕೆ ಈಚೆಗೆ ನೀಡಿದ್ದ ಸಂದರ್ಶನದಲ್ಲಿಯೂ ಚೌಧರಿ ತಮ್ಮ ಬೇಸರವನ್ನು ಹೊರಹಾಕಿದ್ದರು. ‘ನಾನು ಪಕ್ಷ ಬಿಟ್ಟ ಸಂದರ್ಭದಲ್ಲಿ ಅದಕ್ಕೆ ಕಾರಣಗಳನ್ನು ವಿವರಿಸುತ್ತೇನೆ’ ಎಂದೂ ಹೇಳಿದ್ದರು.</p>.<p>ವೈ.ಎಸ್.ಚೌಧರಿ ಅವರು ಉದ್ಯಮಿ. ಜೊತೆಗೆ ಇನ್ನೊಬ್ಬ ಸದಸ್ಯ ಸಿ.ಎಂ.ರಮೇಶ್ ಅವರು ಬ್ಯಾಂಕ್ ಸಾಲ ಮರುಪಾವತಿಗೆ ವಿಫಲ ಪ್ರಕರಣದಲ್ಲಿ ಸಿಬಿಐ, ಜಾರಿನಿರ್ದೇಶನಾಲಯದ ವಿಚಾರಣೆ ಎದುರಿಸಿದ್ದಾರೆ.</p>.<p>ಇನ್ನೊಂದೆಡೆ, ಬಿಜೆಪಿ ಹೈಕಮಾಂಡ್ ಕೂಡಾ ಎನ್ಟಿಆರ್ ಪುತ್ರಿ ಪುರಂದೇಶ್ವರಿ ಸೇರಿದಂತೆ ಪಕ್ಷದ ರಾಜ್ಯ ನಾಯಕರ ವಿರುದ್ಧ ಅಸಮಾಧಾನ ಹೊಂದಿದೆ. ರಾಜ್ಯದಲ್ಲಿ ಪರಿಣಾಮಕಾರಿ ನಾಯಕತ್ವ ರೂಪಿಸಲು ವಿಫಲರಾಗಿರುವ ಬಿಜೆಪಿ ಈಗ ಕಾಪು ಸಮುದಾಯದ ನಾಯಕರನ್ನು ಸೆಳೆಯಲು ಮುಂದಾಗಿದೆ.</p>.<p>ಈ ಮಧ್ಯೆ ಕೆಲ ಶಾಸಕರೂ ಕೂಡಾ ಬಿಜೆಪಿಗೆ ಪಕ್ಷಾಂತರ ಮಾಡಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಇದರೊಂದಿಗೆ, ಚಂದ್ರಬಾಬು ನಾಯ್ಡು ಅವರಿಗೆ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನಮಾನವು ತಪ್ಪುವ ಆತಂಕವಿದೆ.</p>.<p>‘ಸೇರ್ಪಡೆಗೆ ನಾವು ಮುಕ್ತ ಅವಕಾಶ ನೀಡಿದರೆ 2024ರ ವೇಳೆಗೆ ರಾಜ್ಯದಲ್ಲಿ ಟಿಡಿಪಿ ಉಳಿಯುವುದಿಲ್ಲ’ ಎಂದು ಬಿಜೆಪಿ ನಾಯಕ ವಿಷ್ಣು ಕುಮಾರ್ ರಾಜು ಹೇಳಿದರು. ಇನ್ನೊಬ್ಬ ಮುಖಂಡ ವಿಷ್ಣುವರ್ಧನ ರೆಡ್ಡಿ, ‘ನಾಯ್ಡು ಅವರು ವಿದೇಶದಿಂದ ಮರಳುವ ಮೊದಲೇ ಅನಿರೀಕ್ಷಿತ ಬೆಳವಣಿಗೆಗಳು ನಡೆಯಲಿವೆ’ ಎಂದಿದ್ದಾರೆ.</p>.<p>ಟಿಡಿಪಿ ನಾಯಕರು ಪಕ್ಷದ ಪ್ರಧಾನ ಕಾರ್ಯದರ್ಶಿ, ನಾಯ್ಡು ಪುತ್ರ ನಾರಾ ಲೋಕೇಶ್ ವರ್ತನೆಯಿಂದ ಬೇಸರಗೊಂಡಿದ್ದಾರೆ. ಚುನಾವಣೆ ಹಿನ್ನಡೆಗಾಗಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ‘ಚುನಾವಣೆಯಲ್ಲಿ ಪಕ್ಷದ ಸೋಲಿನ ಹೊಣೆ ಹೊತ್ತು ಲೋಕೇಶ್ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದ್ದರು.</p>.<p><strong>ಕಾಕಿನಾಡ: ಟಿಡಿಪಿ ಮಾಜಿ ಶಾಸಕರ ಸಭೆ<br />ಅಮರಾವತಿ:</strong> ಪಕ್ಷದ ರಾಜ್ಯಸಭೆ ಸದಸ್ಯರು ಬಿಜೆಪಿಗೆ ಸೇರಿದ ಬೆನ್ನಹಿಂದೆಯೇ, ಕಾಪು ಸಮುದಾಯ ಪ್ರತಿನಿಧಿಸುವ ಪಕ್ಷದ 20 ಮಾಜಿ ಶಾಸಕರು ಕಾಕಿನಾಡದಲ್ಲಿ ಪ್ರತ್ಯೇಕವಾಗಿ ಸಭೆ ಸೇರಿ ಚರ್ಚಿಸಿದ್ದಾರೆ.</p>.<p>ಚಂದ್ರಬಾಬು ನಾಯ್ಡು ಪ್ರಸ್ತುತ ಯುರೋಪ್ ಪ್ರವಾಸದಲ್ಲಿದ್ದಾರೆ. ಪ್ರತ್ಯೇಕ ಸಭೆ ನಡೆಸಿರುವ ಮಾಜಿ ಶಾಸಕರು ಬಿಜೆಪಿ ಸೇರ್ಪಡೆಯನ್ನು ತಳ್ಳಿಹಾಕಿದ್ದರೂ, ಮೂಲಗಳ ಪ್ರಕಾರ ನಾಯ್ಡು ಅವರು ವಿದೇಶ ಪ್ರವಾಸದಿಂದ ಹಿಂದಿರುಗುವ ಮುನ್ನವೇ ಪಕ್ಷಾಂತರ ಬೆಳವಣಿಗೆ ನಡೆದರೆ ಆಶ್ಚರ್ಯವಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>