<p><strong>ಶುಜಲ್ಪುರ/ ಮಧ್ಯಪ್ರದೇಶ:</strong> ಪ್ರಧಾನಿ ನರೇಂದ್ರ ಮೋದಿ ದೇಶದ ಜನರಲ್ಲಿ ವೈಯಕ್ತಿಕ ದ್ವೇಷ ಹರಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.</p>.<p>ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ಬಳಿಕ ಅವರು ನೀಡಿದ ಸಂದರ್ಶನದಲ್ಲಿ ಮಾತನಾಡಿದರು.</p>.<p>ನಮ್ಮ ರಾಷ್ಟ್ರ ಪ್ರೀತಿ, ವಾತ್ಸಲ್ಯದ ನಾಡು. ಇದರಲ್ಲಿ ಮೋದಿ ವೈಯಕ್ತಿಕ ವೈರತ್ವ ಬೆಳೆಸುತ್ತಿದ್ದಾರೆ. ಸಾರ್ವಜನಿಕ ಸಭೆಯಲ್ಲಿ ನಾನು ಅವರನ್ನು ಪ್ರೀತಿ, ಗೌರವದಿಂದಲೇ ಮಾತನಾಡುತ್ತೇನೆ. ಆದರೆ ನನ್ನ ಯಾವ ಮಾತಿಗೂ ಅವರು ಪ್ರತಿಕ್ರಿಯಿಸುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.</p>.<p>ಅಲ್ಲದೇ ಮೋದಿ ಕೇವಲ ಮೂರು ಗಂಟೆ ಮಾತ್ರ ನಿದ್ದೆ ಮಾಡುವುದಾದರೆ, ಅವರು ನನ್ನೊಂದಿಗೆ ಭ್ರಷ್ಟಾಚಾರ, ಹಣ ಅಪಮೌಲ್ಯೀಕರಣ, ಜಿಎಸ್ಟಿ, ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿ ಎಂದು ಸವಾಲು ಎಸೆದರು.</p>.<p>ಒಬ್ಬ ನಾಯಕ ಯಾವ ರೀತಿ ರಾಷ್ಟ್ರವನ್ನು ಮುನ್ನಡೆಸಬಾರದು ಎಂಬುದನ್ನು ಮೋದಿ ಕಲಿಸಿದ್ದಾರೆ. ಎದುರು ವ್ಯಕ್ತಿಯ ಮಾತನ್ನು ಕೇಳದೆ ರಾಷ್ಟ್ರವನ್ನು ಮುಂದುವರೆಸಿದ್ದೇ ಆದಲ್ಲಿ ಆ ರಾಷ್ಟ್ರ ಸಮರ್ಥವಾಗಿ ಮುಂದುವರೆಯದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮೋದಿ ಅವರ ಸಂವಹನ ಕಲೆಗೆ ಯಾರು ಸರಿಸಮಾನರಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.</p>.<p>ಐದು ವರ್ಷಗಳ ಹಿಂದೆ ನರೇಂದ್ರ ಮೋದಿ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಭಾವಿಸಿದ್ದರು. ಆದರೂ ನಾವು ಹಿಂಜರಿಯದೆ ಪ್ರತಿ ಕ್ಷಣವೂ ಹೋರಾಡಿದೆವು. ಈಗ ಅವರಲ್ಲಿ ಭಯ ಹುಟ್ಟಿದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶುಜಲ್ಪುರ/ ಮಧ್ಯಪ್ರದೇಶ:</strong> ಪ್ರಧಾನಿ ನರೇಂದ್ರ ಮೋದಿ ದೇಶದ ಜನರಲ್ಲಿ ವೈಯಕ್ತಿಕ ದ್ವೇಷ ಹರಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.</p>.<p>ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ಬಳಿಕ ಅವರು ನೀಡಿದ ಸಂದರ್ಶನದಲ್ಲಿ ಮಾತನಾಡಿದರು.</p>.<p>ನಮ್ಮ ರಾಷ್ಟ್ರ ಪ್ರೀತಿ, ವಾತ್ಸಲ್ಯದ ನಾಡು. ಇದರಲ್ಲಿ ಮೋದಿ ವೈಯಕ್ತಿಕ ವೈರತ್ವ ಬೆಳೆಸುತ್ತಿದ್ದಾರೆ. ಸಾರ್ವಜನಿಕ ಸಭೆಯಲ್ಲಿ ನಾನು ಅವರನ್ನು ಪ್ರೀತಿ, ಗೌರವದಿಂದಲೇ ಮಾತನಾಡುತ್ತೇನೆ. ಆದರೆ ನನ್ನ ಯಾವ ಮಾತಿಗೂ ಅವರು ಪ್ರತಿಕ್ರಿಯಿಸುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.</p>.<p>ಅಲ್ಲದೇ ಮೋದಿ ಕೇವಲ ಮೂರು ಗಂಟೆ ಮಾತ್ರ ನಿದ್ದೆ ಮಾಡುವುದಾದರೆ, ಅವರು ನನ್ನೊಂದಿಗೆ ಭ್ರಷ್ಟಾಚಾರ, ಹಣ ಅಪಮೌಲ್ಯೀಕರಣ, ಜಿಎಸ್ಟಿ, ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿ ಎಂದು ಸವಾಲು ಎಸೆದರು.</p>.<p>ಒಬ್ಬ ನಾಯಕ ಯಾವ ರೀತಿ ರಾಷ್ಟ್ರವನ್ನು ಮುನ್ನಡೆಸಬಾರದು ಎಂಬುದನ್ನು ಮೋದಿ ಕಲಿಸಿದ್ದಾರೆ. ಎದುರು ವ್ಯಕ್ತಿಯ ಮಾತನ್ನು ಕೇಳದೆ ರಾಷ್ಟ್ರವನ್ನು ಮುಂದುವರೆಸಿದ್ದೇ ಆದಲ್ಲಿ ಆ ರಾಷ್ಟ್ರ ಸಮರ್ಥವಾಗಿ ಮುಂದುವರೆಯದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮೋದಿ ಅವರ ಸಂವಹನ ಕಲೆಗೆ ಯಾರು ಸರಿಸಮಾನರಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.</p>.<p>ಐದು ವರ್ಷಗಳ ಹಿಂದೆ ನರೇಂದ್ರ ಮೋದಿ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಭಾವಿಸಿದ್ದರು. ಆದರೂ ನಾವು ಹಿಂಜರಿಯದೆ ಪ್ರತಿ ಕ್ಷಣವೂ ಹೋರಾಡಿದೆವು. ಈಗ ಅವರಲ್ಲಿ ಭಯ ಹುಟ್ಟಿದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>