<p class="title"><strong>ಶ್ರೀನಗರ: </strong>ಕಾಶ್ಮೀರಕ್ಕೆ ಎರಡು ತಿಂಗಳಿಗೆ ಅಗತ್ಯವಿರುವಷ್ಟು ಅಡುಗೆ ಅನಿಲ ಸಿಲಿಂಡರ್ಗಳನ್ನು (ಎಲ್ಪಿಜಿ) ಸಂಗ್ರಹಿಸಿಇಟ್ಟುಕೊಳ್ಳಿ ಎಂದು ಸರ್ಕಾರವು ತೈಲ ಕಂಪನಿಗಳಗೆ ಸೂಚನೆ ನೀಡಿದೆ. ಚೀನಾ ಜತೆ ಗಡಿ ಸಂಘರ್ಷ ನಡೆದ ಬೆನ್ನಲ್ಲೇ ಈ ಆದೇಶ ಬಂದಿರುವುದು ಸ್ಥಳೀಯರ ಕಳವಳಕ್ಕೆ ಕಾರಣವಾಗಿದೆ.</p>.<p class="title">‘ಭೂಕುಸಿತದಿಂದ ಹೆದ್ದಾರಿ ಬಂದ್ ಆಗುವುದರಿಂದ, ಸಿಲಿಂಡರ್ ಪೂರೈಕೆಗೆ ಅಡಚಣೆಯಾಗುತ್ತದೆ. ಈ ಅವಧಿಯಲ್ಲಿ ಸಿಲಿಂಡರ್ ಪೂರೈಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ’ ಎಂದು ಕಾಶ್ಮೀರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ತೈಲ ಕಂಪನಿಗಳಿಗೆ ಸೂಚನೆ ನೀಡಿದೆ. ‘ಇದು ಅತ್ಯಂತ ತುರ್ತು ಆದೇಶ’ ಎಂದೂ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.</p>.<p class="title">ಕಾಶ್ಮೀರದಲ್ಲಿ ಚಳಿಗಾಲದಲ್ಲಿ ಹಿಮಸುರಿದು ಹೆದ್ದಾರಿ–ರಸ್ತೆಗಳು ಬಂದ್ ಆಗುವುದರಿಂದ ಆ ಅವಧಿಯಲ್ಲಿ ಎಲ್ಪಿಜಿ ಸಿಲಿಂಡರ್ಗಳನ್ನು ಸಂಗ್ರಹಿಸಿ ಇಡಲಾಗುತ್ತದೆ. ಆದರೆ, ಬೇಸಿಗೆ ಕಾಲದಲ್ಲಿ ಸಿಲಿಂಡರ್ ಸಂಗ್ರಹಕ್ಕೆ ಆದೇಶ ನೀಡಿರುವುದು ಜನರ ಕಳವಳಕ್ಕೆ ಕಾರಣವಾಗಿದೆ.</p>.<p class="title">‘ಎರಡು ತಿಂಗಳಿಗೆ ಅಗತ್ಯವಿರುವಷ್ಟು ಸಿಲಿಂಡರ್ಗಳನ್ನು ತ್ವರಿತವಾಗಿ ಪೂರೈಸಬೇಕಿದೆ. ಹೀಗಾಗಿ ಸಿಲಿಂಡರ್ಗಳಿಗೆ ಎಲ್ಪಿಜಿ ತುಂಬಿಸುವ ಕೆಲಸವನ್ನು ತ್ವರಿತಗೊಳಿಸಿ’ ಎಂದು ಎಲ್ಪಿಜಿ ಬಾಟ್ಲಿಂಗ್ ಘಟಕಗಳಿಗೂ ನಿರ್ದೇಶನ ನೀಡಲಾಗಿದೆ.</p>.<p class="title">ಪಾಕ್ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಗೆ (ಎಲ್ಒಸಿ) ಹೊಂದಿಕೊಂಡಿರುವ ಕಾಶ್ಮೀರದ ಗಂದೇರ್ಬಲ್ ಜಿಲ್ಲೆಯಲ್ಲಿ ಅರೆಸೇನಾಪಡೆಯ ಯೋಧರನ್ನು ಇರಿಸಲು ಶಾಲೆಗಳನ್ನು ಬಿಟ್ಟುಒಡುವಂತೆ ಜಿಲ್ಲಾಡಳಿತಕ್ಕೆ ಕೇಂದ್ರ ಗೃಹ ಸಚಿವಾಲಯದಿಂದ ಪತ್ರ ಬರೆಯಲಾಗಿದೆ. ಅಮರನಾಥ ಯಾತ್ರೆಗೆ ಭದ್ರತೆ ಕಲ್ಪಿಸಲು ಈ ಯೋಧರನ್ನು ನಿಯೋಜಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.ಯೋಧರನ್ನು ಇರಿಸಲು 16 ಶಾಲೆ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಗುರುತಿಸಲಾಗಿದೆ. ‘ಯೋಧರನ್ನು ಇರಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಿ’ ಎಂದು ಈ ಶೈಕ್ಷಣಿಕ ಸಂಸ್ಥೆಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶನ ನೀಡಿದ್ದಾರೆ. ಇದೂ ಸಹ ಜನರ ಕಳವಳ ಹೆಚ್ಚಾಗಲು ಕಾರಣವಾಗಿದೆ.</p>.<p>***<br />ಇದು ಬೇಸಿಗೆ, ರಸ್ತೆಗಳಲ್ಲಿ ಭೂಕುಸಿತ ಎಲ್ಲಿ ಉಂಟಾಗುತ್ತದೆ. ಇದು ಅತ್ಯಂತ ಕಳವಳದ ಸಂಗತಿ. ಕಾಶ್ಮೀರದ ಜನ ಇನ್ನೂ ಒಂದು ವರ್ಷ ಭಯದಿಂದ ಜೀವಿಸಲು ಸಾಧ್ಯವಿಲ್ಲ. ಈ ಬೆಳವಣಿಗೆ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು.<br /><em><strong>–ಒಮರ್ ಅಬ್ದುಲ್ಲಾ, ಎನ್ಸಿ ಮುಖಂಡ</strong></em></p>.<p>***<br />ಅಮರನಾಥ ಯಾತ್ರೆಗೆ ಸಿದ್ಧತೆ ಹೇಗಿರುತ್ತದೆ ಎಂಬುದು ನಮಗೆ ಗೊತ್ತಿದೆ. ಇಷ್ಟು ಯೋಧರನ್ನು ಕರೆಸುತ್ತಿರುವುದು ಯಾತ್ರೆಯ ಭದ್ರತೆಗಂತೂ ಅಲ್ಲ. ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ಜನರಿಗೆ ತಿಳಿಸಬೇಕು.<br /><em><strong>–ಓವೈಸಿ ಮಿರ್, ಗಂದೇರ್ಬಲ್ ನಿವಾಸಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಶ್ರೀನಗರ: </strong>ಕಾಶ್ಮೀರಕ್ಕೆ ಎರಡು ತಿಂಗಳಿಗೆ ಅಗತ್ಯವಿರುವಷ್ಟು ಅಡುಗೆ ಅನಿಲ ಸಿಲಿಂಡರ್ಗಳನ್ನು (ಎಲ್ಪಿಜಿ) ಸಂಗ್ರಹಿಸಿಇಟ್ಟುಕೊಳ್ಳಿ ಎಂದು ಸರ್ಕಾರವು ತೈಲ ಕಂಪನಿಗಳಗೆ ಸೂಚನೆ ನೀಡಿದೆ. ಚೀನಾ ಜತೆ ಗಡಿ ಸಂಘರ್ಷ ನಡೆದ ಬೆನ್ನಲ್ಲೇ ಈ ಆದೇಶ ಬಂದಿರುವುದು ಸ್ಥಳೀಯರ ಕಳವಳಕ್ಕೆ ಕಾರಣವಾಗಿದೆ.</p>.<p class="title">‘ಭೂಕುಸಿತದಿಂದ ಹೆದ್ದಾರಿ ಬಂದ್ ಆಗುವುದರಿಂದ, ಸಿಲಿಂಡರ್ ಪೂರೈಕೆಗೆ ಅಡಚಣೆಯಾಗುತ್ತದೆ. ಈ ಅವಧಿಯಲ್ಲಿ ಸಿಲಿಂಡರ್ ಪೂರೈಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ’ ಎಂದು ಕಾಶ್ಮೀರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ತೈಲ ಕಂಪನಿಗಳಿಗೆ ಸೂಚನೆ ನೀಡಿದೆ. ‘ಇದು ಅತ್ಯಂತ ತುರ್ತು ಆದೇಶ’ ಎಂದೂ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.</p>.<p class="title">ಕಾಶ್ಮೀರದಲ್ಲಿ ಚಳಿಗಾಲದಲ್ಲಿ ಹಿಮಸುರಿದು ಹೆದ್ದಾರಿ–ರಸ್ತೆಗಳು ಬಂದ್ ಆಗುವುದರಿಂದ ಆ ಅವಧಿಯಲ್ಲಿ ಎಲ್ಪಿಜಿ ಸಿಲಿಂಡರ್ಗಳನ್ನು ಸಂಗ್ರಹಿಸಿ ಇಡಲಾಗುತ್ತದೆ. ಆದರೆ, ಬೇಸಿಗೆ ಕಾಲದಲ್ಲಿ ಸಿಲಿಂಡರ್ ಸಂಗ್ರಹಕ್ಕೆ ಆದೇಶ ನೀಡಿರುವುದು ಜನರ ಕಳವಳಕ್ಕೆ ಕಾರಣವಾಗಿದೆ.</p>.<p class="title">‘ಎರಡು ತಿಂಗಳಿಗೆ ಅಗತ್ಯವಿರುವಷ್ಟು ಸಿಲಿಂಡರ್ಗಳನ್ನು ತ್ವರಿತವಾಗಿ ಪೂರೈಸಬೇಕಿದೆ. ಹೀಗಾಗಿ ಸಿಲಿಂಡರ್ಗಳಿಗೆ ಎಲ್ಪಿಜಿ ತುಂಬಿಸುವ ಕೆಲಸವನ್ನು ತ್ವರಿತಗೊಳಿಸಿ’ ಎಂದು ಎಲ್ಪಿಜಿ ಬಾಟ್ಲಿಂಗ್ ಘಟಕಗಳಿಗೂ ನಿರ್ದೇಶನ ನೀಡಲಾಗಿದೆ.</p>.<p class="title">ಪಾಕ್ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಗೆ (ಎಲ್ಒಸಿ) ಹೊಂದಿಕೊಂಡಿರುವ ಕಾಶ್ಮೀರದ ಗಂದೇರ್ಬಲ್ ಜಿಲ್ಲೆಯಲ್ಲಿ ಅರೆಸೇನಾಪಡೆಯ ಯೋಧರನ್ನು ಇರಿಸಲು ಶಾಲೆಗಳನ್ನು ಬಿಟ್ಟುಒಡುವಂತೆ ಜಿಲ್ಲಾಡಳಿತಕ್ಕೆ ಕೇಂದ್ರ ಗೃಹ ಸಚಿವಾಲಯದಿಂದ ಪತ್ರ ಬರೆಯಲಾಗಿದೆ. ಅಮರನಾಥ ಯಾತ್ರೆಗೆ ಭದ್ರತೆ ಕಲ್ಪಿಸಲು ಈ ಯೋಧರನ್ನು ನಿಯೋಜಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.ಯೋಧರನ್ನು ಇರಿಸಲು 16 ಶಾಲೆ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಗುರುತಿಸಲಾಗಿದೆ. ‘ಯೋಧರನ್ನು ಇರಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಿ’ ಎಂದು ಈ ಶೈಕ್ಷಣಿಕ ಸಂಸ್ಥೆಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶನ ನೀಡಿದ್ದಾರೆ. ಇದೂ ಸಹ ಜನರ ಕಳವಳ ಹೆಚ್ಚಾಗಲು ಕಾರಣವಾಗಿದೆ.</p>.<p>***<br />ಇದು ಬೇಸಿಗೆ, ರಸ್ತೆಗಳಲ್ಲಿ ಭೂಕುಸಿತ ಎಲ್ಲಿ ಉಂಟಾಗುತ್ತದೆ. ಇದು ಅತ್ಯಂತ ಕಳವಳದ ಸಂಗತಿ. ಕಾಶ್ಮೀರದ ಜನ ಇನ್ನೂ ಒಂದು ವರ್ಷ ಭಯದಿಂದ ಜೀವಿಸಲು ಸಾಧ್ಯವಿಲ್ಲ. ಈ ಬೆಳವಣಿಗೆ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು.<br /><em><strong>–ಒಮರ್ ಅಬ್ದುಲ್ಲಾ, ಎನ್ಸಿ ಮುಖಂಡ</strong></em></p>.<p>***<br />ಅಮರನಾಥ ಯಾತ್ರೆಗೆ ಸಿದ್ಧತೆ ಹೇಗಿರುತ್ತದೆ ಎಂಬುದು ನಮಗೆ ಗೊತ್ತಿದೆ. ಇಷ್ಟು ಯೋಧರನ್ನು ಕರೆಸುತ್ತಿರುವುದು ಯಾತ್ರೆಯ ಭದ್ರತೆಗಂತೂ ಅಲ್ಲ. ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ಜನರಿಗೆ ತಿಳಿಸಬೇಕು.<br /><em><strong>–ಓವೈಸಿ ಮಿರ್, ಗಂದೇರ್ಬಲ್ ನಿವಾಸಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>