‘ತಿದ್ದುಪಡಿ ಮಸೂದೆಯ ಬಗ್ಗೆ ಆತಂಕ ಮತ್ತು ಅನುಮಾನಪಡುವ ಅಗತ್ಯವಿಲ್ಲ. ಉದ್ದೇಶಿತ ತಿದ್ದುಪಡಿಯು ಪಾರದರ್ಶಕತೆಯನ್ನು ತಡೆಯುವಂಥದ್ದಾಗಲಿ ರಾಜ್ಯ ಸರ್ಕಾರದ ಅಧಿಕಾರವನ್ನು ಮೊಟಕುಗೊಳಿಸುವಂಥದ್ದಾಗಲಿ ಅಲ್ಲ’ ಎಂದು ಆಡಳಿತ ಪಕ್ಷವು ಹೇಳಿತು. ಆದರೆ, ಕಾಂಗ್ರೆಸ್, ಟಿಎಂಸಿ, ಎನ್ಸಿಪಿ ಹಾಗೂ ಎಡಪಕ್ಷಗಳ ಸದಸ್ಯರು ಇದನ್ನು ವಿರೋಧಿಸಿ ಸಭಾತ್ಯಾಗ ನಡೆಸಿದರು. ಬಳಿಕ ಬಹುಮತದಿಂದ ಮಸೂದೆಯನ್ನು ಅಂಗೀಕರಿಸಲಾಯಿತು.