<p><strong>ನವದೆಹಲಿ/ಕೊಚ್ಚಿ</strong>: ವಿದೇಶದಲ್ಲಿ ಸಿಲುಕಿರುವ 15 ಸಾವಿರಕ್ಕೂ ಅಧಿಕ ಭಾರತೀಯರನ್ನುಏರ್ ಇಂಡಿಯಾದ 64 ವಿಮಾನಗಳಲ್ಲಿ ವಾಪಸ್ ಕರೆತರಲಾಗುವುದು.ಮೇ 7ರಿಂದ ಮೇ 13ರವರೆಗೆ ಈ ವಿಮಾನಗಳು ಕಾರ್ಯಾಚರಣೆ ನಡೆಸಲಿವೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ತಿಳಿಸಿದರು.</p>.<p>‘ವಂದೇ ಭಾರತ್ ಮಿಷನ್’ ಹೆಸರಿನಲ್ಲಿ ಈ ಕಾರ್ಯಾಚರಣೆ ನಡೆಯಲಿದೆ.ಆನ್ಲೈನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪುರಿ, ‘ಮೇ 13ರ ನಂತರ ಭಾರತದ ಖಾಸಗಿ ಏರ್ಲೈನ್ಸ್ಗಳೂ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಯತ್ನಕ್ಕೆ ಕೈಜೋಡಿಸಬಹುದು’ ಎಂದರು.</p>.<p><strong>ಪ್ರಯಾಣಿಕರೇ ಹಣ ಪಾವತಿಸಬೇಕು</strong>:‘ವಿಮಾನ ಪ್ರಯಾಣ ದರವನ್ನು ಪ್ರಯಾಣಿಕರೇ ಪಾವತಿಸಬೇಕು. ಲಂಡನ್ನಿಂದ ದೆಹಲಿಗೆ ಪ್ರಯಾಣಕ್ಕೆ ₹50 ಸಾವಿರ ಹಾಗೂ ಢಾಕಾದಿಂದ ದೆಹಲಿ ಪ್ರಯಾಣಕ್ಕೆ ₹12 ಸಾವಿರ ನಿಗದಿಪಡಿಸಲಾಗಿದೆ’ ಎಂದರು.</p>.<p>‘ಭಾರತಕ್ಕೆ ಬಂದ ನಂತರ ಅವರ ಆರೋಗ್ಯ ತಪಾಸಣೆ ನಡೆಸಲಾಗುವುದು. ಮುಂಜಾಗ್ರತಾ ಕ್ರಮವಾಗಿ ಅವರು 14 ದಿನ ಕ್ವಾರಂಟೈನ್ನಲ್ಲಿ ಇರಬೇಕು’ ಎಂದು ಪುರಿ ತಿಳಿಸಿದರು.</p>.<p><strong>ನೌಕಾಪಡೆಯ ಮೂರು ಹಡಗುಗಳು</strong>: ‘ಸಮುದ್ರ ಸೇತು’ ಕಾರ್ಯಾಚರಣೆಯಡಿ ಮಾಲ್ಡೀವ್ಸ್ ಹಾಗೂ ಯುಎಇಯಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣೆಗೆ ನೌಕಾಪಡೆಯ ಮೂರು ಹಡಗುಗಳನ್ನು ಮಾಲ್ಡೀವ್ಸ್, ಯುಎಇಗೆ ಕಳುಹಿಸಲಾಗಿದೆ ಎಂದು ರಕ್ಷಣಾ ಇಲಾಖೆ ವಕ್ತಾರರೊಬ್ಬರು ತಿಳಿಸಿದರು.</p>.<p>ಮುಂಬೈ ಕರಾವಳಿಯಿಂದ ಐಎನ್ಎಸ್ ಜಲಾಶ್ವ, ಐಎನ್ಎಸ್ ಮಗರ್ ಮಾಲ್ಡೀವ್ಸ್ಗೆ, ಐಎನ್ಎಸ್ ಶಾರ್ದುಲ್ ದುಬೈಗೆ ತೆರಳಿದೆ. ಮೂರೂ ಹಡಗುಗಳು ಕೊಚ್ಚಿಗೆ ಆಗಮಿಸಲಿದ್ದು, ಒಂದು ಸಾವಿರ ಜನರು ಇದರಲ್ಲಿ ಆಗಮಿಸಲಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ/ಕೊಚ್ಚಿ</strong>: ವಿದೇಶದಲ್ಲಿ ಸಿಲುಕಿರುವ 15 ಸಾವಿರಕ್ಕೂ ಅಧಿಕ ಭಾರತೀಯರನ್ನುಏರ್ ಇಂಡಿಯಾದ 64 ವಿಮಾನಗಳಲ್ಲಿ ವಾಪಸ್ ಕರೆತರಲಾಗುವುದು.ಮೇ 7ರಿಂದ ಮೇ 13ರವರೆಗೆ ಈ ವಿಮಾನಗಳು ಕಾರ್ಯಾಚರಣೆ ನಡೆಸಲಿವೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ತಿಳಿಸಿದರು.</p>.<p>‘ವಂದೇ ಭಾರತ್ ಮಿಷನ್’ ಹೆಸರಿನಲ್ಲಿ ಈ ಕಾರ್ಯಾಚರಣೆ ನಡೆಯಲಿದೆ.ಆನ್ಲೈನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪುರಿ, ‘ಮೇ 13ರ ನಂತರ ಭಾರತದ ಖಾಸಗಿ ಏರ್ಲೈನ್ಸ್ಗಳೂ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಯತ್ನಕ್ಕೆ ಕೈಜೋಡಿಸಬಹುದು’ ಎಂದರು.</p>.<p><strong>ಪ್ರಯಾಣಿಕರೇ ಹಣ ಪಾವತಿಸಬೇಕು</strong>:‘ವಿಮಾನ ಪ್ರಯಾಣ ದರವನ್ನು ಪ್ರಯಾಣಿಕರೇ ಪಾವತಿಸಬೇಕು. ಲಂಡನ್ನಿಂದ ದೆಹಲಿಗೆ ಪ್ರಯಾಣಕ್ಕೆ ₹50 ಸಾವಿರ ಹಾಗೂ ಢಾಕಾದಿಂದ ದೆಹಲಿ ಪ್ರಯಾಣಕ್ಕೆ ₹12 ಸಾವಿರ ನಿಗದಿಪಡಿಸಲಾಗಿದೆ’ ಎಂದರು.</p>.<p>‘ಭಾರತಕ್ಕೆ ಬಂದ ನಂತರ ಅವರ ಆರೋಗ್ಯ ತಪಾಸಣೆ ನಡೆಸಲಾಗುವುದು. ಮುಂಜಾಗ್ರತಾ ಕ್ರಮವಾಗಿ ಅವರು 14 ದಿನ ಕ್ವಾರಂಟೈನ್ನಲ್ಲಿ ಇರಬೇಕು’ ಎಂದು ಪುರಿ ತಿಳಿಸಿದರು.</p>.<p><strong>ನೌಕಾಪಡೆಯ ಮೂರು ಹಡಗುಗಳು</strong>: ‘ಸಮುದ್ರ ಸೇತು’ ಕಾರ್ಯಾಚರಣೆಯಡಿ ಮಾಲ್ಡೀವ್ಸ್ ಹಾಗೂ ಯುಎಇಯಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣೆಗೆ ನೌಕಾಪಡೆಯ ಮೂರು ಹಡಗುಗಳನ್ನು ಮಾಲ್ಡೀವ್ಸ್, ಯುಎಇಗೆ ಕಳುಹಿಸಲಾಗಿದೆ ಎಂದು ರಕ್ಷಣಾ ಇಲಾಖೆ ವಕ್ತಾರರೊಬ್ಬರು ತಿಳಿಸಿದರು.</p>.<p>ಮುಂಬೈ ಕರಾವಳಿಯಿಂದ ಐಎನ್ಎಸ್ ಜಲಾಶ್ವ, ಐಎನ್ಎಸ್ ಮಗರ್ ಮಾಲ್ಡೀವ್ಸ್ಗೆ, ಐಎನ್ಎಸ್ ಶಾರ್ದುಲ್ ದುಬೈಗೆ ತೆರಳಿದೆ. ಮೂರೂ ಹಡಗುಗಳು ಕೊಚ್ಚಿಗೆ ಆಗಮಿಸಲಿದ್ದು, ಒಂದು ಸಾವಿರ ಜನರು ಇದರಲ್ಲಿ ಆಗಮಿಸಲಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>