‘ಯಾವುದೇ ಬಗೆಯ ಶಾಂತಿಭಂಗ ಎಲ್ಲೇ ನಡೆದಿದ್ದರೂ ನಾನು ಅದನ್ನು ಖಂಡಿಸಿದ್ದೇನೆ. ನನ್ನ 61 ವರ್ಷಗಳ ಬದುಕಿನದಲ್ಲಿ ಮಾತು ಅಥವಾ ಕೃತಿಯಿಂದ ನಾನು ಯಾರಿಗೂ ಕೇಡು ಬಯಸಿಲ್ಲ. 41 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಶಾಂತಿ, ಸೌಹಾರ್ದ ಮತ್ತು ಅಧ್ಯಾತ್ಮ ಉನ್ನತಿಗಾಗಿಯೇ ಶ್ರಮಿಸಿದ್ದೇನೆ’ ಎಂದು ಶ್ರೀ ಶ್ರೀ ಪತ್ರದಲ್ಲಿ ಹೇಳಿದ್ದಾರೆ.