<p class="title"><strong>ಪಿಥೋರಗಡ:</strong> ಭಾರತ–ಚೀನಾ ಗಡಿಯ ಮುನ್ಸಿಯಾರಿ–ಬುಗ್ದಿಯಾರಿ ಮಾರ್ಗದ ರಸ್ತೆ ಕಾಮಗಾರಿ ಪ್ರಕ್ರಿಯೆಯನ್ನು ಭಾರತ ಚುರುಕುಗೊಳಿಸಿದ್ದು, ಉತ್ತರಾಖಂಡ್ನ ಜೋಹರ್ ಕಣಿವೆಯ ಕಡಿದಾದ ಹಿಮಾಲಯ ಭೂಭಾಗದಲ್ಲಿ ಹೆಲಿಕಾಪ್ಟರ್ಗಳ ಮೂಲಕ ಬೃಹತ್ ಯಂತ್ರಗಳನ್ನು ಇಳಿಸಿದೆ.</p>.<p class="bodytext">2019ರಲ್ಲಿ ಯಂತ್ರಗಳನ್ನು ಕಳುಹಿಸುವ ಯತ್ನ ಫಲ ನೀಡಿರಲಿಲ್ಲ. ಈ ಬಾರಿ ಲಾಸ್ಪಾ ಎಂಬಲ್ಲಿಗೆ ಯಂತ್ರೋಪಕರಣಗಳನ್ನು ತಲುಪಿಸಲಾಗಿದ್ದು, ರಸ್ತೆ ಕಾಮಗಾರಿ ಚುರುಕುಗೊಳುಸುವ ಆಶಾಭಾವ ಮೂಡಿದೆ ಎಂದು ಗಡಿ ರಸ್ತೆಗಳ ಸಂಸ್ಥೆಯ (ಬಿಆರ್ಒ) ಮುಖ್ಯ ಎಂಜಿನಿಯರ್ ಬಿಮಲ್ ಗೋಸ್ವಾಮಿ ಹೇಳಿದ್ದಾರೆ.</p>.<p class="bodytext">ಬೃಹತ್ ಕಲ್ಲು ಕತ್ತರಿಸುವ ಯಂತ್ರದ ಕೊರತೆಯಿಂದಾಗಿ 65 ಕಿಲೋ ಮೀಟರ್ ಉದ್ದದ ರಸ್ತೆ ಕಾಮಗಾರಿ ವಿಳಂಬವಾಗಿತ್ತು.</p>.<p class="bodytext">ಮುನ್ಸಿಯಾರಿ–ಬೊಗ್ದಿಯಾರಿ–ಮಿಲಾಮ್ ರಸ್ತೆಯು ಭಾರತ–ಚೀನಾ ಗಡಿಯ ಕೊನೆಯ ಗಡಿಠಾಣೆಗೆ ಸಂಪರ್ಕ ಕಲ್ಪಿಸುತ್ತದೆ.</p>.<p class="bodytext">‘ಯಂತ್ರಗಳನ್ನು ನಿಗದಿತ ಸ್ಥಳಕ್ಕೆ ತಲುಪಿಸುವ ಸವಾಲು ಯಶಸ್ವಿಯಾಗಿದ್ದು, ಮುಂದಿನ ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಗೋಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<p class="bodytext">₹325 ಕೋಟಿ ವೆಚ್ಚದಲ್ಲಿ 2010ರಲ್ಲಿ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ರಸ್ತೆಯ ಎರಡೂ ತುದಿಯ ಕಾಮಗಾರಿ ಪೂರ್ಣಗೊಂಡಿದ್ದು, ಮಧ್ಯಭಾಗದಲ್ಲಿರುವ 22 ಕಿಲೋ ಮೀಟರ್ ಉದ್ದದ ಮಾರ್ಗದಲ್ಲಿ ಬಲಿಷ್ಠ ಬಂಡೆಯನ್ನು ಒಡೆಯುವ ಕೆಲಸ ಬಾಕಿ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಪಿಥೋರಗಡ:</strong> ಭಾರತ–ಚೀನಾ ಗಡಿಯ ಮುನ್ಸಿಯಾರಿ–ಬುಗ್ದಿಯಾರಿ ಮಾರ್ಗದ ರಸ್ತೆ ಕಾಮಗಾರಿ ಪ್ರಕ್ರಿಯೆಯನ್ನು ಭಾರತ ಚುರುಕುಗೊಳಿಸಿದ್ದು, ಉತ್ತರಾಖಂಡ್ನ ಜೋಹರ್ ಕಣಿವೆಯ ಕಡಿದಾದ ಹಿಮಾಲಯ ಭೂಭಾಗದಲ್ಲಿ ಹೆಲಿಕಾಪ್ಟರ್ಗಳ ಮೂಲಕ ಬೃಹತ್ ಯಂತ್ರಗಳನ್ನು ಇಳಿಸಿದೆ.</p>.<p class="bodytext">2019ರಲ್ಲಿ ಯಂತ್ರಗಳನ್ನು ಕಳುಹಿಸುವ ಯತ್ನ ಫಲ ನೀಡಿರಲಿಲ್ಲ. ಈ ಬಾರಿ ಲಾಸ್ಪಾ ಎಂಬಲ್ಲಿಗೆ ಯಂತ್ರೋಪಕರಣಗಳನ್ನು ತಲುಪಿಸಲಾಗಿದ್ದು, ರಸ್ತೆ ಕಾಮಗಾರಿ ಚುರುಕುಗೊಳುಸುವ ಆಶಾಭಾವ ಮೂಡಿದೆ ಎಂದು ಗಡಿ ರಸ್ತೆಗಳ ಸಂಸ್ಥೆಯ (ಬಿಆರ್ಒ) ಮುಖ್ಯ ಎಂಜಿನಿಯರ್ ಬಿಮಲ್ ಗೋಸ್ವಾಮಿ ಹೇಳಿದ್ದಾರೆ.</p>.<p class="bodytext">ಬೃಹತ್ ಕಲ್ಲು ಕತ್ತರಿಸುವ ಯಂತ್ರದ ಕೊರತೆಯಿಂದಾಗಿ 65 ಕಿಲೋ ಮೀಟರ್ ಉದ್ದದ ರಸ್ತೆ ಕಾಮಗಾರಿ ವಿಳಂಬವಾಗಿತ್ತು.</p>.<p class="bodytext">ಮುನ್ಸಿಯಾರಿ–ಬೊಗ್ದಿಯಾರಿ–ಮಿಲಾಮ್ ರಸ್ತೆಯು ಭಾರತ–ಚೀನಾ ಗಡಿಯ ಕೊನೆಯ ಗಡಿಠಾಣೆಗೆ ಸಂಪರ್ಕ ಕಲ್ಪಿಸುತ್ತದೆ.</p>.<p class="bodytext">‘ಯಂತ್ರಗಳನ್ನು ನಿಗದಿತ ಸ್ಥಳಕ್ಕೆ ತಲುಪಿಸುವ ಸವಾಲು ಯಶಸ್ವಿಯಾಗಿದ್ದು, ಮುಂದಿನ ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಗೋಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<p class="bodytext">₹325 ಕೋಟಿ ವೆಚ್ಚದಲ್ಲಿ 2010ರಲ್ಲಿ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ರಸ್ತೆಯ ಎರಡೂ ತುದಿಯ ಕಾಮಗಾರಿ ಪೂರ್ಣಗೊಂಡಿದ್ದು, ಮಧ್ಯಭಾಗದಲ್ಲಿರುವ 22 ಕಿಲೋ ಮೀಟರ್ ಉದ್ದದ ಮಾರ್ಗದಲ್ಲಿ ಬಲಿಷ್ಠ ಬಂಡೆಯನ್ನು ಒಡೆಯುವ ಕೆಲಸ ಬಾಕಿ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>