ಈ ಹಿಂದೆ ಸಾಧ್ವಿ ಪ್ರಗ್ಯಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಬಿಜೆಪಿ ಪಕ್ಷದ ವಕ್ತಾರ ರಜನೀಶ್ ಅಗರವಾಲ್, ಆಕೆ (ಸಾಧ್ವಿ) ತಮ್ಮ ವೈಯಕ್ತಿಕ ಅನುಭವಗಳಿಂದ ಈ ರೀತಿ ಹೇಳಿದ್ದಾರೆ. ಸೇನಾಪಡೆ ಮತ್ತು ಹುತಾತ್ಮರ ಬಗ್ಗೆ ರಾಜಕೀಯ ಹೇಳಿಕೆ ನೀಡುವ ಮೂಲಕ ಆಕೆ ಚುನಾವಣಾ ಆಯೋಗದ ಆದೇಶವನ್ನುಉಲ್ಲಂಘಿಸಿದ್ದಾರೆ. ಹೇಮಂತ್ ಕರ್ಕರೆ ಅವರು ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಯಾಗಿದ್ದು, 26/11 ಮುಂಬೈ ಭಯೋತ್ಪಾದನಾ ದಾಳಿ ವೇಳೆ ಜನರನ್ನು ರಕ್ಷಿಸಲು ಉಗ್ರರ ವಿರುದ್ಧ ಹೋರಾಡಿ ಹುತಾತ್ಮಾರಾಗಿದ್ದರು ಎಂದಿದ್ದಾರೆ.