ಗಾಂಧಿ ಹತ್ಯೆಯಾದದಿನವಾದ ಜನವರಿ 30 ಅನ್ನು ಶೌರ್ಯ ದಿವಸ ಎಂದು ಕರೆದು ಈ ಹಿಂದೆಯೂ ಹಿಂದೂ ಮಹಾಸಭಾ ಸಂಭ್ರಮಾಚರಣೆ ನಡೆಸಿದೆ. ಆಗೆಲ್ಲ ಗೋಡ್ಸೆ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಗೌರವ ಸಲ್ಲಿಸುವುದು ಮತ್ತು ಸಿಹಿ ಹಂಚುವುದು ನಡೆದಿತ್ತು. ಆದರೆ, ಗಾಂಧಿ ಅವರ ಪ್ರತಿಕೃತಿ ನಿರ್ಮಿಸಿ ಅದಕ್ಕೆ ಗುಂಡಿಕ್ಕಿ ಘಟನೆಯನ್ನು ಮರುಸೃಷ್ಟಿಸಿದ್ದು ಇದೇ ಮೊದಲು ಎಂದು ವರದಿ ಉಲ್ಲೇಖಿಸಿದೆ.