‘ದೇಶ ವಿರೋಧಿ ಚಟುವಟಿಕೆಗಳಿಗೆ ಜೆಎನ್ಯು ಪಾಲನಾಕೇಂದ್ರವಾಗಿತ್ತು. ಇಂಥ ಬೆಳವಣಿಗೆಯನ್ನು ಸಹಿಸಲು ನಮಗೆ ಆಗುವುದಿಲ್ಲ. ಜೆಎನ್ಯು ಮೇಲೆ ನಡೆದ ದಾಳಿಯ ಸಂಪೂರ್ಣ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ. ದಾಳಿ ನಡೆಸಿದವರು ನಮ್ಮ ಕಾರ್ಯಕರ್ತರು’ ಎಂದು ಚೌಧರಿ ವಿಡಿಯೊದಲ್ಲಿ ಹೇಳಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.