ಬಿಜೆಪಿ ಪಕ್ಷದ 40ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಸೋಮವಾರ ಟ್ವಿಟರ್ ಲೈವ್ ಮೂಲಕ ಜನರನ್ನುದ್ದೇಶಿಸಿ ಮಾತನಾಡಿದ ಮೋದಿ, ಜನತಾ ಕರ್ಫ್ಯೂ ಅಥವಾಲಾಕ್ಡೌನ್ ಆಗಿರಲಿ ಜನರು ಒಗ್ಗಟ್ಟಾಗಿ ನಿಂತಿದ್ದಾರೆ. ದೇಶದ 130 ಕೋಟಿ ಜನರು ತೋರಿಸಿದ ಪ್ರಬುದ್ಧತೆ ಶ್ಲಾಘನೀಯ ಎಂದು ಹೇಳಿದ್ದಾರೆ. ದೇಶದ ಜನರು ಇಷ್ಟೊಂದು ಶಿಸ್ತಿನಿಂದ ಇದನ್ನು ಪಾಲಿಸುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ ಎಂದ ಅವರುಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷ ದೀಪ ಹಚ್ಚಿ ಜನರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ನಿನ್ನೆ ನಾವುದೇಶದ ಜನರ ಒಗ್ಗಟ್ಟಿನ ಝಲಕ್ ನೋಡಿದ್ದೇವೆ. ಗ್ರಾಮ, ಮಹಾ ನಗರಗಳ ಜನರು ಕೊರೊನಾ ವೈರಸ್ನ ಅಂಧಕಾರವನ್ನು ಹೊಡೆದೋಡಿಸಲು ದೀಪ ಹಚ್ಚಿದ್ದಾರೆ. 130 ಕೋಟಿ ಜನರ ಈ ದೊಡ್ಡ ಹೆಜ್ಜೆ ಸುದೀರ್ಘ ಹೋರಾಟವೊಂದಕ್ಕೆ ನಮ್ಮನ್ನು ಸಜ್ಜು ಮಾಡಿದೆ. ಇದೀಗನಮ್ಮ ದೇಶದ ದಿಶೆ ಮತ್ತು ಉದ್ದೇಶ ಒಂದೇ ಆಗಿದೆ ಎಂದಿದ್ದಾರೆ.