ಬಾಲಾಕೋಟ್ನಲ್ಲಿದ್ದ ಜೈಶ್ –ಎ– ಮೊಹಮ್ಮದ್ ಉಗ್ರರ ಶಿಬಿರಗಳ ಮೇಲೆ ಭಾರತೀಯ ಪಾಯುಪಡೆ ನಡೆಸಿದ ದಾಳಿ ನಂತರ ಕಳೆದ ಫೆಬ್ರುವರಿ 27 ರಿಂದ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಸಂಪೂರ್ಣವಾಗಿ ಬಂದ್ ಮಾಡಿತ್ತು. ನವದೆಹಲಿ, ಬ್ಯಾಂಕಾಕ್ ಮತ್ತು ಕ್ವಾಲಾಲಂಪುರ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಸಂಚರಿಸುವ ವಿಮಾನಗಳಿಗೆ ಮಾತ್ರ ಪಾಕಿಸ್ತಾನ ಮಾರ್ಚ್ 27 ರಿಂದ ತನ್ನ ವಾಯುಪ್ರದೇಶವನ್ನು ಬಳಕೆಗೆ ಮುಕ್ತಗೊಳಿಸಿತ್ತು.