ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರ ನಡುವಿನ ಕಾಳಗ: ವಾತಾವರಣ ಕಾರಣ ಗಾಯಗೊಂಡ ಯೋಧರ ಸ್ಥಳಾಂತರ

Last Updated 6 ಏಪ್ರಿಲ್ 2020, 1:56 IST
ಅಕ್ಷರ ಗಾತ್ರ

ಜಮ್ಮು-ಕಾಶ್ಮೀರ: ಕೆರೆನ್ ಸೆಕ್ಟರ್‌ನಲ್ಲಿ ಶನಿವಾರದಿಂದಭಾರತೀಯ ಸೇನೆ ಹಾಗೂ ಉಗ್ರರ ನಡುವೆ ನಡೆಯುತ್ತಿರುವಭೀಕರ ಹೋರಾಟದಲ್ಲಿಗಾಯಗೊಂಡ ಯೋಧರನ್ನು ವಾತಾವರಣ ವೈಪರೀತ್ಯದಿಂದ ಸ್ಥಳಾಂತರಿಸಲಾಗುತ್ತಿದೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ.

ಗಡಿ ನಿಯಂತ್ರಣ ರೇಖೆಯಿಂದ ಒಳಗೆ ನುಸುಳಲು ಯತ್ನಿಸುತ್ತಿರುವ ಉಗ್ರರನ್ನು ಸದೆಬಡಿಯಲು ಸೇನೆಯು ನಡೆಸುತ್ತಿರುವ ಕಾರ್ಯಾಚರಣೆ ತೀವ್ರಗೊಂಡಿದ್ದು5 ಮಂದಿ ಉಗ್ರರು ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಹಲವು ಉಗ್ರರು ಗಾಯಗೊಂಡಿರುವ ಶಂಕೆ ಇದ್ದು, ಐದು ಮಂದಿ ಯೋಧರೂ ಹುತಾತ್ಮರಾಗಿದ್ದಾರೆ.ಶನಿವಾರದಿಂದ ಭಾನುವಾರದವರೆಗೆನಡೆದ ಕಾರ್ಯಾಚರಣೆಯಲ್ಲಿ 9 ಮಂದಿ ಉಗ್ರರು ಭಾರತೀಯ ಸೇನೆಯ ಗುಂಡಿಗೆ ಬಲಿಯಾಗಿದ್ದರು. ಕಾರ್ಯಾಚರಣೆಯ ತೀವ್ರತೆಯನ್ನು ಗಮನಿಸಿರುವ ಸೇನೆ ಹೆಚ್ಚಿನ ಯೋಧರನ್ನು ಈ ಭಾಗಕ್ಕೆ ನಿಯೋಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT