ನವದೆಹಲಿ: ಭಾರತದ ಆರ್ಥಿಕತೆಯು ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದ್ದು, ಆರ್ಥಿಕತೆ ಕುಸಿದಿರುವುದಕ್ಕೆ ವಿಸ್ತೃತಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಬೇಕು ಎಂದುಒತ್ತಾಯಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಉಳಿತಾಯ ಖಾತೆ ಮತ್ತು ನಿಶ್ಚಿತ ಠೇವಣಿಯ ಬಡ್ಡಿದರವನ್ನು ಇಳಿಕೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಸ್ನೇಹಿತರಿಂದಾಗಿ ಸಾಲದಸುಳಿಯಲ್ಲಿರುವ ಯೆಸ್ ಬ್ಯಾಂಕ್ಗೆ ಸಹಾಯ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
आज का दिन देश के निवेशकों के लिए शायद देश की आजादी के बाद सबसे बुरा दिन है।
— Randeep Singh Surjewala (@rssurjewala) March 12, 2020
शेयर बाजार 2700 प्वाइंट गिर गया जो आज तक के इतिहास में सबसे बड़ी गिरावट है।
11 लाख करोड़ रुपया निवेशकों का आज आज डूब गया। pic.twitter.com/4oFaONqUxp
ಗುರುವಾರ ಸೆನ್ಸೆಕ್ಸ್ 2,700 ಅಂಕ ಕುಸಿಯುವ ಮೂಲಕ ಹೂಡಿಕೆದಾರರಿಗೆ ₹11 ಲಕ್ಷ ನಷ್ಟವನ್ನುಂಟುಮಾಡಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ಸಂಸತ್ತಿನ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸುರ್ಜೇವಾಲಾ, ಷೇರು ಮಾರುಕಟ್ಟೆಯಲ್ಲಿ ಮತ್ತು ಮ್ಯೂಚುವಲ್ ಫಂಡ್ಗಳಲ್ಲಿಹೂಡಿಕೆ ಹೂಡಿದವರುಈ ನಷ್ಟ ಅನುಭವಿಸಬೇಕಾಗಿದೆ. 72 ಗಂಟೆಗಳಲ್ಲಿ ಸಣ್ಣ ಮತ್ತು ಮಧ್ಯಮ ಹೂಡಿಕೆದಾರರು ₹18 ಲಕ್ಷ ಕೋಟಿ ಕಳೆದುಕೊಂಡರು. ವೇತನ ಪಡೆಯುವ ಮತ್ತು ಸಣ್ಣ ಹೂಡಿಕೆದಾರರಿಗೆ ಸೇರಿದ ಹಣ ಇದಾಗಿದೆ ಎಂದಿದ್ದಾರೆ.
ದೇಶದ ಆರ್ಥಿಕತೆ ಕೊರೊನಾ ವೈರಸ್ನಿಂದ ಬಳಲುತ್ತಿದೆ. ಆದರೆ ಪ್ರಧಾನಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೌನವಾಗಿದ್ದಾರೆ ಎಂದಿದ್ದಾರೆ ಸುರ್ಜೇವಾಲಾ.
मोदी जी को बधाई!
— Randeep Singh Surjewala (@rssurjewala) March 12, 2020
1 अमेरिकी डालर = ₹75.16
आपने रुपैया “मार्गदर्शक मंडल” में पहुँचा दिया। pic.twitter.com/s2JK5T8Tze
ಸೆನ್ಸೆಕ್ಸ್ ಕುಸಿತ ಬಗ್ಗೆ ಪ್ರಧಾನಿಯವರ ವಿರುದ್ದ ಟೀಕೆ ಮಾಡಿ ಟ್ವೀಟ್ ಮಾಡಿದ ಸುರ್ಜೇವಾಲಾ, ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು. ಅಮೆರಿಕನ್ ಡಾಲರ್ 1= ₹75.16. ರೂಪಾಯಿ ಈಗ ಮಾರ್ಗದರ್ಶಕ್ ಮಂಡಳಿಯ ದರ್ಜೆಗೆ ಬಂದಿದೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.