<p>ಘತಾಲ್: ಜೈಶ್ರೀರಾಮ್ ಘೋಷಣೆ ಕೂಗಿದ ಗುಂಪಿನ ಮೇಲೆ ಕೂಗಾಡಿರುವಪಶ್ಚಿಮ ಬಂಗಾಳ ಮುಖ್ಯಮಂತ್ರಿಮಮತಾ ಬ್ಯಾನರ್ಜಿ ಅವರ ವರ್ತನೆಯನ್ನು ಖಂಡಿಸಿದಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.</p>.<p>ಮಮತಾ ಅವರು ಗುಂಪಿನ ಮೇಲೆ ಕೂಗಾಡಿರುವ ವಿಡಿಯೊ ವೈರಲ್ ಆಗಿತ್ತು.</p>.<p>ಪಶ್ಚಿಮ ಬಂಗಾಳದ ಘತಾಲ್ನಲ್ಲಿನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಜೈ ಶ್ರೀರಾಮ್ ಘೋಷಣೆಯನ್ನು ಭಾರತದಲ್ಲಿ ಕೂಗದೆ ಪಾಕಿಸ್ತಾನದಲ್ಲಿ ಕೂಗಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.</p>.<p><strong>ಇದನ್ನೂ ಓದಿ:<a href="https://www.prajavani.net/stories/national/lok-sabha-electins-2019-634649.html" target="_blank"> ಮೋದಿ, ದೀದೀ ಕಿತ್ತಾಟ</a></strong></p>.<p>ಬಿಜೆಪಿ ಇಲ್ಲಿನ 42 ಲೋಕಸಭಾ ಕ್ಷೇತ್ರಗಳ ಪೈಕಿ 23 ಸ್ಥಾನಗಳನ್ನು ಗೆದ್ದು ಪಾರುಪತ್ಯ ಸ್ಥಾಪಿಸಲಿದೆ ಎಂದು ಹೇಳಿದರು.</p>.<p>ಶ್ರೀರಾಮ ನಮ್ಮ ಸಂಸ್ಕೃತಿಯ ಭಾಗ. ಈತನ ನಾಮಧೇಯದ ಉಚ್ಛಾರವನ್ನು ಯಾರಾದರೂ ನಿಲ್ಲಿಸಲು ಸಾಧ್ಯವೇ? ರಾಮನ ಹೆಸರನ್ನು ಭಾರತದಲ್ಲಿ ಉಚ್ಛರಿಸದೆ ಪಾಕಿಸ್ತಾನದಲ್ಲಿ ಉಚ್ಛರಿಸಲು ಸಾಧ್ಯವೇ ಎಂದು ದೀದೀ ಅವರನ್ನು ಕೇಳಬೇಕಾಗಿದೆ ಎಂದರು.</p>.<p>ಕಳೆದ ಐದು ವರ್ಷಗಳಿಂದ ಬಿಜೆಪಿ ಸರ್ಕಾರ ಪಶ್ಚಿಮ ಬಂಗಾಳಕ್ಕೆ ₹4,24,800 ಕೋಟಿ ಹಣ ವ್ಯಯಮಾಡಿದೆ. ಆದರೆ ಇದು ಜನರನ್ನು ತಲುಪಿಲ್ಲ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಕಾಲಾವಧಿಯಲ್ಲಿ ಯುಪಿಎ ಸರ್ಕಾರ ₹1,32,000 ಕೋಟಿ ಮಾತ್ರ ನೀಡಿತ್ತು ಎಂದು ಆರೋಪಿಸಿದ್ದಾರೆ.</p>.<p><strong>ಇದನ್ನೂ ಓದಿ:<a href="https://www.prajavani.net/stories/national/lok-sabha-elections-2019-634289.html" target="_blank">ಅಮೇಠಿ, ರಾಯಬರೇಲಿಯಲ್ಲಿ ಕಾಂಗ್ರೆಸ್ಗೆ ಮತ ಹಾಕಿ: ಕಾರ್ಯಕರ್ತರಿಗೆ ಮಾಯಾವತಿ ಸೂಚನೆ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಘತಾಲ್: ಜೈಶ್ರೀರಾಮ್ ಘೋಷಣೆ ಕೂಗಿದ ಗುಂಪಿನ ಮೇಲೆ ಕೂಗಾಡಿರುವಪಶ್ಚಿಮ ಬಂಗಾಳ ಮುಖ್ಯಮಂತ್ರಿಮಮತಾ ಬ್ಯಾನರ್ಜಿ ಅವರ ವರ್ತನೆಯನ್ನು ಖಂಡಿಸಿದಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.</p>.<p>ಮಮತಾ ಅವರು ಗುಂಪಿನ ಮೇಲೆ ಕೂಗಾಡಿರುವ ವಿಡಿಯೊ ವೈರಲ್ ಆಗಿತ್ತು.</p>.<p>ಪಶ್ಚಿಮ ಬಂಗಾಳದ ಘತಾಲ್ನಲ್ಲಿನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಜೈ ಶ್ರೀರಾಮ್ ಘೋಷಣೆಯನ್ನು ಭಾರತದಲ್ಲಿ ಕೂಗದೆ ಪಾಕಿಸ್ತಾನದಲ್ಲಿ ಕೂಗಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.</p>.<p><strong>ಇದನ್ನೂ ಓದಿ:<a href="https://www.prajavani.net/stories/national/lok-sabha-electins-2019-634649.html" target="_blank"> ಮೋದಿ, ದೀದೀ ಕಿತ್ತಾಟ</a></strong></p>.<p>ಬಿಜೆಪಿ ಇಲ್ಲಿನ 42 ಲೋಕಸಭಾ ಕ್ಷೇತ್ರಗಳ ಪೈಕಿ 23 ಸ್ಥಾನಗಳನ್ನು ಗೆದ್ದು ಪಾರುಪತ್ಯ ಸ್ಥಾಪಿಸಲಿದೆ ಎಂದು ಹೇಳಿದರು.</p>.<p>ಶ್ರೀರಾಮ ನಮ್ಮ ಸಂಸ್ಕೃತಿಯ ಭಾಗ. ಈತನ ನಾಮಧೇಯದ ಉಚ್ಛಾರವನ್ನು ಯಾರಾದರೂ ನಿಲ್ಲಿಸಲು ಸಾಧ್ಯವೇ? ರಾಮನ ಹೆಸರನ್ನು ಭಾರತದಲ್ಲಿ ಉಚ್ಛರಿಸದೆ ಪಾಕಿಸ್ತಾನದಲ್ಲಿ ಉಚ್ಛರಿಸಲು ಸಾಧ್ಯವೇ ಎಂದು ದೀದೀ ಅವರನ್ನು ಕೇಳಬೇಕಾಗಿದೆ ಎಂದರು.</p>.<p>ಕಳೆದ ಐದು ವರ್ಷಗಳಿಂದ ಬಿಜೆಪಿ ಸರ್ಕಾರ ಪಶ್ಚಿಮ ಬಂಗಾಳಕ್ಕೆ ₹4,24,800 ಕೋಟಿ ಹಣ ವ್ಯಯಮಾಡಿದೆ. ಆದರೆ ಇದು ಜನರನ್ನು ತಲುಪಿಲ್ಲ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಕಾಲಾವಧಿಯಲ್ಲಿ ಯುಪಿಎ ಸರ್ಕಾರ ₹1,32,000 ಕೋಟಿ ಮಾತ್ರ ನೀಡಿತ್ತು ಎಂದು ಆರೋಪಿಸಿದ್ದಾರೆ.</p>.<p><strong>ಇದನ್ನೂ ಓದಿ:<a href="https://www.prajavani.net/stories/national/lok-sabha-elections-2019-634289.html" target="_blank">ಅಮೇಠಿ, ರಾಯಬರೇಲಿಯಲ್ಲಿ ಕಾಂಗ್ರೆಸ್ಗೆ ಮತ ಹಾಕಿ: ಕಾರ್ಯಕರ್ತರಿಗೆ ಮಾಯಾವತಿ ಸೂಚನೆ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>