<p><strong>ನವದೆಹಲಿ:</strong> ಹಾಸ್ಟೆಲ್ಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ವಿಶೇಷ ರೈಲು ಮತ್ತು ಅಂತರ ರಾಜ್ಯ ಬಸ್ಗಳ ಮೂಲಕ ತಮ್ಮ ಊರುಗಳಿಗೆ ಹಿಂತಿರುಗಬೇಕೆಂದು ಜವಾಹರಲಾಲ್ ವಿಶ್ವವಿದ್ಯಾಲಯ (ಜೆಎನ್ಯು) ಸೋಮವಾರ ಸಲಹೆ ನೀಡಿದೆ.</p>.<p>ವಿಶ್ವವಿದ್ಯಾಲಯವನ್ನು ಮುಚ್ಚುವ ಕುರಿತು ಹಾಗೂ ವಿದ್ಯಾರ್ಥಿಗಳು ಮನೆಗೆ ಮರಳುವ ಬಗ್ಗೆ ವಿಶ್ವವಿದ್ಯಾಲಯವು ಮಾರ್ಚ್ನಲ್ಲೇ ಸುತ್ತೋಲೆ ಹೊರಡಿಸಿದೆ ಎಂದು ಡೀನ್ ಆಫ್ ಸ್ಟೂಡೆಂಟ್ಸ್ ಪ್ರೊಫೆಸರ್ ಸುಧೀರ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.</p>.<p>‘ಲಾಕ್ಡೌನ್ ಇದ್ದುದ್ದರಿಂದ ಆ ಸಮಯದಲ್ಲಿ ಸಾರ್ವಜನಿಕೆ ಸಾರಿಗೆ ಇರಲಿಲ್ಲ. ಹೀಗಾಗಿ ಅನೇಕ ವಿದ್ಯಾರ್ಥಿಗಳು ಪುನಃ ಹಾಸ್ಟೆಲ್ನಲ್ಲೇ ಉಳಿಯುವುದಾಗಿ ಮನವಿ ಮಾಡಿಕೊಂಡಿದ್ದರು. ಆದರೆ, ಇತ್ತೀಚಿಗೆ ಲಾಕ್ಡೌನ್ ನಿರ್ಬಂಧ ತುಸು ಸಡಿಲ ಗೊಂಡಿದ್ದು, ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಜೂನ್ 1ರಿಂದ ಸುಮಾರು 200ಕ್ಕೂ ಹೆಚ್ಚು ರೈಲುಗಳ ಸಂಚಾರ ಆರಂಭವಾಗಲಿದೆ. ಅಂತರರಾಜ್ಯ ಬಸ್, ಟ್ಯಾಕ್ಸಿ ಸೇವೆಗಳನ್ನೂ ಸರ್ಕಾರ ಆರಂಭಿಸಲಿದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ಹಿಂತಿರುಗಬೇಕೆಂದು’ ಸಿಂಗ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.</p>.<p>‘ಗೃಹ ಸಚಿವಾಲಯ ಮತ್ತು ದೆಹಲಿ ಸರ್ಕಾರದ ಸೂಚನೆಯ ಮೇರೆಗೆ ಜೂನ್25ರ ತನಕ ಕ್ಯಾಂಪಸ್ ಅನ್ನು ಮುಚ್ಚಲಾಗುವುದು. 25ರ ನಂತರ ವಿದ್ಯಾರ್ಥಿಗಳು ಕ್ಯಾಂಪಸ್ಗೆ ಮರಳಬಹುದು’ ಎಂದೂ ಅವರು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಹಾಸ್ಟೆಲ್ಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ವಿಶೇಷ ರೈಲು ಮತ್ತು ಅಂತರ ರಾಜ್ಯ ಬಸ್ಗಳ ಮೂಲಕ ತಮ್ಮ ಊರುಗಳಿಗೆ ಹಿಂತಿರುಗಬೇಕೆಂದು ಜವಾಹರಲಾಲ್ ವಿಶ್ವವಿದ್ಯಾಲಯ (ಜೆಎನ್ಯು) ಸೋಮವಾರ ಸಲಹೆ ನೀಡಿದೆ.</p>.<p>ವಿಶ್ವವಿದ್ಯಾಲಯವನ್ನು ಮುಚ್ಚುವ ಕುರಿತು ಹಾಗೂ ವಿದ್ಯಾರ್ಥಿಗಳು ಮನೆಗೆ ಮರಳುವ ಬಗ್ಗೆ ವಿಶ್ವವಿದ್ಯಾಲಯವು ಮಾರ್ಚ್ನಲ್ಲೇ ಸುತ್ತೋಲೆ ಹೊರಡಿಸಿದೆ ಎಂದು ಡೀನ್ ಆಫ್ ಸ್ಟೂಡೆಂಟ್ಸ್ ಪ್ರೊಫೆಸರ್ ಸುಧೀರ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.</p>.<p>‘ಲಾಕ್ಡೌನ್ ಇದ್ದುದ್ದರಿಂದ ಆ ಸಮಯದಲ್ಲಿ ಸಾರ್ವಜನಿಕೆ ಸಾರಿಗೆ ಇರಲಿಲ್ಲ. ಹೀಗಾಗಿ ಅನೇಕ ವಿದ್ಯಾರ್ಥಿಗಳು ಪುನಃ ಹಾಸ್ಟೆಲ್ನಲ್ಲೇ ಉಳಿಯುವುದಾಗಿ ಮನವಿ ಮಾಡಿಕೊಂಡಿದ್ದರು. ಆದರೆ, ಇತ್ತೀಚಿಗೆ ಲಾಕ್ಡೌನ್ ನಿರ್ಬಂಧ ತುಸು ಸಡಿಲ ಗೊಂಡಿದ್ದು, ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಜೂನ್ 1ರಿಂದ ಸುಮಾರು 200ಕ್ಕೂ ಹೆಚ್ಚು ರೈಲುಗಳ ಸಂಚಾರ ಆರಂಭವಾಗಲಿದೆ. ಅಂತರರಾಜ್ಯ ಬಸ್, ಟ್ಯಾಕ್ಸಿ ಸೇವೆಗಳನ್ನೂ ಸರ್ಕಾರ ಆರಂಭಿಸಲಿದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ಹಿಂತಿರುಗಬೇಕೆಂದು’ ಸಿಂಗ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.</p>.<p>‘ಗೃಹ ಸಚಿವಾಲಯ ಮತ್ತು ದೆಹಲಿ ಸರ್ಕಾರದ ಸೂಚನೆಯ ಮೇರೆಗೆ ಜೂನ್25ರ ತನಕ ಕ್ಯಾಂಪಸ್ ಅನ್ನು ಮುಚ್ಚಲಾಗುವುದು. 25ರ ನಂತರ ವಿದ್ಯಾರ್ಥಿಗಳು ಕ್ಯಾಂಪಸ್ಗೆ ಮರಳಬಹುದು’ ಎಂದೂ ಅವರು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>