ಶಬರಿಮಲೆ ವಿಷಯದಲ್ಲಿ ಸರ್ಕಾರ ಪರಾಭವಗೊಂಡಿದೆ. ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಬಗ್ಗೆ ಸರ್ಕಾರದ ನಿಲುವು ಏನೆಂದು ಹೇಳಬೇಕು. ಸುಪ್ರೀಂಕೋರ್ಟ್ ತೀರ್ಪು ಬಗ್ಗೆ ಸಿಪಿಎಂನಲ್ಲಿಯೇ ಭಿನ್ನಮತ ಇದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹಠ ಇದಕ್ಕೆಲ್ಲ ಕಾರಣ.ಮಹಿಳೆಯರಿಗೆ ಪ್ರವೇಶ ಕಲ್ಪಿಸುವುದಾಗಿ ಹೇಳಿದ ಪಿಣರಾಯಿ ಈಗ ಹಿಂದೆ ಸರಿದಿರುವುದು ಯಾಕೆ ಎಂದು ಹೇಳಬೇಕು.ಭಕ್ತರ ನಂಬಿಕೆಯನ್ನು ಪರಿಗಣಿಸಿ ಪಿಣರಾಯಿ ಈ ವಿಷಯ ಬಗ್ಗೆ ಮೌನ ಮುರಿಯಬೇಕು.
ಮುಂಜಾಗ್ರತಾ ಕ್ರಮ ಎಂದು ನನ್ನನ್ನು ಬಂಧಿಸಿದಪೊಲೀಸ್, ಆಮೇಲೆನನ್ನ ವಿರುದ್ಧ 5 ಸುಳ್ಳು ಪ್ರಕರಣಗಳನ್ನು ದಾಖಲಿಸಿದರು.ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಪ್ರಕರಣಗಳನ್ನು ಕಾನೂನು ಮತ್ತು ರಾಜಕೀಯ ರೀತಿಯಲ್ಲಿಯೇ ಎದುರಿಸುತ್ತೇನೆ.ನನಗೆ ಚಹಾ ಖರೀದಿಸಿಕೊಟ್ಟ ಎಂದು ಒಬ್ಬ ಪೊಲೀಸ್ ಅಧಿಕಾರಿಯನ್ನು ವಜಾ ಮಾಡಲಾಗಿದೆ.ಎನ್ಎಸ್ಎಸ್, ತಂತ್ರಿ ಕುಟುಂಬ, ಪಂದಳಂ ರಾಜಮನೆತನದವರು ಮುಷ್ಕರದಲ್ಲಿ ಭಾಗಿಯಾದ ನಂತರವೇ ಈ ಮುಷ್ಕರ ಜನಪರಮುಷ್ಕರವಾಗಿ ಮಾರ್ಪಾಟಾಗಿದ್ದು ಎಂದು ಸುದ್ದಿಗೋಷ್ಠಿಯಲ್ಲಿಮಾತನಾಡಿದ ಸುರೇಂದ್ರನ್ ಹೇಳಿದ್ದಾರೆ.