<p><strong>ತಿರುವನಂತಪುರ:</strong> ‘ಕಿಡ್ನಿ ಮಾರಾಟಕ್ಕಿದೆ. ಅಧಿಕಾರಿಗಳಿಗೆ ಲಂಚ ನೀಡಲು ಹಣ ಬೇಕಾಗಿದೆ’</p>.<p>ಈ ರೀತಿಯಬೋರ್ಡ್ವೊಂದನ್ನುಕೇರಳದ ಇಡುಕ್ಕಿ ಜಿಲ್ಲೆಯ ಆದಿಮಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿ ವೆಲ್ಲಾತೋವಾಲ್ ನಿವಾಸಿ ಜೋಸೆಫ್ (72) ತಮ್ಮ ಮನೆಯ ಮುಂದೆ ನೇತುಹಾಕಿದ್ದಾರೆ.</p>.<p>ಕಳೆದ ವರ್ಷ ಕೇರಳ ಜನತೆಯ ನಿದ್ದೆಗಡೆಸಿದ್ದ ಪ್ರವಾಹಕ್ಕೆ ಜೋಸೆಫ್ ದಂಪತಿ ವಾಸವಿದ್ದ ಮನೆಯು ಹಾನಿಗೊಳಗಾಗಿದೆ. ಆದರೂ ಅನಿವಾರ್ಯವಾಗಿ ಈ ಕುಟುಂಬ ಇಲ್ಲಿಯೇ ನೆಲೆಸಿದೆ.ಪ್ರವಾಹ ಪೀಡಿತ ಕುಟುಂಬಗಳಿಗೆ ಸರ್ಕಾರ ಘೋಷಿಸಿರುವ ಕನಿಷ್ಠ ₹10 ಸಾವಿರ ಕೂಡ ತಲುಪಿಲ್ಲ ಎಂದು ಜೋಸೆಫ್ ಅಳಲು ತೋಡಿಕೊಂಡಿದ್ದಾರೆ.</p>.<p>ಪ್ರವಾಹಪೀಡಿತ ಪ್ರದೇಶಗಳನ್ನು ಕ್ಷಿಪ್ರಗತಿಯಲ್ಲಿ ರಿಪೇರಿ ಮಾಡುತ್ತಿರುವುದಾಗಿ ಕೇರಳ ಸರ್ಕಾರ ಹೇಳಿಕೊಂಡ ಬೆನ್ನಲ್ಲೇ ಈ ಘಟನೆ ನಡೆದಿದೆ. ದಂಪತಿಯ ಈ ಆರೋಪವನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆ.</p>.<p>‘ಜೋಸೆಫ್ ಅವರ ಮನೆಯ ಪೈಕಿ ಶೇಕಡಾ 29ರಷ್ಟು ಭಾಗ ಹಾನಿಗೆ ಒಳಗಾಗಿತ್ತು. ಈಗಿನ ನಿಯಮದ ಪ್ರಕಾರ ₹60ಸಾವಿರ ನೆರವು ನೀಡಲು ಸಾಧ್ಯವಿದೆ. ಈ ಮೊತ್ತ ಪಡೆಯಲು ಅವರು ಸಿದ್ಧರಿಲ್ಲದೇ, ಹೆಚ್ಚುವರಿ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಅರ್ಜಿ, ಪರಿಶೀಲನೆ ಹಂತದಲ್ಲಿದೆ’ ಎಂದುವೆಳ್ಳತೂವಲ್ ಪಂಚಾಯಿತಿಯ ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಜೋಸೆಫ್ ಅವರ ಮನೆಯ ಒಂದು ಭಾಗವನ್ನು ಬಾಡಿಗೆಗೆ ನೀಡಿದ್ದು, ಹಾನಿಗೆ ಒಳಗಾದ ಬಾಡಿಗೆದಾರರಿಗೆ ₹10ಸಾವಿರ ಪರಿಹಾರ ನೀಡಲಾಗಿದೆ. ಪ್ರವಾಹದ ವೇಳೆ ಮನೆಯ ಸುತ್ತಲಿದ್ದ ಮಣ್ಣನ್ನು 173 ಮಾನವದಿನಗಳನ್ನು ಬಳಸಿ ತೆರವುಗೊಳಿಸಲಾಗಿದೆ’ ಎಂದು ತಿಳಿಸಿದರು.</p>.<p>ಜೋಸೆಫ್ ಅವರು ಕೂಲಿ ಕಾರ್ಮಿಕರಾಗಿದ್ದು, ಪತ್ನಿಯ ನೆರವಿನಿಂದ 9 ಕೋಣೆಯ ಸ್ವಂತ ಮನೆಯನ್ನು ನಿರ್ಮಿಸಿಕೊಂಡಿದ್ದರು. ಇವರ ಮಕ್ಕಳು ಮದುವೆಯಾಗಿ, ಬೇರೆ ಕಡೆ ನೆಲೆಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ‘ಕಿಡ್ನಿ ಮಾರಾಟಕ್ಕಿದೆ. ಅಧಿಕಾರಿಗಳಿಗೆ ಲಂಚ ನೀಡಲು ಹಣ ಬೇಕಾಗಿದೆ’</p>.<p>ಈ ರೀತಿಯಬೋರ್ಡ್ವೊಂದನ್ನುಕೇರಳದ ಇಡುಕ್ಕಿ ಜಿಲ್ಲೆಯ ಆದಿಮಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿ ವೆಲ್ಲಾತೋವಾಲ್ ನಿವಾಸಿ ಜೋಸೆಫ್ (72) ತಮ್ಮ ಮನೆಯ ಮುಂದೆ ನೇತುಹಾಕಿದ್ದಾರೆ.</p>.<p>ಕಳೆದ ವರ್ಷ ಕೇರಳ ಜನತೆಯ ನಿದ್ದೆಗಡೆಸಿದ್ದ ಪ್ರವಾಹಕ್ಕೆ ಜೋಸೆಫ್ ದಂಪತಿ ವಾಸವಿದ್ದ ಮನೆಯು ಹಾನಿಗೊಳಗಾಗಿದೆ. ಆದರೂ ಅನಿವಾರ್ಯವಾಗಿ ಈ ಕುಟುಂಬ ಇಲ್ಲಿಯೇ ನೆಲೆಸಿದೆ.ಪ್ರವಾಹ ಪೀಡಿತ ಕುಟುಂಬಗಳಿಗೆ ಸರ್ಕಾರ ಘೋಷಿಸಿರುವ ಕನಿಷ್ಠ ₹10 ಸಾವಿರ ಕೂಡ ತಲುಪಿಲ್ಲ ಎಂದು ಜೋಸೆಫ್ ಅಳಲು ತೋಡಿಕೊಂಡಿದ್ದಾರೆ.</p>.<p>ಪ್ರವಾಹಪೀಡಿತ ಪ್ರದೇಶಗಳನ್ನು ಕ್ಷಿಪ್ರಗತಿಯಲ್ಲಿ ರಿಪೇರಿ ಮಾಡುತ್ತಿರುವುದಾಗಿ ಕೇರಳ ಸರ್ಕಾರ ಹೇಳಿಕೊಂಡ ಬೆನ್ನಲ್ಲೇ ಈ ಘಟನೆ ನಡೆದಿದೆ. ದಂಪತಿಯ ಈ ಆರೋಪವನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆ.</p>.<p>‘ಜೋಸೆಫ್ ಅವರ ಮನೆಯ ಪೈಕಿ ಶೇಕಡಾ 29ರಷ್ಟು ಭಾಗ ಹಾನಿಗೆ ಒಳಗಾಗಿತ್ತು. ಈಗಿನ ನಿಯಮದ ಪ್ರಕಾರ ₹60ಸಾವಿರ ನೆರವು ನೀಡಲು ಸಾಧ್ಯವಿದೆ. ಈ ಮೊತ್ತ ಪಡೆಯಲು ಅವರು ಸಿದ್ಧರಿಲ್ಲದೇ, ಹೆಚ್ಚುವರಿ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಅರ್ಜಿ, ಪರಿಶೀಲನೆ ಹಂತದಲ್ಲಿದೆ’ ಎಂದುವೆಳ್ಳತೂವಲ್ ಪಂಚಾಯಿತಿಯ ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಜೋಸೆಫ್ ಅವರ ಮನೆಯ ಒಂದು ಭಾಗವನ್ನು ಬಾಡಿಗೆಗೆ ನೀಡಿದ್ದು, ಹಾನಿಗೆ ಒಳಗಾದ ಬಾಡಿಗೆದಾರರಿಗೆ ₹10ಸಾವಿರ ಪರಿಹಾರ ನೀಡಲಾಗಿದೆ. ಪ್ರವಾಹದ ವೇಳೆ ಮನೆಯ ಸುತ್ತಲಿದ್ದ ಮಣ್ಣನ್ನು 173 ಮಾನವದಿನಗಳನ್ನು ಬಳಸಿ ತೆರವುಗೊಳಿಸಲಾಗಿದೆ’ ಎಂದು ತಿಳಿಸಿದರು.</p>.<p>ಜೋಸೆಫ್ ಅವರು ಕೂಲಿ ಕಾರ್ಮಿಕರಾಗಿದ್ದು, ಪತ್ನಿಯ ನೆರವಿನಿಂದ 9 ಕೋಣೆಯ ಸ್ವಂತ ಮನೆಯನ್ನು ನಿರ್ಮಿಸಿಕೊಂಡಿದ್ದರು. ಇವರ ಮಕ್ಕಳು ಮದುವೆಯಾಗಿ, ಬೇರೆ ಕಡೆ ನೆಲೆಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>