ರಾಜ್ಯ ಸರ್ಕಾರ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್) ಹಿರಿಯ ಕೋಟ್ಗಳ ಸಮ್ಮುಖದಲ್ಲಿಟಿಟಿ ನಗರ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಟ್ರಯಲ್ಸ್ನಲ್ಲಿ ರಾಮೇಶ್ವರ್ ಸೇರಿ ಒಟ್ಟು ಏಳು ಮಂದಿ ಅಥ್ಲೀಟ್ಗಳು ಓಡಿದ್ದರು. ಈ ವೇಳೆ ರಾಮೇಶ್ವರ್ ಕೊನೆವರಾಗಿ ಓಟ ಮುಗಿಸಿದರು. ಈ ವಿಷಯ ಹಂಚಿಕೊಂಡಿರುವ ಕೇಂದ್ರದ ಯುವಜನ ಮತ್ತು ಕ್ರೀಡಾ ಇಲಾಖೆ ರಾಜ್ಯ ಖಾತೆ ಸಚಿವ ಕಿರಣ್ ರಿಜುಜು, ಯುವ ಓಟಗಾರನಿಗೆ ಸೂಕ್ತ ತರಬೇತಿ ಹಾಗೂ ಸಮಯಾವಕಾಶದ ನೀಡಬೇಕಿದ್ದು, ಅತಿಯಾದ ನಿರೀಕ್ಷೆಯ ಮೂಲಕ ಗುರ್ಜಾರ್ ಮೇಲೆ ಒತ್ತಡ ಹೇರುವುದು ಬೇಡ ಎಂದು ಮನವಿ ಮಾಡಿದ್ದಾರೆ.