ಶಿಶುಮರಣ ಪ್ರಮಾಣ ತಗ್ಗಿಸಲು ಸ್ಥಳೀಯ ವೈದ್ಯರಿಗೆ ಅಗತ್ಯ ಸಲಹೆ ನೀಡಲು ಏಮ್ಸ್ನ ತಜ್ಞ ವೈದ್ಯರು ಮತ್ತು ಆಸ್ಪತ್ರೆಯ ಅಗತ್ಯಗಳ ಅರಿವಿರುವ ಪರಿಣಿತರ ತಂಡ ಕೋಟ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿತು. ಲೋಕಸಭಾ ಸ್ಪೀಕರ್ ಮತ್ತು ಕೋಟ ಕ್ಷೇತ್ರದ ಸಂಸದ ಓಂ ಬಿರ್ಲಾ ಸಹ ನಗರಕ್ಕೆ ಶನಿವಾರ ಭೇಟಿ ನೀಡಿ, ಮಕ್ಕಳನ್ನು ಕಳೆದುಕೊಂಡ ಕುಟುಂಬಗಳಿಗೆ ಸಾಂತ್ವನ ಹೇಳಿದರು.