<p><strong>ಕೊಲ್ಲಂ, ಕೇರಳ (ಪಿಟಿಐ):</strong> ಕೊರೊನಾ ವೈರಸ್ನಿಂದ ಹರಡುವ ಸೋಂಕು ಮಹಾ ಮಾರಕ, ಅದರ ಅಟ್ಟಹಾಸಕ್ಕೆ ಜಗತ್ತೇ ತಲ್ಲಣಸಿದೆ. ಆದರೆ, ಕೇರಳದ ಕೊಲ್ಲಂ ಜಿಲ್ಲೆಯ ಕಡಕ್ಕಲ್ ನಿವಾಸಿ ಅನಿಲನ್ ಎಂಬುವವರು ಕೊರೊನಾ ವೈರಸ್ನ ಪ್ರತಿಕೃತಿ ಮಾಡಿ, ನಿತ್ಯವೂ ಅದಕ್ಕೆ ಪೂಜೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.</p>.<p>ಧರ್ಮಕೋಲ್ನಿಂದ ಈ ವೈರಸ್ನ ಪ್ರತಿಕೃತಿ ನಿರ್ಮಿಸಿರುವ ಅನಿಲನ್ ಅದಕ್ಕೆ ‘ಕೊರೊನಾ ದೇವಿ’ ಎಂದು ಕರೆದಿದ್ದಾರೆ. ‘ಈ ಮಾರಕ ವೈರಸ್ ವಿರುದ್ಧ ಹೋರಾಡುತ್ತಿರುವ ಯೋಧರ ಯೋಗಕ್ಷೇಮಕ್ಕೆ ಪ್ರಾರ್ಥಿಸಿ, ನಿತ್ಯವೂ ಕೊರೊನಾ ದೇವಿಗೆ ಪೂಜೆ ಸಲ್ಲಿಸುತ್ತಿದ್ದೇನೆ’ ಎಂದು ಅನಿಲನ್ ಹೇಳುತ್ತಾರೆ.</p>.<p>‘ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ವೈದ್ಯರು, ಆರೋಗ್ಯ ಕಾರ್ಯಕರ್ತರು ನಿರತರಾಗಿದ್ದರೆ, ಇದಕ್ಕೆ ಪರಿಣಾಮಕಾರಿಯಾದ ಔಷಧಿ ಕಂಡು ಹಿಡಿಯಲು ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ, ಪೌರ ಕಾರ್ಮಿಕರು, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ವಿವಿಧ ವರ್ಗದ ಜನರೂ ಈ ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿದ್ದು, ಅವರೆಲ್ಲರೂ ಸುರಕ್ಷತವಾಗಿರಲಿ’ ಎಂದೂ ಪ್ರಾರ್ಥಿಸುತ್ತೇನೆ ಎನ್ನುತ್ತಾರೆ.</p>.<p>‘ನಾನೂ ಈ ರೀತಿ ಪೂಜೆ ಮಾಡುವುದನ್ನು ನೋಡಿ ಅನೇಕ ಜನ ಅಪಹಾಸ್ಯ ಮಾಡಿದರು. ಆದರೆ, ಜನರಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲು ನಾನು ಆಯ್ಕೆ ಮಾಡಿಕೊಂಡಿರುವ ಮಾರ್ಗ ಇದು’ ಎಂದು ಅವರು ತಮ್ಮ ಪೂಜಾ ಕೈಂಕರ್ಯವನ್ನು ಸಮರ್ಥಿಸಿಕೊಳ್ಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲ್ಲಂ, ಕೇರಳ (ಪಿಟಿಐ):</strong> ಕೊರೊನಾ ವೈರಸ್ನಿಂದ ಹರಡುವ ಸೋಂಕು ಮಹಾ ಮಾರಕ, ಅದರ ಅಟ್ಟಹಾಸಕ್ಕೆ ಜಗತ್ತೇ ತಲ್ಲಣಸಿದೆ. ಆದರೆ, ಕೇರಳದ ಕೊಲ್ಲಂ ಜಿಲ್ಲೆಯ ಕಡಕ್ಕಲ್ ನಿವಾಸಿ ಅನಿಲನ್ ಎಂಬುವವರು ಕೊರೊನಾ ವೈರಸ್ನ ಪ್ರತಿಕೃತಿ ಮಾಡಿ, ನಿತ್ಯವೂ ಅದಕ್ಕೆ ಪೂಜೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.</p>.<p>ಧರ್ಮಕೋಲ್ನಿಂದ ಈ ವೈರಸ್ನ ಪ್ರತಿಕೃತಿ ನಿರ್ಮಿಸಿರುವ ಅನಿಲನ್ ಅದಕ್ಕೆ ‘ಕೊರೊನಾ ದೇವಿ’ ಎಂದು ಕರೆದಿದ್ದಾರೆ. ‘ಈ ಮಾರಕ ವೈರಸ್ ವಿರುದ್ಧ ಹೋರಾಡುತ್ತಿರುವ ಯೋಧರ ಯೋಗಕ್ಷೇಮಕ್ಕೆ ಪ್ರಾರ್ಥಿಸಿ, ನಿತ್ಯವೂ ಕೊರೊನಾ ದೇವಿಗೆ ಪೂಜೆ ಸಲ್ಲಿಸುತ್ತಿದ್ದೇನೆ’ ಎಂದು ಅನಿಲನ್ ಹೇಳುತ್ತಾರೆ.</p>.<p>‘ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ವೈದ್ಯರು, ಆರೋಗ್ಯ ಕಾರ್ಯಕರ್ತರು ನಿರತರಾಗಿದ್ದರೆ, ಇದಕ್ಕೆ ಪರಿಣಾಮಕಾರಿಯಾದ ಔಷಧಿ ಕಂಡು ಹಿಡಿಯಲು ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ, ಪೌರ ಕಾರ್ಮಿಕರು, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ವಿವಿಧ ವರ್ಗದ ಜನರೂ ಈ ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿದ್ದು, ಅವರೆಲ್ಲರೂ ಸುರಕ್ಷತವಾಗಿರಲಿ’ ಎಂದೂ ಪ್ರಾರ್ಥಿಸುತ್ತೇನೆ ಎನ್ನುತ್ತಾರೆ.</p>.<p>‘ನಾನೂ ಈ ರೀತಿ ಪೂಜೆ ಮಾಡುವುದನ್ನು ನೋಡಿ ಅನೇಕ ಜನ ಅಪಹಾಸ್ಯ ಮಾಡಿದರು. ಆದರೆ, ಜನರಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲು ನಾನು ಆಯ್ಕೆ ಮಾಡಿಕೊಂಡಿರುವ ಮಾರ್ಗ ಇದು’ ಎಂದು ಅವರು ತಮ್ಮ ಪೂಜಾ ಕೈಂಕರ್ಯವನ್ನು ಸಮರ್ಥಿಸಿಕೊಳ್ಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>