45 ವರ್ಷದ ಲಕ್ಷ್ಮಿ ಎಂಬುವರು ದೀರ್ಘಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದರು. ಆದರೆ ಮಹಿಳೆ ಸಾವಿಗೆ ಅದೇ ಗ್ರಾಮದ ಯುವಕ ಬೋಯಿನಿ ಆಂಜನೇಯಲು ಮಾಡಿದ್ದ ವಾಮಾಚಾರ ಕಾರಣ ಎಂದು ಆಕೆಯ ಸಂಬಂಧಿಕರು ಶಂಕಿಸಿದ್ದರು. ಸ್ಥಳಕ್ಕೆ ಬಂದ ಬೋಯಿನಿಯನ್ನು ಹಿಡಿದು ಥಳಿಸಿ ಸಾಯಿಸಿದ ಸಂಬಂಧಿಕರು, ಮಹಿಳೆಯ ಚಿತೆಗೇ ದೇಹವನ್ನು ಎಸೆದು ಸುಟ್ಟುಹಾಕಿದ್ದರು ಎಂದು ಶಮೀರ್ಪೇಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.