ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಫಂಡ್‍ಗೆ ₹1000 ದೇಣಿಗೆ ನೀಡಿದ ಅಮಿತ್ ಶಾ, ಮೋದಿ 

Last Updated 11 ಫೆಬ್ರುವರಿ 2019, 9:13 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣೆಗಾಗಿ ಪಕ್ಷದ ನಿಧಿಗೆ ದೇಣಿಗೆನೀಡಲು ಧನಿಕರನ್ನು ಅವಲಂಬಿಸುವುದನ್ನು ಕಡಿಮೆ ಮಾಡಬೇಕು ಎಂಬ ಸಂದೇಶವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ತಮ್ಮ ಪಕ್ಷದ ಕಾರ್ಯಕರ್ತರಿಗೆ ನೀಡಿದ್ದಾರೆ.

ದೀನ್ ದಯಾಳ್ ಉಪಾಧ್ಯಾಯ್ ಅವರ 51ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, ಪ್ರಾಮಾಣಿಕತೆಯಲ್ಲಿ ಬಿಜೆಪಿ ಇತರ ಪಕ್ಷಗಳಿಗೆ ಮಾದರಿಯಾಗಬೇಕು ಎಂದಿದ್ದಾರೆ.

ಪಕ್ಷವೊಂದು ತಮ್ಮ ಕಾರ್ಯಕರ್ತರ ದೇಣಿಗೆಯಿಂದಲೇ ಕಾರ್ಯವೆಸಗಬೇಕೇ ವಿನಾ, ಧನಿಕರ, ಬಿಲ್ಡರ್‌ಗಳ ಮತ್ತು ಕಪ್ಪುಹಣ ಹೊಂದಿರುವವ ದೇಣಿಗೆಯಿಂದಲ್ಲ ಎಂದು ಶಾ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುವುದಕ್ಕಿಂತ ಮುನ್ನ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಪಕ್ಷದ ಫಂಡ್‍ಗೆ ₹1000 ದೇಣಿಗೆ ನೀಡಿದ್ದಾರೆ.

ನೀವು ಕೂಡಾ ಪಕ್ಷದ ಫಂಡ್‍ಗೆ ದೇಣಿಗೆ ನೀಡಬೇಕು. NaMo App ಮೂಲಕ ಇದು ಸುಲಭ. ನಾನೂ ದೇಣಿಗೆ ನೀಡಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT