<p><strong>ನವದೆಹಲಿ</strong>: ದೆಹಲಿ ವಿಧಾನಸಭೆಗೆ ಈ ಬಾರಿ ಎಂಟು ಮಹಿಳಾ ಶಾಸಕಿಯರು ಆಯ್ಕೆಯಾಗಿದ್ದಾರೆ. ಕಳೆದ ಬಾರಿ 6 ಶಾಸಕಿಯರಿದ್ದರು. ಈ ಬಾರಿ ಆಯ್ಕೆಯಾದವರಲ್ಲಿ ನಾಲ್ವರು ಮೊದಲ ಬಾರಿ ಗೆಲುವು ಸಾಧಿಸಿದವರಾಗಿದ್ದಾರೆ.</p>.<p>ಈ ಎಂಟು ಶಾಸಕಿಯರೂ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದವರಾದ್ದು ಇವರ ಪೈಕಿಅತಿಶಿ ಮೊದಲ ಬಾರಿ ಶಾಸಕಿಯಾಗಿದ್ದಾರೆ. ಡೆಪ್ಯುಟಿ ಸ್ಪೀಕರ್ ಆಗಿದ್ದ ರಾಖಿ ಬಿರ್ಲಾ ಕೂಡಾ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.</p>.<p>ಕಾಂಗ್ರೆಸ್ನಿಂದ ಆಮ್ ಆದ್ಮಿ ಪಕ್ಷಕ್ಕೆ ಬಂದ ರಾಜಕುಮಾರಿ ಧಿಲ್ಲೊನ್ಮತ್ತು ಪ್ರೀತಿ ಥೋಮರ್ ವಿಧಾನಸಭೆಗೆ ಆಯ್ಕೆಯಾಗಿರುವ ಹೊಸ ನಾಯಕಿಯಾಗಿದ್ದಾರೆ.</p>.<p>ಎಎಪಿಶಾಸಕ ಜಗದೀಪ್ ಸಿಂಗ್ ಅವರ ಕ್ಷೇತ್ರವಾಗಿದ್ದ ಹರಿನಗರ್ನಲ್ಲಿ ಸ್ಪರ್ಧಿಸಿದ್ದ ಧಿಲ್ಲೋನ್, ಬಿಜೆಪಿಯ ತೇಜಿಂದರ್ ಪಾಲ್ ಸಿಂಗ್ ಬಗ್ಗಅವರನ್ನು ಪರಾಭವಗೊಳಿಸಿದ್ದಾರೆ. ಅದೇ ವೇಳೆ ಥೋಮರ್ ಅವರು ತ್ರಿನಗರದಲ್ಲಿ ಮತ್ತು ಧಾವಂತಿ ಚಂದೇಲಾ ಅಲರು ರಜೌರಿ ಗಾರ್ಡನ್ನಿಂದ ಗೆಲುವು ಸಾಧಿಸಿದ್ದಾರೆ.</p>.<p>ಹಾಲಿ ಶಾಸಕಿಯರಾದ ಪ್ರಮೀಳಾ ತೋಕಾಸ್, ಭಾವನಾ ಗೌರ್ ಮತ್ತು ಬಂದನಾ ಕುಮಾರಿ ಕೂಡಾ ಗೆಲುವಿನ ನಗೆ ಬೀರಿದ್ದಾರೆ.</p>.<p>ದೆಹಲಿಯ ಶಿಕ್ಷಣ ವ್ಯವಸ್ಥೆಗೆ ಹೊಸ ರೂಪ ನೀಡಲು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಯಾಗಿದ್ದ ಅತಿಶಿಯವರೇ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರಿಗೆ ಸಹಾಯ ಮಾಡಿದ್ದರು.ಹೀಗಿರುವಾಗಕೇಜ್ರಿವಾಲ್ ಸಚಿವ ಸಂಪುಟದಲ್ಲಿ ಇವರಿಗೆ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇದೆ.<br />ಲೋಕಸಭಾ ಚುನಾವಣೆಯಲ್ಲಿಪೂರ್ವ ದೆಹಲಿಯಲ್ಲಿ ಸ್ಪರ್ಧಿಸಿದ್ದ ಅತಿಶಿಯನ್ನು ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ಪರಾಭವಗೊಳಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ದೆಹಲಿ ವಿಧಾನಸಭೆಗೆ ಈ ಬಾರಿ ಎಂಟು ಮಹಿಳಾ ಶಾಸಕಿಯರು ಆಯ್ಕೆಯಾಗಿದ್ದಾರೆ. ಕಳೆದ ಬಾರಿ 6 ಶಾಸಕಿಯರಿದ್ದರು. ಈ ಬಾರಿ ಆಯ್ಕೆಯಾದವರಲ್ಲಿ ನಾಲ್ವರು ಮೊದಲ ಬಾರಿ ಗೆಲುವು ಸಾಧಿಸಿದವರಾಗಿದ್ದಾರೆ.</p>.<p>ಈ ಎಂಟು ಶಾಸಕಿಯರೂ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದವರಾದ್ದು ಇವರ ಪೈಕಿಅತಿಶಿ ಮೊದಲ ಬಾರಿ ಶಾಸಕಿಯಾಗಿದ್ದಾರೆ. ಡೆಪ್ಯುಟಿ ಸ್ಪೀಕರ್ ಆಗಿದ್ದ ರಾಖಿ ಬಿರ್ಲಾ ಕೂಡಾ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.</p>.<p>ಕಾಂಗ್ರೆಸ್ನಿಂದ ಆಮ್ ಆದ್ಮಿ ಪಕ್ಷಕ್ಕೆ ಬಂದ ರಾಜಕುಮಾರಿ ಧಿಲ್ಲೊನ್ಮತ್ತು ಪ್ರೀತಿ ಥೋಮರ್ ವಿಧಾನಸಭೆಗೆ ಆಯ್ಕೆಯಾಗಿರುವ ಹೊಸ ನಾಯಕಿಯಾಗಿದ್ದಾರೆ.</p>.<p>ಎಎಪಿಶಾಸಕ ಜಗದೀಪ್ ಸಿಂಗ್ ಅವರ ಕ್ಷೇತ್ರವಾಗಿದ್ದ ಹರಿನಗರ್ನಲ್ಲಿ ಸ್ಪರ್ಧಿಸಿದ್ದ ಧಿಲ್ಲೋನ್, ಬಿಜೆಪಿಯ ತೇಜಿಂದರ್ ಪಾಲ್ ಸಿಂಗ್ ಬಗ್ಗಅವರನ್ನು ಪರಾಭವಗೊಳಿಸಿದ್ದಾರೆ. ಅದೇ ವೇಳೆ ಥೋಮರ್ ಅವರು ತ್ರಿನಗರದಲ್ಲಿ ಮತ್ತು ಧಾವಂತಿ ಚಂದೇಲಾ ಅಲರು ರಜೌರಿ ಗಾರ್ಡನ್ನಿಂದ ಗೆಲುವು ಸಾಧಿಸಿದ್ದಾರೆ.</p>.<p>ಹಾಲಿ ಶಾಸಕಿಯರಾದ ಪ್ರಮೀಳಾ ತೋಕಾಸ್, ಭಾವನಾ ಗೌರ್ ಮತ್ತು ಬಂದನಾ ಕುಮಾರಿ ಕೂಡಾ ಗೆಲುವಿನ ನಗೆ ಬೀರಿದ್ದಾರೆ.</p>.<p>ದೆಹಲಿಯ ಶಿಕ್ಷಣ ವ್ಯವಸ್ಥೆಗೆ ಹೊಸ ರೂಪ ನೀಡಲು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಯಾಗಿದ್ದ ಅತಿಶಿಯವರೇ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರಿಗೆ ಸಹಾಯ ಮಾಡಿದ್ದರು.ಹೀಗಿರುವಾಗಕೇಜ್ರಿವಾಲ್ ಸಚಿವ ಸಂಪುಟದಲ್ಲಿ ಇವರಿಗೆ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇದೆ.<br />ಲೋಕಸಭಾ ಚುನಾವಣೆಯಲ್ಲಿಪೂರ್ವ ದೆಹಲಿಯಲ್ಲಿ ಸ್ಪರ್ಧಿಸಿದ್ದ ಅತಿಶಿಯನ್ನು ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ಪರಾಭವಗೊಳಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>