ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಆಡಳಿತದ ಯಶಸ್ಸಿನ ಹಿಂದೆ ಇರುವುದು ಅಧಿಕಾರಿ ವರ್ಗದ ಶ್ರಮ. ಅವಿಭಜಿತ ಆಂಧ್ರ ಪ್ರದೇಶದಲ್ಲಿ 1994ರಿಂದ ಎರಡು ಅವಧಿ ಆಡಳಿತ ನಡೆಸಿದ್ದಾಗ ಅಧಿಕಾರಿ ವರ್ಗವನ್ನೇ ನೆಚ್ಚಿಕೊಂಡಿದ್ದರು ನಾಯ್ಡು. ಇವರನ್ನು ಆಗ ಬಾಬುಗಳ (ಅಧಿಕಾರಿಗಳ) ಬಾಬು ಎಂದೂ ಕರೆಯುತ್ತಿದ್ದರಂತೆ! ಆಡಳಿತ, ರಾಜಕೀಯ ಸಲಹೆಗಳಿಗಾಗಿ ಅಧಿಕಾರಿಗಳ ತಂಡವನ್ನೇ ಕಟ್ಟಿಕೊಂಡಿದ್ದಾರೆ.